ಬೆಂಗಳೂರು: ಭಾರತೀಯ ಕ್ರಿಕೆಟ್ನಲ್ಲಿ ವೀರೇಂದ್ರ ಸೆಹ್ವಾಗ್ ಬಳಿಕ ತ್ರಿಶತಕ ಸಿಡಿಸಿದ ಏಕೈಕ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆ ಹೊಂದಿದ್ದರೂ ಕನ್ನಡಿಗ ಕರುಣ್ ನಾಯರ್, 2017ರಲ್ಲಿ ಕೇವಲ 6 ಟೆಸ್ಟ್ ಪಂದ್ಯಗಳನ್ನು ಆಡಿದ ಬಳಿಕ ಭಾರತ ತಂಡದಿಂದ ಹೊರಬಿದ್ದಿದ್ದರು. ನಂತರ ದೇಶೀಯ ಕ್ರಿಕೆಟ್ಗೆ ಮರಳಿದ ಅವರು ತೀವ್ರ ರನ್ಬರ ಎದುರಿಸಿದ್ದರಿಂದ 2022ರಲ್ಲಿ ಕರ್ನಾಟಕ ತಂಡದಿಂದಲೂ ಹೊರಬಿದ್ದಿದ್ದರು. ಇದರಿಂದಾಗಿ ಕರುಣ್ ನಾಯರ್ರ ಕ್ರಿಕೆಟ್ ಜೀವನ ಬಹುತೇಕ ಮುಗಿದೇ ಹೋಯಿತು ಎಂದು ಎಲ್ಲರೂ ಅಂದುಕೊಂಡಿದ್ದರು.
ಕ್ರಿಕೆಟ್ ಆಡುವ ಅವಕಾಶ ಸಿಗದೆ ಬೇಸತ್ತಿದ್ದ ಕರುಣ್ ಕೂಡ ಟ್ವಿಟರ್ನಲ್ಲಿ (ಈಗಿನ ಎಕ್ಸ್), “ಡಿಯರ್ ಕ್ರಿಕೆಟ್, ದಯವಿಟ್ಟು ನನಗೆ ಇನ್ನೊಂದು ಅವಕಾಶ ಕೊಡು’ ಎಂದು ಬೇಡಿಕೊಂಡಿದ್ದರು. ಈ ಪ್ರಾರ್ಥನೆಯ ಲವೋ ಎಂಬಂತೆ ಅಲ್ಲಿಂದ ನಂತರ ಕರುಣ್, ಕ್ರಿಕೆಟ್ ಜೀವನ ಮರುಹುಟ್ಟು ಪಡೆಯಲಾರಂಭಿಸಿತು. 2023ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ವಿದರ್ಭಕ್ಕೆ ವಲಸೆ ಹೋದ ಕರುಣ್, ಮತ್ತೆ ಲಯ ಕಂಡುಕೊಳ್ಳಲಾರಂಭಿಸಿದರು. 2024ರಲ್ಲಿ ಕೌಂಟಿ ಕ್ರಿಕೆಟ್ನಲ್ಲೂ ಆಡಿ ಗಮನಸೆಳೆದರು. ಕಳೆದ 2024&25ರ ದೇಶೀಯ ಕ್ರಿಕೆಟ್ ಋತುವಿನಲ್ಲಂತೂ ಅವರು ಹರಿಸಿದ ಭಾರಿ ರನ್ಪ್ರವಾಹ, ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಭಾರತ ತಂಡದ ಬಾಗಿಲು ತೆರೆಯುವಂತೆ ಮಾಡಿತು.
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದಲ್ಲಿ ಮರಳಿ ಸ್ಥಾನ ಸಂಪಾದಿಸಿದ 33 ವರ್ಷದ ಕರುಣ್ ಇದೀಗ ಲೀಡ್ಸ್ನಲ್ಲಿ ಶುಕ್ರವಾರದಿಂದ ನಡೆಯಲಿರುವ ಮೊದಲ ಟೆಸ್ಟ್ನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. ಭಾರತ ತಂಡಕ್ಕೆ ಮರಳಲು ಬಯಸುವ ಹಲವು ಕ್ರಿಕೆಟಿಗರಿಗೆ ಅವರ ಈ ಪುನರಾಗಮನ ಸ್ಫೂರ್ತಿ ಎನಿಸಿದೆ. ಆದರೆ ಭಾರತೀಯ ಕ್ರಿಕೆಟ್ನಲ್ಲಿ ಈ ರೀತಿಯ ಪುನರಾಗಮನ ಹೊಸದಲ್ಲ. ಬಹುತೇಕ ವೃತ್ತೀಜಿವನ ಮುಗಿದೇ ಹೋಯಿತು ಎಂಬ ಹಂತದಿಂದ ಭಾರತ ತಂಡಕ್ಕೆ ಮರಳಿ ಸಾಧನೆ ತೋರಿದ ದೃಷ್ಟಾಂತಗಳು ಹಿಂದೆಯೂ ಇದ್ದವು. ಅಂಥ ಕೆಲ “ಕಂಬ್ಯಾಕ್’ ಸಾಧಕರ ಸಂಪ್ತ ವಿವರ ಇಲ್ಲಿದೆ…
ಮೊಹಿಂದರ್ ಅಮರ್ನಾಥ್
ಆಸ್ಟ್ರೆಲಿಯಾ ಎದುರು 1969ರಲ್ಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರೂ, ಸ್ಥಾನ ಕಾಯ್ದುಕೊಳ್ಳಲಾಗದೆ ಹೊರಬಿದ್ದಿದ್ದ ಮೊಹಿಂದರ್ ಅಮರ್ನಾಥ್, ನಂತರ 7 ವರ್ಷಗಳ ಕಾಲ ಅವಕಾಶ ವಂಚಿತರಾಗಿದ್ದರು. 1976ರಲ್ಲಿ ಮತ್ತೆ ಟೆಸ್ಟ್ ತಂಡಕ್ಕೆ ಪುನರಾಗಮನ ಕಂಡ ಅವರು, ಆಲ್ರೌಂಡರ್ ನಿರ್ವಹಣೆಯೊಂದಿಗೆ ಗಮನಸೆಳೆದರೂ, ಮತ್ತೆ ಒಳಗೆ&ಹೋಗುತ್ತಿದ್ದರು. 1982ರಲ್ಲಿ ಮತ್ತೆ ಪುನರಾಗಮನ ಕಂಡ ಅವರು, 1983ರ ವಿಶ್ವಕಪ್ನಲ್ಲಿ ಭಾರತ ಗೆಲುವಿನ ರೂವಾರಿಯಾಗಿ ಮಿಂಚಿದ್ದರು. ವೃತ್ತೀಜಿವನದಲ್ಲಿ ಹಲವು ಬಾರಿ ಆಯ್ಕೆಗಾರರಿಂದ ಕೊಕ್ ಪಡೆದಿದ್ದ ಮೊಹಿಂದರ್ ಪ್ರತಿ ಬಾರಿಯೂ ಪುನರಾಗಮನ ಕಾಣುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಇವರು ಭಾರತೀಯ ಕ್ರಿಕೆಟ್ನ ಮೊದಲ ಕಂಬ್ಯಾಕ್ ಕಿಂಗ್ ಎನ್ನಬಹುದು.
ಸೌರವ್ ಗಂಗೂಲಿ
ಭಾರತೀಯ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಸೌರವ್ ಗಂಗೂಲಿ 1992ರಲ್ಲಿ ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾದರೂ, 1 ಏಕದಿನ ಪಂದ್ಯವನ್ನಷ್ಟೇ ಆಡಿ ಹೊರಬಿದ್ದಿದ್ದರು. 4 ವರ್ಷಗಳ ಬಳಿಕ ಅವರ ಪುನರಾಗಮನ ಭರ್ಜರಿಯಾಗಿತ್ತು. ಲಾರ್ಡ್ಸ್ನಲ್ಲಿ ಆಡಿದ ಪದಾರ್ಪಣೆಯ ಟೆಸ್ಟ್ನಲ್ಲೇ ಶತಕ ಸಿಡಿಸಿ ಮಿಂಚಿದ್ದರು. 2000ದಲ್ಲಿ ನಾಯಕತ್ವವನ್ನೂ ಅಲಂಕರಿಸಿ ಭಾರತೀಯ ಕ್ರಿಕೆಟ್ನ ದೆಸೆಯನ್ನೇ ಬದಲಾಯಿಸಿದ್ದರು. ಆದರೆ 2005ರಲ್ಲಿ ಗ್ರೆಗ್ ಚಾಪೆಲ್ ಕೋಚ್ ಆದ ಬಳಿಕ ನಾಯಕತ್ವ ಮಾತ್ರವಲ್ಲ ತಂಡದಲ್ಲಿ ಸ್ಥಾನವನ್ನೂ ಕಳೆದುಕೊಂಡಿದ್ದರು. ಇಷ್ಟಕ್ಕೆ ಕುಗ್ಗದ ಅವರು, ಕೌಂಟಿ, ರಣಜಿಯಲ್ಲಿ ರನ್ಮಳೆ ಹರಿಸಿ 2007ರಲ್ಲಿ ಯಶಸ್ವಿ ಪುನರಾಗಮನ ಕಂಡರು. ಪಾಕ್ ವಿರುದ್ಧ ಟೆಸ್ಟ್ನಲ್ಲಿ 239 ರನ್ ಸಿಡಿಸಿದ್ದರು. ಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಸರಣಿಶ್ರೇಷ್ಠರೂ ಆಗಿ ಆ ವರ್ಷದ ವಿಶ್ವಕಪ್ಗೂ ಆಯ್ಕೆಯಾಗಿದ್ದರು. ಕೊನೆಗೆ 2008ರಲ್ಲಿ ತನ್ನ ಇಚ್ಛೆಯಂತೆಯೇ ನಿವೃತ್ತಿ ಹೊಂದಿ ನಿರ್ಗಮಿಸಿದ್ದರು.
ಯುವರಾಜ್ ಸಿಂಗ್
ಭಾರತದ ಅವಳಿ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ 2011ರ ಏಕದಿನ ವಿಶ್ವಕಪ್ ಬಳಿಕ ಕ್ಯಾನ್ಸರ್ಗೆ ತುತ್ತಾದಾಗ ಅವರ ವೃತ್ತೀಜಿವನಕ್ಕೆ ಬಹುದೊಡ್ಡ ಹೊಡೆತ ಎದುರಾಯಿತು. ಆದರೆ ಒಂದೇ ವರ್ಷದಲ್ಲಿ ಕ್ಯಾನ್ಸರ್ ಗೆದ್ದು ಭಾರತ ತಂಡಕ್ಕೆ ಮರಳಿದ್ದಲ್ಲದೆ 2012ರ ಟಿ20 ವಿಶ್ವಕಪ್ನಲ್ಲಿ ಆಡಿದರು. 2014ರ ಟಿ20 ವಿಶ್ವಕಪ್ ಬಳಿಕ ಆಯ್ಕೆಗಾರರ ಕಡೆಗಣನೆಗೆ ಒಳಗಾಗಿ 2015ರ ಏಕದಿನ ವಿಶ್ವಕಪ್ನಿಂದ ವಂಚಿತರಾದ ಯುವರಾಜ್, 2016ರಲ್ಲಿ ಮತ್ತೆ ಪುನರಾಗಮನ ಕಂಡು ಟಿ20 ವಿಶ್ವಕಪ್ ಆಡಿದರು. 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಕೊನೆಯದಾಗಿ ಆಡಿದ್ದರು.
ದಿನೇಶ್ ಕಾರ್ತಿಕ್
ಭಾರತ ಪರ 2004ರಲ್ಲೇ ಪದಾರ್ಪಣೆ ಮಾಡಿದರೂ, ಧೋನಿ ಯಶಸ್ಸಿನ ನಂತರ ದಿನೇಶ್ ಕಾರ್ತಿಕ್ಗೆ ವಿಕೆಟ್ ಕೀಪರ್ ಆಗಿ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಸಿಗಲಿಲ್ಲ. ಅಲ್ಲೊಂದು, ಇಲ್ಲೊಂದು ಅವಕಾಶ ಪಡೆದಿದ್ದ ಅವರಿಗೆ 2019ರ ಏಕದಿನ ವಿಶ್ವಕಪ್ ಬಳಿಕ ಭಾರತ ತಂಡದ ಬಾಗಿಲು ಬಹುತೇಕ ಮುಚ್ಚಿತ್ತು. ಆದರೆ 2022ರ ಐಪಿಎಲ್ನಲ್ಲಿ ಆರ್ಸಿಬಿ ಪರ ಫಿನಿಷರ್ ಆಗಿ ಅಮೋ ನಿರ್ವಹಣೆ ತೋರಿದ ಲವಾಗಿ 37ನೇ ವಯಸ್ಸಿನಲ್ಲಿ ಭಾರತ ಟಿ20 ತಂಡಕ್ಕೆ ಮರಳಿದರು. ಬಳಿಕ 2022ರ ಟಿ20 ವಿಶ್ವಕಪ್ನಲ್ಲೂ ಆಡುವ ಅವಕಾಶ ಸಂಪಾದಿಸಿದ್ದರು.
ಆಶಿಶ್ ನೆಹ್ರಾ
ಏಕದಿನ ಕ್ರಿಕೆಟ್ನಲ್ಲಿ 2001ರಿಂದ 2005ರವರೆಗೆ ಭಾರತ ತಂಡದ ಪ್ರಮುಖ ಭಾಗವಾಗಿದ್ದ ಎಡಗೈ ವೇಗಿ ಆಶಿಶ್ ನೆಹ್ರಾ, ವಿವಿಧ ಗಾಯದ ಸಮಸ್ಯೆಗಳ ನಡುವೆ 4 ವರ್ಷಗಳ ಕಾಲ ಕಡೆಗಣನೆಗೆ ಒಳಗಾಗಿದ್ದರು. 2009ರಲ್ಲಿ ಮತ್ತೆ ಭಾರತ ತಂಡಕ್ಕೆ ಮರಳಿದ ಅವರು 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ನಂತರದಲ್ಲಿ 5 ವರ್ಷಗಳ ಬಳಿಕ ಚುಟುಕು ಕ್ರಿಕೆಟ್ಗೆ ಮರಳಿದ್ದ ಅವರು 2016ರ ಟಿ20 ವಿಶ್ವಕಪ್ನಲ್ಲೂ ಆಡಿದ್ದರು.
ಜಾವಗಲ್ ಶ್ರೀನಾಥ್
ಕಪಿಲ್ ದೇವ್ ನಂತರದಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದ ಕನ್ನಡಿಗ ಜಾವಗಲ್ ಶ್ರೀನಾಥ್, 2001ರಲ್ಲಿ ಜಹೀರ್ ಖಾನ್, ಅಜಿತ್ ಅಗರ್ಕರ್ರಂಥ ವೇಗಿಗಳು ಮಿಂಚಲಾರಂಭಿಸಿದ ಬಳಿಕ ಏಕದಿನ ಕ್ರಿಕೆಟ್ನಿಂದ ಬಹುತೇಕ ನಿವೃತ್ತಿ ಹೊಂದಿದ್ದರು. ಆದರೆ ಆಗಿನ ನಾಯಕ ಸೌರವ್ ಗಂಗೂಲಿ ದೂರವಾಣಿ ಕರೆ ಮಾಡಿ ವಿನಂತಿಸಿದ ಕಾರಣ, 2003ರ ಏಕದಿನ ವಿಶ್ವಕಪ್ಗೆ ಮುನ್ನ ಏಕದಿನ ಕ್ರಿಕೆಟ್ಗೆ ಮತ್ತೆ ಮರಳಿದರು.ವಿಶ್ವಕಪ್ನಲ್ಲಿ 11 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿ ಮಿಂಚಿದ್ದರು ಮತ್ತು ಭಾರತ ಫೈನಲ್ಗೇರಲು ನೆರವಾಗಿದ್ದರು.