More

    ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

    ಚೆನ್ನೈ: ಅಪ್ಪ, ಅಮ್ಮನ ಸಾವು ಎಂತಹ ಮಕ್ಕಳಿಗಾದರೂ ಭರಿಸಲಾಗದ ಆಘಾತ. ಎಷ್ಟೋ ಮಕ್ಕಳು ಅಪ್ಪ ಅಮ್ಮ ಸತ್ತಿದ್ದಾರೆ ಎನ್ನುವುದನ್ನು ಒಪ್ಪದೆಯೇ ಬದುಕುವುದನ್ನು ನೋಡಿದ್ದೇವೆ. ಇಲ್ಲಿಬ್ಬರು ಮಕ್ಕಳು ಕೂಡ ಅದೇ ಭ್ರಮೆಯಲ್ಲಿ ಬದುಕುತ್ತಿದ್ದಾರೆ. 20 ದಿನಗಳ ಹಿಂದೆಯೇ ಸತ್ತಿರುವ ಅಮ್ಮನ ಮೃತದೇಹವನ್ನಿಟ್ಟುಕೊಂಡು, ಅಮ್ಮ ವಾಪಾಸು ಬರುತ್ತಾಳೆ ಎನ್ನುವ ನಂಬಿಕೆಯ ಮೇಲೇ ಬದುಕುತ್ತಿರುವ ಈ ಮಕ್ಕಳ ಕಥೆ ನಿಮ್ಮ ಕಣ್ಣಲ್ಲಿ ನೀರು ತರಿಸೋದು ಗ್ಯಾರಂಟಿ.

    ಇದನ್ನೂ ಓದಿ: ಹೋಟೆಲ್​ನ ಟಾಯ್ಲೆಟ್​ನಲ್ಲಿ ಕೈಚಳಕ ತೋರಿಸಲು ಹೋಗಿ ಸಿಕ್ಕಿಬಿದ್ದ! ಇಂತವರ ಬಗ್ಗೆ ನೀವೂ ಎಚ್ಚರವಾಗಿರಿ!

    ತಮಿಲುನಾಡಿನ ದಿಂಡಿಗಲ್​ನಲ್ಲಿ ಇಂತಹ ಕರುಣಾಜನಕ ಕಥೆ ನಡೆದಿದೆ. ದಿಂಡಿಗಲ್​ ಪೊಲೀಸ್​ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕೆಲಸ ಮಾಡುತ್ತಿದ್ದ ಇಂದಿರಾಗೆ ಕಿಡ್ನಿ ಸಂಬಂಧಿತ ಕಾಯಿಲೆ ಇತ್ತಂತೆ. ಅದೇ ಕಾರಣದಿಂದಾಗಿ ಆಕೆ ನಿವೃತ್ತಿ ಪಡೆಯಲು ಬಯಸಿದ್ದಳು. ಕಳೆದ ಕೆಲ ದಿನಗಳ ಹಿಂದೆ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದಳು. ಅದಾದ ನಂತರ ಸುಮಾರಷ್ಟು ದಿನ ಆಕೆ ಠಾಣೆಗೆ ಬಂದಿಲ್ಲ. ಇಂದಿರಾ ಏಕಾಗಿ ಬಂದಿಲ್ಲ ಎಂದು ತಿಳಿಯಲು ಆಕೆಯ ಮನೆಗೆ ಬಂದ ಸಹೋದ್ಯೋಗಿಗೆ ಶಾಕ್​ ಕಾದಿತ್ತು.

    ಇಂದಿರಾ ಮನೆಗೆ ಆಕೆ ಬಂದಾಗ ಆಕೆಯ 13 ವರ್ಷದ ಒಬ್ಬ ಮಗ ಮತ್ತು 9 ವರ್ಷದ ಮಗಳು ಅವಳಿಗೆ ಎದುರಾಗಿದ್ದಾಳೆ. ಅಮ್ಮ ಎಲ್ಲಿ ಎಂದು ಅವರನ್ನು ಆಕೆ ಕೇಳಿದ್ದಕ್ಕೆ, ಅಮ್ಮ ಮಲಗಿರುವುದಾಗಿ ಮಕ್ಕಳು ಉತ್ತರಿಸಿದ್ದಾರೆ. ಅಮ್ಮ ಏಳುವುದಿಲ್ಲ, ಎದ್ದರೆ ದೇವರು ಶಾಪ ಕೊಡುತ್ತಾರೆ ಎಂದು ಅವರು ತಿಳಿಸಿದ್ದಾರೆ. ಮನೆಯೊಳಗಿನಿಂದ ದುರ್ವಾಸನೆ ಬರುತ್ತಿದ್ದದ್ದನ್ನು ಗಮನಿಸಿದ ಸಹೋದ್ಯೋಗಿಗೆ ಅಲ್ಲಿ ಏನೋ ಅನಾಹುತವಾಗಿರುವ ಕುರುಹು ಸಿಕ್ಕಿದೆ. ತಕ್ಷಣ ಈ ವಿಚಾರದಲ್ಲಿ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾಳೆ.

    ಇದನ್ನೂ ಓದಿ: ಬ್ರಿಟನ್​ ದಂಪತಿಯ ಹಣದಾಸೆಗೆ ಬಲಿಯಾಯಿತು ಭಾರತದ ಕೂಸು! ದತ್ತು ಪಡೆದ ದಂಪತಿ ಹೀಗಾ ಮಾಡೋದು?

    ಮನೆಗೆ ಬಂದ ಪೊಲೀಸರಿಗೆ ಇಂದಿರಾಳ ಶವವನ್ನು ಹಾಸಿಗೆ ಮೇಲೆ ಮಲಗಿರಿಸಿರುವುದು ಕಂಡಿದೆ. ಆಕೆಯ ಸುತ್ತ ಮುತ್ತ ಪೂಜಾ ಸಾಮಾಗ್ರಿಗಳನ್ನು ಇಟ್ಟಿರುವುದೂ ಕಾಣಿಸಿದೆ. ಮಕ್ಕಳ ಜತೆ ಒಬ್ಬ ಪೂಜಾರಿ ಮತ್ತು ಇಂದಿರಾಳ ತಂಗಿ ಇದ್ದಿದ್ದನ್ನು ಕಂಡ ಪೊಲೀಸರು ಅವರಿಬ್ಬರನ್ನು ವಿಚಾರಣೆ ನಡೆಸಿದ್ದಾರೆ.

    ವಿಚಾರಣೆಯಲ್ಲಿ ನಿಜ ಘಟನೆ ಹೊರಬಿದ್ದಿದೆ. ಡಿಸೆಂಬರ್​ 7ರಂದು ಇಂದಿರಾ ಸಂಪೂರ್ಣವಾಗಿ ಅಸ್ವಸ್ಥಳಾಗಿದ್ದು, ಕುಸಿದು ಬಿದ್ದಿದ್ದಾಳೆ. ಆದರೆ ಅವಳನ್ನು ಆಸ್ಪತ್ರೆಗೆ ದಾಖಲಿಸಬೇಡಿ ಎಂದು ಸುದರ್ಶನ ಹೆಸರಿನ ಪೂಜಾರಿ ಹೇಳಿದ್ದಾನೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೆ ದೇವರು ಮುನಿಸಿಕೊಳ್ಳುವುದಾಗಿ ಆತ ಹೇಳಿದ್ದಾನೆ. ಅದೇ ದಿನ ಇಂದಿರಾಳ ಪ್ರಾಣವೂ ಹೋಗಿದೆ ಎನ್ನಲಾಗಿದೆ. ಇಂದಿರಾಳ ಆತ್ಮವನ್ನು ವಾಪಾಸು ಕರೆಸುವುದಾಗಿ ಹೇಳಿದ ಸುದರ್ಶನ ಮನೆಯ ಬಾಗಿಲು ಮುಚ್ಚಿಸಿ ಪೂಜೆ ಆರಂಭಿಸಿದ್ದಾನೆ. ಸುಮಾರು 20 ದಿನಗಳ ಕಾಲ ಪೂಜೆ ನಡೆಸಿದ ನಂತರ ಇಂದಿರಾಳ ಸಹೋದ್ಯೋಗಿಯಿಂದಾಗಿ ವಿಚಾರ ಹೊರಬಿದ್ದಿದೆ. ಇದೀಗ ಪೂಜಾರಿ ಮತ್ತು ಇಂದಿರಾಳ ತಂಗಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    2021ರಲ್ಲಿ ಭೂಮಿಯನ್ನ ಡ್ರ್ಯಾಗನ್​ ವಶಪಡಿಸಿಕೊಳ್ಳತ್ತೆ! ಭೀಕರವಾಗಿರುತ್ತೆ ಈ ವರ್ಷ ಎಂದ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ!

    ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts