ಸಮುದ್ರ ಕಿನಾರೆಯಲ್ಲಿ ವಿಷ್ಣುಸಹಸ್ರನಾಮ ಪಠಣ

blank

ಉಡುಪಿ: ಸಮುದ್ರ ಕೊರೆತ ಸುನಾಮಿ ಮೊದಲಾದ ಅಪಾಯವನ್ನು ತಡೆಗಟ್ಟಲು ಅಧ್ಯಾತ್ಮದ ಮೊರಹೋಗುವ ಪ್ರಯತ್ನದ ಭಾಗವಾಗಿ ಕೇರಳದ ಕಣ್ಣೂರಿನಿಂದ ಉಡುಪಿಯ ಶಿರೂರಿನವರೆಗೆ ಸಮುದ್ರ ಕಿನಾರೆಯಲ್ಲಿ ಭಾನುವಾರ 108 ಕೇಂದ್ರಗಳಲ್ಲಿ ಏಕಕಾಲಕ್ಕೆ ಸುಮಾರು 25 ಸಾವಿರ ಜನರಿಂದ ಸಾಯಂಕಾಲ 4 ರಿಂದ 6ರವರೆಗೆ ಎರಡು ಗಂಟೆ ತಲಾ ಆರು ಬಾರಿ ವಿಷ್ಣುಸಹಸ್ರನಾಮಪಾರಾಯಣ ನಡೆಯಿತು.

ಹೆಜಮಾಡಿ, ಪಡುಬಿದ್ರಿ, ಕಾಪು, ಮಲ್ಪೆ, ಪಡುಕೆರೆ, ತೊಟ್ಟಂ, ಬೇಂಗ್ರೆ, ಕೋಡಿ, ಕೋಟೇಶ್ವರ, ತೆಕ್ಕಟ್ಟೆ, ಮಣೂರು, ಸಾಸ್ತಾನ, ನಾಗೂರು, ಕಿರಿಮಂಜೇಶ್ವರ, ಗಂಗೊಳ್ಳಿ, ಉಪು$್ಪಂದ, ಸೋಮೇಶ್ವರ, ಶಿರೂರು ಸೇರಿದಂತೆ 50ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಸಾವಿರಾರು ಜನರು ಸ್ತೋತ್ರ ಪಠಿಸಿದರು. ಸಮುದ್ರರಾಜನಿಗೆ ಕ್ಷೀರಾಭಿಷೆೇಕ ಮಾಡುವ ಮೂಲಕ ಸಮುದ್ರಾಭಿಮುಖವಾಗಿ ಕುಳಿತು ಸ್ತೋತ್ರ ಪಠಣ ಆರಂಭವಾಯಿತು. ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಯಿತು. ಸನಾತನ ಧರ್ಮ, ಗೋವಂಶದ ಮೇಲಿನ ಆಕ್ರಮಣಗಳ ಕೊನೆಗಾಣಲು ಒಕ್ಕೊರಳ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ಕಾರ್ಯಾಧ್ಯಕ್ಷ ಕಟ್ಕೆರೆ ಪ್ರೇಮಾನಂದ ಶೆಟ್ಟಿ , ಸಮಿತಿಯ ಅಧ್ಯಕ್ಷ ಶಶೀಂದ್ರ ಕುಮಾರ್​, ಪ್ರಮುಖರಾದ ಅಣ್ಣಪ್ಪ ಕೋಟೇಶ್ವರ, ಪ್ರಶಾಂತ್​ ಅಂಜಾರು, ರಶ್ಮಿರಾಜ್​, ಸೋಂದಾ ಭಾಸ್ಕರ ಭಟ್​ ಮೊದಲಾದವರು ಉಪಸ್ಥಿತರಿದ್ದರು.

Share This Article

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…