ಬೆಂಗಳೂರು: ಪ್ರಾಯೋಗಿಕ ಕಲಿಕೆ ಮತ್ತು ಸಮಗ್ರ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಹಾಯ್-ಕಲ್ಪಾ ಗ್ರೂಪ್ ಆಫ್ ಸ್ಕೂಲ್ಸ್ಗೆ ಭಾರತದ ಖ್ಯಾತ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರು ಪಾಲುದಾರರಾಗಿದ್ದಾರೆ ಮತ್ತು ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ಸಹಭಾಗಿತ್ವವು ಶೈಕ್ಷಣಿಕ, ಶಿಸ್ತು ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ಶ್ರೇಷ್ಠತೆಗಾಗಿ ಹಾಯ್-ಕಲ್ಪಾದ ಬದ್ಧತೆಯನ್ನು ಇನ್ನಷ್ಟು ಬಲವರ್ಧನೆಗೊಳಿಸುತ್ತದೆ.
ಈ ಪಾಲುದಾರಿಕೆ ಮೂಲಕ ಕ್ರೀಡಾಪಟುವಾಗಿ ಚಾಹಲ್ ಅವರ ಸ್ಫೂರ್ತಿದಾಯಕ ಪ್ರಯಾಣವು ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕ್ರೀಡಾ ಮನೋಭಾವದ ಮೌಲ್ಯಗಳನ್ನು ಹೊಂದಲು ಸಹಕಾರಿಯಾಗಲಿದೆ ಎಂದು ಹಾಯ್-ಕಲ್ಪಾ ತಿಳಿಸಿದೆ. ಜಾಗತಿಕ ಕ್ರಿಕೆಟ್ ಲೋಕದ ಐಕಾನ್ ಮತ್ತು ಯುವ ಸಮುದಾಯಕ್ಕೆ ರೋಲ್ಮಾಡೆಲ್ ಆಗಿ, ಶಾಲೆಯೊಂದಿಗೆ ಚಾಹಲ್ ಅವರ ಪಾಲುದಾರಿಕೆಯು ಕ್ರೀಡೆ-ಸಂಯೋಜಿತ ಕಲಿಕೆ, ನಾಯಕತ್ವ ಮತ್ತು ಪಾತ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಚಾಹಲ್ ಅವರು ವಿಶೇಷ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರೇರಣಾದಾಯಕ ಮಾತುಗಳನ್ನಾಡಿದರು. ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ಅವರು, ಶಿಕ್ಷಣ ಮತ್ತು ಕ್ರೀಡೆಗಳು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶೈಕ್ಷಣಿಕ ಉತ್ಕೃಷ್ಣತೆ ಮತ್ತು ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ಪೋಷಿಸಲು ಬದ್ಧವಾಗಿರುವ ಸಂಸ್ಥೆಯಾಗಿರುವ ಹಾಯ್-ಕಲ್ಪಾ ಗ್ರೂಪ್ ಆಫ್ ಸ್ಕೂಲ್ಸ್ ಜತೆಗೆ ಸೇರಲು ನಾನು ಉತ್ಸುಕನಾಗಿದ್ದೇನೆ. ಭಾರತದಾದ್ಯಂತ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಇದರ ಭಾಗವಾಗಿರುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಾಯ್-ಕಲ್ಪಾ ಗ್ರೂಪ್ ಆಫ್ ಸ್ಕೂಲ್ಸ್ನ ಸಂಸ್ಥಾಪಕ ಮತ್ತು ನಿರ್ದೇಶಕ ಶಾಲಿನಿ ಶರ್ಮ ಮತ್ತು ವಿಕಾಶ್ ಶರ್ಮ ಅವರು, ಯಜುವೇಂದ್ರ ಚಾಹಲ್ ನಮ್ಮ ವಿದ್ಯಾರ್ಥಿಗಳಲ್ಲಿ ನಾವು ಆಳವಾಗಿ ತುಂಬುವ ಶ್ರೇಷ್ಠತೆ ಮತ್ತು ನಿರ್ಣಯದ ಮನೋಭಾವವನ್ನು ಸಾಕಾರಗೊಳಿಸಿದ್ದಾರೆ. ಹಾಯ್-ಕಲ್ಪಾ ಅವರೊಂದಿಗಿನ ಒಡನಾಟವು ಯುವ ಮನಸ್ಸುಗಳನ್ನು ದೊಡ್ಡ ಕನಸು ಕಾಣಲು, ಶ್ರಮವಹಿಸಿ ಕೆಲಸ ಮಾಡಲು ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರೇಪಣೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಎಂಐ ಕೇಪ್ಟೌನ್ಗೆ ಎಸ್ಎ20 ಚಾಂಪಿಯನ್ಸ್ ಕಿರೀಟ! ಟಿ20 ಲೀಗ್ಗಳಲ್ಲಿ ಹೊಸ ದಾಖಲೆ ಬರೆದ ಎಂಐ ಫ್ರಾಂಚೈಸಿ