ಹಾಯ್​-ಕಲ್ಪಾ ಗ್ರೂಪ್​ ಆಫ್​ ಸ್ಕೂಲ್ಸ್​ಗೆ ಕ್ರಿಕೆಟಿಗ ಯಜುವೇಂದ್ರ ಚಾಹಲ್​ ಪ್ರಚಾರ ರಾಯಭಾರಿ

blank

ಬೆಂಗಳೂರು: ಪ್ರಾಯೋಗಿಕ ಕಲಿಕೆ ಮತ್ತು ಸಮಗ್ರ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಹಾಯ್​-ಕಲ್ಪಾ ಗ್ರೂಪ್​ ಆಫ್​ ಸ್ಕೂಲ್ಸ್​ಗೆ ಭಾರತದ ಖ್ಯಾತ ಕ್ರಿಕೆಟಿಗ ಯಜುವೇಂದ್ರ ಚಾಹಲ್​ ಅವರು ಪಾಲುದಾರರಾಗಿದ್ದಾರೆ ಮತ್ತು ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ಸಹಭಾಗಿತ್ವವು ಶೈಕ್ಷಣಿಕ, ಶಿಸ್ತು ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ಶ್ರೇಷ್ಠತೆಗಾಗಿ ಹಾಯ್​-ಕಲ್ಪಾದ ಬದ್ಧತೆಯನ್ನು ಇನ್ನಷ್ಟು ಬಲವರ್ಧನೆಗೊಳಿಸುತ್ತದೆ.

ಈ ಪಾಲುದಾರಿಕೆ ಮೂಲಕ ಕ್ರೀಡಾಪಟುವಾಗಿ ಚಾಹಲ್​ ಅವರ ಸ್ಫೂರ್ತಿದಾಯಕ ಪ್ರಯಾಣವು ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕ್ರೀಡಾ ಮನೋಭಾವದ ಮೌಲ್ಯಗಳನ್ನು ಹೊಂದಲು ಸಹಕಾರಿಯಾಗಲಿದೆ ಎಂದು ಹಾಯ್​-ಕಲ್ಪಾ ತಿಳಿಸಿದೆ. ಜಾಗತಿಕ ಕ್ರಿಕೆಟ್​ ಲೋಕದ ಐಕಾನ್​ ಮತ್ತು ಯುವ ಸಮುದಾಯಕ್ಕೆ ರೋಲ್​ಮಾಡೆಲ್​ ಆಗಿ, ಶಾಲೆಯೊಂದಿಗೆ ಚಾಹಲ್​ ಅವರ ಪಾಲುದಾರಿಕೆಯು ಕ್ರೀಡೆ-ಸಂಯೋಜಿತ ಕಲಿಕೆ, ನಾಯಕತ್ವ ಮತ್ತು ಪಾತ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಚಾಹಲ್​ ಅವರು ವಿಶೇಷ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರೇರಣಾದಾಯಕ ಮಾತುಗಳನ್ನಾಡಿದರು. ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ಅವರು, ಶಿಕ್ಷಣ ಮತ್ತು ಕ್ರೀಡೆಗಳು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶೈಕ್ಷಣಿಕ ಉತ್ಕೃಷ್ಣತೆ ಮತ್ತು ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ಪೋಷಿಸಲು ಬದ್ಧವಾಗಿರುವ ಸಂಸ್ಥೆಯಾಗಿರುವ ಹಾಯ್​-ಕಲ್ಪಾ ಗ್ರೂಪ್​ ಆಫ್​ ಸ್ಕೂಲ್ಸ್​ ಜತೆಗೆ ಸೇರಲು ನಾನು ಉತ್ಸುಕನಾಗಿದ್ದೇನೆ. ಭಾರತದಾದ್ಯಂತ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಇದರ ಭಾಗವಾಗಿರುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಾಯ್​-ಕಲ್ಪಾ ಗ್ರೂಪ್​ ಆಫ್​ ಸ್ಕೂಲ್ಸ್​ನ ಸಂಸ್ಥಾಪಕ ಮತ್ತು ನಿರ್ದೇಶಕ ಶಾಲಿನಿ ಶರ್ಮ ಮತ್ತು ವಿಕಾಶ್​ ಶರ್ಮ ಅವರು, ಯಜುವೇಂದ್ರ ಚಾಹಲ್​ ನಮ್ಮ ವಿದ್ಯಾರ್ಥಿಗಳಲ್ಲಿ ನಾವು ಆಳವಾಗಿ ತುಂಬುವ ಶ್ರೇಷ್ಠತೆ ಮತ್ತು ನಿರ್ಣಯದ ಮನೋಭಾವವನ್ನು ಸಾಕಾರಗೊಳಿಸಿದ್ದಾರೆ. ಹಾಯ್​-ಕಲ್ಪಾ ಅವರೊಂದಿಗಿನ ಒಡನಾಟವು ಯುವ ಮನಸ್ಸುಗಳನ್ನು ದೊಡ್ಡ ಕನಸು ಕಾಣಲು, ಶ್ರಮವಹಿಸಿ ಕೆಲಸ ಮಾಡಲು ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರೇಪಣೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಎಂಐ ಕೇಪ್​ಟೌನ್​ಗೆ ಎಸ್​ಎ20 ಚಾಂಪಿಯನ್ಸ್ ಕಿರೀಟ! ಟಿ20 ಲೀಗ್​ಗಳಲ್ಲಿ ಹೊಸ ದಾಖಲೆ ಬರೆದ ಎಂಐ ಫ್ರಾಂಚೈಸಿ

TAGGED:
Share This Article

ಬೇಸಿಗೆಯಲ್ಲಿ ತಣ್ಣನೆಯ ನಿಂಬೆ ಜ್ಯೂಸ್ ಕುಡಿಯುವ ಮುನ್ನ ಎಚ್ಚರ..!Lemon Juice

Lemon Juice: ನಿಂಬೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೇಸಿಗೆಯಲ್ಲಿ…

ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಒಮ್ಮೆ ಹೀಗೆ ಮಾಡಿ ನೋಡಿ..Gastric Problem

Gastric Problem: ಪ್ರಸ್ತುತ ಯುಗದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಅನೇಕ ಜನರನ್ನು ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಅನಾರೋಗ್ಯಕರ…

ನಡೆಯುವಾಗ ನಿಮಗೆ ಈ ಸಮಸ್ಯೆಗಳು ಕಾಡುತ್ತಿವೆಯೇ? ಸಕ್ಕರೆ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ! Walking

Walking : ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿನ ಹೊರತಾಗಿಯೂ, ಚಿಕ್ಕವರಿಂದ ಹಿಡಿದು…