ರಾಯಪುರ: ಟ್ರಾಫಿಕ್ ಪೇದೆಯೊಬ್ಬರು ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ.ಹಣವನ್ನು ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರ ಪ್ರಾಮಾಣಿಕತೆಗೆ ಮೆಚ್ಚಿ ಇಲಾಖೆಯಿಂದಲೇ ಬಹುಮಾನ ಘೋಷಿಸಲಾಗಿದೆ.
ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್ ತೆರೆದುನೋಡಿದ ಪೇದೆಗೆ ಶಾಕ್ ಆಗಿದೆ. ಬರೀ 200 ಹಾಗೂ 2000 ರೂ. ಮುಖಬೆಲೆಯ ನೋಟುಗಳೇ ಇದ್ದ ಬರೋಬ್ಬರಿ 45 ಲಕ್ಷ ರೂ. ಹಣವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದರು. ಶನಿವಾರ ಬೆಳಗ್ಗೆ ಇಷ್ಟೊಂದು ಹಣವಿದ್ದ ಬ್ಯಾಗ್ ಸಿಕ್ಕಿತ್ತು.
ಇಷ್ಟೊಂದು ಹಣ ಸಿಕ್ಕರೂ ಠಾಣೆಗೆ ಒಪ್ಪಿಸುವ ಮೂಲಕ ಟ್ರಾಫಿಕ್ ಪೇದೆ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಭುಪೇಶ್ ಬಾಘೆಲ್ ಟ್ವೀಟ್ ಮಾಡಿ, ಪೇದೆಯ ಪ್ರಾಮಾಣಿಕತೆಯನ್ನು ಹಾಡಿಹೊಗಳಿದ್ದಾರೆ.
ಟ್ರಾಫಿಕ್ ಕಾನ್ಸ್ಸ್ಟೇಬಲ್ ಆಗಿರುವ ನಿಲಂಬರ್ ಸಿನ್ಹಾ ಅವರು 45 ಲಕ್ಷ ರೂ. ಇದ್ದ ಹಣವನ್ನು ಠಾಣೆಗೆ ಒಪ್ಪಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸುಖನಂದನ್ ರಾಥೋಡ್ ತಿಳಿಸಿದ್ದಾರೆ. ಹಣ ಕಳೆದುಕೊಂಡವರಿಗಾಗಿ ಪತ್ತೆ ಹಚ್ಚಿ ಒಪ್ಪಿಸಲಾಗುವುದು ಎಂದು ಅವರು ತಿಳಿಸಿದ್ದು, ಪೇದೆಯ ಪ್ರಾಮಾಣಿಕತೆಗೆ ಬಹುಮಾನವನ್ನೂ ಘೋಷಿಸಿದ್ದಾರೆ. (ಏಜೆನ್ಸೀಸ್)
ಸೋಲಿನಿಂದ ಕಂಗೆಟ್ಟ ಬಾಲಿವುಡ್: ನೆಲಕಚ್ಚಿತು ಶಂಶೆರಾ, ನಡೆಯಲಿಲ್ಲ ರಣಬೀರ್ ಜಾದೂ!
ನನ್ನ ಜೀವನದಲ್ಲಿ ಶೇ.10ರಷ್ಟು ನೆಮ್ಮದಿ ಉಳಿಯಲಿಲ್ಲ: ಅಚ್ಚರಿ ಹೇಳಿಕೆ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್!