More

    ಅಯ್ಯೋ ದುರ್ವಿಧಿಯೇ! ಮದುವೆಯಾದ ಮೂರೇ ದಿನದಲ್ಲಿ ದುರಂತ ಅಂತ್ಯ ಕಂಡ ನವದಂಪತಿ

    ಭುವನೇಶ್ವರ್​: ಮದುವೆಯಾದ ಮೂರೇ ದಿನದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ದುರಂತ ಸಾವಿಗೀಡಾಗಿರುವ ಘಟನೆ ಒಡಿಶಾದ ಬೆರ್ಹಾಂಪುರ್​ನಲ್ಲಿ ನಡೆದಿದೆ.

    ಮೃತರನ್ನು ಬೆರ್ಹಾಂಪುರ್​ ಮೂಲದ ಸಿ.ಎಚ್​. ಪ್ರನೇತಾ ಮತ್ತು ಆಂಧ್ರ ಪ್ರದೇಶದ ಇಚ್ಚಫುರ್​​ ಮೂಲದ ಜಿ ಬೆನು ಎಂದು ಗುರುತಿಸಲಾಗಿದೆ. ಅಪಘಾತದಿಂದ ಗಾಯಗೊಂಡಿದ್ದ ಇಬ್ಬರು ಬೆರ್ಹಾಂಪುರ್​ನಲ್ಲಿರುವ ಎಂಕೆಚಿಜಿ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

    ಫೆ. 10ರಂದು ಪ್ರನೇತಾ ಮತ್ತು ಬೆನು ಮದುವೆಯಾಗಿದ್ದರು. ಇದಾದ ಮೂರು ದಿನಗಳ ಬಳಿಕ ಇಬ್ಬರು ಬೈಕ್​ನಲ್ಲಿ ಬೆರ್ಹಾಂಪುರ್​ಗೆ ಬೈಕ್​ನಲ್ಲಿ ಬರುತ್ತಿದ್ದರು. ಗೋಲಂತರ ಪೊಲೀಸ್ ಠಾಣೆ ಎದುರಿನ ತಿರುವಿನಲ್ಲಿ ಎದುರಿಗೆ ಬಂದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಅವರು ಬದುಕುಳಿಯಲಿಲ್ಲ.

    ಟ್ರ್ಯಾಕ್ಟರ್​ ಚಾಲಕ ಪರಾರಿಯಾಗಿದ್ದು, ಗೋಲಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನವದಂಪತಿಯನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)

    RCB ಸೇರಿದ ಸ್ಮೃತಿ ಎದುರು ಬಾಬರ್​​ಗೆ​ ಅವಮಾನ: ದೀಪ್ತಿ ಶರ್ಮಾ ಮುಂದೆಯೂ ಸೋತ ಪಾಕ್​ ನಾಯಕ

    ಈ ಹುಡುಗಿಯ ಬ್ಯಾಟಿಂಗ್​ ಸ್ಕಿಲ್​ಗೆ ಸಚಿನ್ ಫಿದಾ! BCCI ಕಾರ್ಯದರ್ಶಿ ಜಯ್​ ಶಾ ಹೇಳಿದ್ದಿಷ್ಟು….

    ಹಲೋ ಡಾಕ್ಟರ್; ಹೋಲಿಕೆ ಮಾಡುವುದು ಸಲ್ಲ, ವಾಸ್ತವ ಅರಿಯುವುದು ಸೂಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts