ಉಡುಪಿಯಲ್ಲಿ ರಥಾರೋಹಣಗೈದ ಚಂದ್ರಮೌಳೇಶ್ವರ…

Chandra-1

ರಥಬೀದಿಯ ದೇವಸ್ಥಾನದಲ್ಲಿ ವಾರ್ಷಿಕೋತ್ಸವ

ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಶ್ರೀಗಳ ಉಪಸ್ಥಿತಿ

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ಪುರಾಣ ಪ್ರಸಿದ್ಧ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮೂರು ದಿನಗಳ ವಾರ್ಷಿಕೋತ್ಸವ (ಗೌಣವೋತ್ಸವ) ಸಂಭ್ರಮದಿಂದ ಮಂಗಳವಾರ ಸಂಪನ್ನಗೊಂಡಿತು.

ದೇಗುಲದ ಆಡಳಿತ ಮುಖ್ಯಸ್ಥರೂ ಆದ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು, ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀ ಉಪಸ್ಥಿತಿಯಲ್ಲಿ ನೆರವೇರಿತು. ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.Chandra-3

ದೇವರಿಗೆ ವಿಶೇಷ ಅಲಂಕಾರ

ಚಂದ್ರಮೌಳೇಶ್ವರನ ವಾರ್ಷಿಕೋತ್ಸವದ ನಿಮಿತ್ತ ರಥೋತ್ಸವ ನಡೆಯಿತು. ದೇವರ ಉತ್ಸವ ಮೂರ್ತಿಯ ರಥಾರೋಹಣ ಮಾಡಲಾಯಿತು. ಕಾರ್ಯಕ್ರಮದ ನಿಮಿತ್ತ ದೇವಾಲಯ ಹಾಗೂ ದೇವರನ್ನು ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಸಂಪ್ರದಾಯದಂತೆ ಬಲಿ ಉತ್ಸವ, ರಥ ಶುದ್ಧಿ, ನರ್ತನದೊಂದಿಗೆ ದೇವರ ರಥಾರೋಹಣ ನಡೆಯಿತು. ಅನ್ನಸಂತರ್ಪಣೆ ಅಂಗವಾಗಿ ಪರ್ಯಾಯ ಪುತ್ತಿಗೆ ಉಭಯ ಶ್ರೀಗಳ ನೇತೃತ್ವದಲ್ಲಿ ಪಲ್ಲ ಪೂಜೆ ಜರುಗಿತು.

ದೇಗುಲದ ಅರ್ಚಕರು ವಿಧಿ-ವಿಧಾನ ನೆರವೇರಿಸಿದರು. ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Chandra-4
ಉಡುಪಿಯ ಚಂದ್ರಮೌಳೇಶ್ವರ ದೇಗುಲದಲ್ಲಿ ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀ ಹಾಗೂ ಸುಶ್ರೀಂದ್ರ ಶ್ರೀ ಉಪಸ್ಥಿತಿಯಲ್ಲಿ ವಾರ್ಷಿಕ ರಥಾರೋಹಣ ನೆರವೇರಿತು.

ವಾಡಿಕೆಯಂತೆ ಚಿತ್ರಾನ್ನ ಸೇವೆ

ಮಳೆಗೆ ಸಂಬಂಧಿಸಿ ಚಂದ್ರಮೌಳೇಶ್ವರನಲ್ಲಿ ಭಕ್ತರು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಇಲ್ಲಿದೆ. ಅಕಾಲಿಕ ಮಳೆಯಿಂದ ತೊಂದರೆ ಆದಲ್ಲಿ ನಿವಾರಣಾರ್ಥವಾಗಿ ಚಿತ್ರಾನ್ನ ಸಮರ್ಪಣೆ ಸೇವೆ ಇಲ್ಲಿದ್ದು, ಫೆಂಗಲ್​ ಚಂಡಮಾರುತದಿಂದ ಸೃಷ್ಟಿಯಾಗಿರುವ ಅಕಾಲಿಕ ಮಳೆಯಿಂದ ತೊಂದರೆ ಆಗದಿರಲೆಂದು ದೇವರಿಗೆ ಮಂಗಳವಾರ ಚಿತ್ರಾನ್ನ ಸೇವೆ ಸಲ್ಲಿಸಲಾಯಿತು. ಮಳೆ ಬರದೆ ತೊಂದರೆಯಾದರೆ ಚಂದ್ರಮೌಳೇಶ್ವರನಿಗೆ ಎಳನೀರು ಅಭಿಷೇಕ (ಬೊಂಡಾಭಿಷೇಕ) ಮಾಡುವ ವಾಡಿಕೆಯೂ ಇಲ್ಲಿದೆ.

ಉಡುಪಿ ಹೆಸರಿಗೆ ಕಾರಣನಾದ ಚಂದಿರ!

Chandra-2
ಚಂದ್ರಮೌಳೇಶ್ವರ ದೇವರು.

Chandra-5ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಡುಪಿಯ ಚಂದ್ರಮೌಳೇಶ್ವರ ದೇವಾಲಯ ಪುರಾತನ ದೇಗುಲವಾಗಿದೆ. ಈ ಭಾಗದಲ್ಲಿ ಮೊದಲ ಉತ್ಸವ ಆರಂಭಗೊಳ್ಳುವುದೇ ಇಲ್ಲಿಂದ. ಮಾರ್ಗಶೀರ್ಷ ದ್ವೀತಿಯ ತಿಥಿಯಂದು ಇಲ್ಲಿ ಉತ್ಸವ ನಡೆಯುತ್ತದೆ. ಧ್ವಜಾರೋಹಣದಿಂದ ಮೊದಲ್ಗೊಂಡು ಮೂರುದಿನ ಉತ್ಸವ ನಡೆಯುತ್ತದೆ. ಶಾಪವಿಮೋಚನೆಗಾಗಿ ಶಿವನ ಅನುಗ್ರಹ ಪಡೆಯಲು ಚಂದ್ರನು ಉಡುಪಿಯ ಅಬ್ಜಾರಣ್ಯ (ಈಗಿನ ಪಿಪಿಸಿ ಕಾಲೇಜಿನ ಪ್ರದೇಶ)ದಲ್ಲಿ ತಪಸ್ಸನ್ನು ಮಾಡಿದ ಎಂಬ ಐತಿಹ್ಯವಿದೆ. ‘ಉಡು’ ಎಂದರೆ ನಕ್ಷತ್ರ, ‘ಪ’ ಎಂದರೆ ಅಧಿಪತಿ ಅಥವಾ ಪಾಲಕ ಎನ್ನುವುದು ಸಂಸತದ ಅರ್ಥವಾಗಿದೆ. ನಕ್ಷತ್ರಗಳ ದೊರೆ ‘ಉಡುಪ’ನಿಂದಲೇ ಉಡುಪಿ ಹೆಸರು ಬರಲು ಕಾರಣವಾಗಿದೆ.

Share This Article

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…

ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips

ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…