ಬಂದರು ಕಾಮಗಾರಿಗೆ ಸಿಆರ್‌ಜಡ್ ಅನುಮತಿ

blank

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

blank

ಮರವಂತೆಯ ಹೊರಬಂದರಿನ ಎರಡನೇ ಹಂತದ ಕಾಮಗಾರಿಯು ಸಿಆರ್‌ಜಡ್ ಕಾರಣದಿಂದ 3 ವರ್ಷಗಳಿಂದ ನನೆಗುದಿಗೆ ಬಿದ್ದಂತಾಗಿದ್ದು, ಕೊನೆಗೂ ಕಾಮಗಾರಿಗೆ ಸಿಆರ್‌ಜಡ್ ಅನುಮತಿ ಸಿಕ್ಕಿದೆ.

ಕೇರಳ ಮಾದರಿಯ ಮರವಂತೆ ಹೊರಬಂದರಿನ (ಔಟ್ ಡೋರ್) ಎರಡನೇ ಹಂತದ ಕಾಮಗಾರಿಗೆ 3 ವರ್ಷ ಹಿಂದೆಯೇ ಸರ್ಕಾರದಿಂದ 85 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಆದರೆ ಸಿಆರ್‌ಜಡ್ ಅನುಮತಿ ಸಿಗದಿರುವ ಕಾರಣ ಕಾಮಗಾರಿ ಆರಂಭಿಸಲು ಸಮಸ್ಯೆಯಾಗಿತ್ತು. ಕಳೆದೊಂದು ವರ್ಷದಿಂದ ಬಂದರು ಮತ್ತು ಮೀನುಗಾರಿಕಾ ಇಲಾಖೆಯು ಸಿಆರ್‌ಜಡ್ ಅನುಮತಿ ಸಿಗಲು ಕರಾವಳಿ ನಿರ್ವಹಣಾ ಯೋಜನೆ ನಕ್ಷೆ ಸಹಿತ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು, ಈಗ ಸಿಆರ್‌ಝಡ್‌ನಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ.

ಸುಮಾರು 5 ಸಾವಿರದಷ್ಟು ಮಂದಿಗೆ ಈ ಮರವಂತೆ ಬಂದರು ಜೀವನಾಧಾರವಾಗಿದ್ದು, ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡರೆ ಹಲವು ಸಮಸ್ಯೆಗಳು ಕೊನೆಗೊಳ್ಳಲಿವೆ. ಕಾಮಗಾರಿ ಪೂರ್ಣಗೊಳ್ಳಲಿದ್ದರೆ ಸೈಕ್ಲೋನ್, ವಿಪರೀತ ಗಾಳಿ, ಅಲೆಗಳ ಅಬ್ಬರದಿಂದ ದೋಣಿಗಳು ಬಂದರಿಗೆ ಆಗಮಿಸಲು ಹಾಗೂ ತೆರಳಲು ತೊಂದರೆಯಾಗುತ್ತವೆ. ಪ್ರಸ್ತುತ ಬಂದರಿನ ಕಾಮಗಾರಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.

ಅಂತೂ ಇಂತು ಕೊನೆಗೂ ಎರಡನೇ ಹಂತದ ಕಾಮಗಾರಿಗೆ ಸಿಆರ್‌ಝಡ್ ಅನುಮತಿ ಸಿಕ್ಕಿರುವುದು ಮೀನುಗಾರರೆಲ್ಲರಿಗೂ ಸಂತಸವಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು. ಮೀನುಗಾರರ ಬೇಡಿಕೆಯಂತೆ ಉತ್ತರ ಭಾಗದ ಬದಲು ಮಧ್ಯದಿಂದ ದೋಣಿಗಳು ಒಳ ಬರಲು ಅವಕಾಶ ನೀಡುವಂತೆ ಯೋಜನೆ ಸಿದ್ಧಪಡಿಸಿದ್ದು, ಅದರಂತೆ ಕಾಮಗಾರಿ ಆಗಲಿ.
-ಮೋಹನ್ ಖಾರ್ವಿ ಮರವಂತೆ, ಮೀನುಗಾರ ಮುಖಂಡ

ಅಬ್ದುಲ್ ಕಲಾಂ ಪ್ರಶಸ್ತಿಗೆ ಬಸವರಾಜ್ ಶೆಟ್ಟಿಗಾರ್ ಆಯ್ಕೆ

ನಮ್ಮೆಲ್ಲರ ಕಾಯುವ ಶಕ್ತಿ, ಸತ್ಯದ ಅರಿವಾಗಿದೆ…

 

Share This Article
blank

ಹನಿ-ಹನಿ ಮೂತ್ರ ಬರುತ್ತಿದ್ರೆ ಈ ಅಂಗಕ್ಕೆ ಹಾನಿಯಾಗಿದೆ ಎಂದರ್ಥ!; ಅನಿಯಂತ್ರಿತ ಮೂತ್ರದ ಸಮಸ್ಯೆಗೆ ಕಾರಣ ಏನು? | Urinary

Urinary : ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಮೂತ್ರ ಸಂಬಂಧಿತ ಸಮಸ್ಯೆಗಳು ಭಾಧಿಸುತ್ತವೆ. ಅನೇಕ ಜನರಿಗೆ ಮೂತ್ರ…

ಕಣ್ಣಿನ ಪೊರೆ ತುಂಬಾ ಹಾನಿಕಾರಕವೇ? ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… Cataract

Cataract : ಕಣ್ಣಿನ ಪೊರೆಯು ಸಾಮಾನ್ಯವಾಗಿ ಕಂಡುಬರುವ ಕಣ್ಣಿನ ಕಾಯಿಲೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ವಯಸ್ಸಾದಂತೆ ಇದು…

blank