ಹಾವೇರಿ: ಆಕಳಿನ ಮೈ ತೊಳೆಸಲೆಂದು ಕೆರೆಗೆ ಹೋದ ಬಾಲಕ ಅಲ್ಲೇ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಇದನ್ನೂ ಓದಿ: ಮಗಳು ದೊಡ್ಡವಳಾಗಿದ್ದಾಳೆ, ಅವಳ ಆರೈಕೆ ಹೇಗೆ ಮಾಡುವುದು? ತಿಂಡಿ ಯಾವುದು ಕೊಡಬೇಕು?
ಜಿಲ್ಲೆಯ ಹಿರಕೇರೂರ ತಾಲೂಕಿನ ಹಂಸಬಾವಿಯಲ್ಲಿ ಈ ಘಟನೆ ನಡೆದಿದೆ. 12 ವರ್ಷದ ಬಾಲಕ ಪವನ್ ಸೋಮವಾರದಂದು ಆಕಳ ಮೈ ತೊಳೆಸಲೆಂದು ದುರ್ಗಾದೇವಿ ಕೆರೆಗೆ ಹೋಗಿದ್ದ. ಆ ವೇಳೆ ಆಕಳು ಬಾಲಕನನ್ನು ಕೆರೆಯೊಳಗೆ ಎಳೆದೊಯ್ದಿದೆ. ಆಕಳನ್ನು ಬಿಡದ ಬಾಲಕ ಕೆರೆಯ ನೀರಿಗೆ ಬಿದ್ದಿದ್ದು, ಸಾವನ್ನಪ್ಪಿದ್ದಾನೆ. ಬಾಲನ ತಲೆ ಮತ್ತು ಮುಖ ಭಾಗದಲ್ಲಿ ಕೆಲ ಗಾಯಗಳೂ ಆಗಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ: ಜೇನು ದಾಳಿಯಲ್ಲಿ ವಿದ್ಯಾರ್ಥಿ ಸಾವು, ಕ್ರಿಕೆಟ್ ನೋಡಲು ಹೋಗಿದ್ದಾಗ ದಾಳಿ
ಸ್ಥಳಕ್ಕೆ ಅಗ್ನಿ ಶಾಮಕದಳ ಹಾಗೂ ಮುಳುಗು ತಜ್ಞರು ಬಂದಿದ್ದು, ಬಾಲಕನ ಮೃತ ದೇಹವನ್ನು ಹೊರತೆಗೆಯಲಾಗಿದೆ. ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ
ತಂಗಿಗಾಗಿ ಅಕ್ಕನನ್ನೇ ನಗ್ನಗೊಳಿಸಿದ! ಸಹಾಯಕ್ಕೆ ಕೇಳಿ ಬರಲಿ ಎಂದು ಕಾದಿದ್ದವನಿಗೆ ಕಾದಿತ್ತು ದೊಡ್ಡ ಶಾಕ್!