More

    ನನ್ನ ಜೀವನದಲ್ಲಿ ಶೇ.10ರಷ್ಟು ನೆಮ್ಮದಿ ಉಳಿಯಲಿಲ್ಲ: ಅಚ್ಚರಿ ಹೇಳಿಕೆ ನೀಡಿದ ಸೂಪರ್​ ಸ್ಟಾರ್​​ ರಜನಿಕಾಂತ್​!

    ಚೆನ್ನೈ: ಸೂಪರ್​ ಸ್ಟಾರ್ ರಜನಿಕಾಂತ್ ತಮ್ಮ ಜೀವನದ ಬಹುದೊಡ್ಡ ಗುಟ್ಟನ್ನು ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ. ಹೌದು.. ನೂರಾರು ಕೋಟಿ ರೂ. ಸಂಭಾವನೆ ಪಡೆಯುವ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ರಜನಿಕಾಂತ್ ತಮ್ಮ ಜೀವನದಲ್ಲಿ ಪಡೆದಿದ್ದೇನು ಎಂಬ ಬಗ್ಗೆ ಬಹಿರಂಗಪಡಿಸಿದ್ದಾರೆ.

    ಬಸ್​ ಕಂಡಕ್ಟರ್​ ಆಗಿದ್ದ ರಜನಿಕಾಂತ್​​ ಇದೀಗ ಸೂಪರ್​ ಸ್ಟಾರ್​ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ, ನೂರಾರು ಕೋಟಿ ಆಸ್ತಿಯ ಒಡೆಯ, ಇನ್ನೂ ಬಹುಬೇಡಿಕೆಯ ನಟನಾಗಿರುವ ರಜನಿ ಜೀವನದಲ್ಲಿ ಯಾವುದೇ ಕೊರತೆ ಇಲ್ಲ ಎಂದುಕೊಳ್ಳಬಹುದು.ಆದರೀಗ ಸ್ವತಃ ಅವರೇ ಹೇಳುವಂತೆ ಹಣದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ನನ್ನ ಜೀವನದಲ್ಲಿ ಶೇ.10ರಷ್ಟು ಸಂತೋಷ ನೆಮ್ಮದಿ ಉಳಿಯಲಿಲ್ಲ ಎಂದು ಹೇಳಿದ್ದಾರೆ.

    ರಾಜಕೀಯಕ್ಕೂ ಕಾಲಿಡಲಿದ್ದು, ಅಲ್ಲಿಯೂ ಅಗ್ನಿ ಪರೀಕ್ಷೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಅದರಿಂದ ಹಿಂದೆ ಸರಿಯುವ ಮೂಲಕ ತಮಗೂ ರಾಜಕೀಯಕ್ಕೂ ಆಗಿಬರುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದರು. ಸದ್ಯ ಜೈಲರ್​ ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಕೊಟ್ಟಿದ್ದು, ಚಿತ್ರದ ಕಡೆ ಗಮನ ಹರಿಸಿದ್ದಾರೆ. ಕೆಲವು ವರ್ಷಗಳಿಂದ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ತೋರಿರುವ ರಜನಿಕಾಂತ್​ ಆಗ್ಗಾಗ್ಗೆ ಹಿಮಾಲಯಕ್ಕೂ ಹೋಗಿಬರುವುದುಂಟು.

    ‘Happy Successful Life through Kriya Yoga’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ರಜನಿಕಾಂತ್​, ನಾನು ಅದ್ಭುತ ನಟ ಎಂದು ಎಲ್ಲರೂ ಹೇಳುತ್ತಾರೆ. ಇದು ಪ್ರಶಂಸೆಯೋ,ವಿಮರ್ಶೆಯೋ ಗೊತ್ತಾಗುತ್ತಿಲ್ಲ. ಶ್ರೀ ರಾಘವೇಂದ್ರ ಹಾಗೂ ಬಾಬಾ ಇವೆರಡು ನನಗೆ ಸಂತೃಪ್ತಿ ನೀಡಿದ ಸಿನಿಮಾಗಳು. ಈ ಸಿನಿಮಾಗಳನ್ನು ನೋಡಿದ ಮೇಲೆ ಹಲವರು ಹಿಮಾಲಯಕ್ಕೂ ಹೋಗಿ ಬಂದಿದ್ದಾರೆ. ಸಂನ್ಯಾಸಿಗಳಾಗಿ ಬದಲಾಗಿದ್ದಾರೆ. ಆದರೆ ನಾನು ನಟನಾಗಿ ಮಾತ್ರ ಇಲ್ಲೇ ಉಳಿದಿದ್ದೇನೆ ಎಂದಿದ್ದಾರೆ.

    ರಜನಿಕಾಂತ್​ ಅವರ ಈ ಹೇಳಿಕೆಯಿಂದ ಅಭಿಮಾನಿಗಳಲ್ಲಿ ಅಚ್ಚರಿಯುಂಟಾಗಿದೆ. ಒಬ್ಬ ದೊಡ್ಡ ನಟನ ಜೀವನದಲ್ಲಿ ನೆಮ್ಮದಿ ಇಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ. ತಮ್ಮ ಇಬ್ಬರು ಹೆಣ್ಣುಮಕ್ಕಳು ವಿಚ್ಚೇದನ ಪಡೆದಿದ್ದು, ಅವರ ಜೀವನದ ಬಗ್ಗೆ ಸೂಪರ್​ಸ್ಟಾರ್​ಗೆ ಚಿಂತೆ ಇರಬಹುದು ಎಂಬ ಮಾತು ಕೇಳಿಬರುತ್ತಿದೆ. (ಏಜೆನ್ಸೀಸ್​)

    ಪರದೆ ಮೇಲೆ ತನ್ನನ್ನು ತಾನೇ ನೋಡಿಕೊಳ್ಳಲು ಇಷ್ಟವಿಲ್ಲವೆಂದ ದಿಶಾ ಪಠಾನಿ​! ಕಾರಣ ಹೀಗಿದೆ

    ರಣವೀರ್​ ನಗ್ನಾವತಾರ: ಎಲ್ಲರ ಹುಬ್ಬೇರುವಂತಿದೆ ಪತ್ನಿ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts