| ಹರ್ಷವರ್ಧನ್ ಬ್ಯಾಡನೂರು

ಚಿತ್ರ: ಸೂತ್ರಧಾರಿ
ನಿರ್ದೇಶನ: ಕಿರಣ್ ಕುಮಾರ್
ತಾರಾಗಣ: ಚಂದನ್ ಶೆಟ್ಟಿ, ಅಪೂರ್ವ, ನವರಸನ್, ಪ್ರಶಾಂತ್ ನಟನ, ತಬಲಾ ನಾಣಿ, ಸಂಜನಾ ಆನಂದ್ ಮತ್ತಿತರರು.
“100 ಜನ ಅಪರಾಧಿಗಳಿಗೆ ಕ್ಶಿಷೆಆಗದಿದ್ರೂ ಪರ್ವಾಗಿಲ್ಲ. ಆದರೆ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಅಂತ ಕಾನೂನು ಹೇಳುತ್ತೆ. ಆದರೆ, 100 ಜನ ನಿರಪರಾಧಿಗಳಿಗೆ ಶಿಕ್ಷೆ ಆದಮೇಲೇ ಒಬ್ಬ ಅಪರಾಧಿಗೆ ಶಿಕ್ಷೆ ಆಗುತ್ತೆ ಅನ್ನೋದು ವಾಸ್ತವ’ ಎಂದು ಪೊಲೀಸ್ ಅಧಿಕಾರಿ ವಿಜಯ್ (ಚಂದನ್)ಗೆ ಹೇಳುತ್ತಾನೆ ಕಾನ್ಸ್ಟೆಬಲ್ ಕಾಳಿದಾಸ (ನಾಣಿ). ಅದಕ್ಕೆ ಕಾರಣ ಸಾಲು ಸಾಲು ಹೈ ಪ್ರೊೈಲ್ ವ್ಯಕ್ತಿಗಳ ಅಪಹರಣ ಪ್ರಕರಣ. ಆದರೆ, ಅಲ್ಲೊಂದು ಟ್ವಿಸ್ಟ್ ಇದೆ. ಅದೇನೆಂದರೆ ಕಿಡ್ನ್ಯಾಪ್ ಆದವರು ಎರಡು ದಿನಗಳ ನಂತರ ರಿಲೀಸ್ ಆಗಿ, ಮನೆ ಸೇರಿದ ಎರಡು ತಾಸಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಮೂರು ವರ್ಷಗಳ ಸೇವೆಯಲ್ಲಿ ನಾಲ್ಕು ಬಾರಿ ಟ್ರಾನ್ಸ್ಫರ್, 20 ಬಾರಿ ಸಸ್ಪೆಂಡ್ ಆದ ಕುಖ್ಯಾತಿ ವಿಜಯ್ದು. ಈ ಸೀರಿಯಲ್ ಕಿಡ್ನ್ಯಾಪ್ ಪ್ರಕರಣವನ್ನು ಅನಧಿಕೃತವಾಗಿ ತನಿಖೆ ಮಾಡುವ ಜವಾಬ್ದಾರಿ ವಿಜಯ್ ಹೆಗಲೇರುತ್ತದೆ. ಆರು ಜನರ ತಂಡ ಕಟ್ಟಿಕೊಂಡು ವಿಜಯ್ ತನಿಖೆಗೆ ಮಾಡುತ್ತಿರುವಾಗಲೇ ಇನ್ನೂ ಮೂವರು ಇದೇ ರೀತಿ ಕಿಡ್ನ್ಯಾಪ್ ಆಗುತ್ತಾರೆ. ಹಾಗಾದರೆ ಈ ಸೀರಿಯಲ್ ಅಪಹರಣಗಳ ಸೂತ್ರಧಾರಿ ಯಾರು? ವಿಜಯ್ ಈ ಕೇಸ್ನ ಹೇಗೆ ಭೇದಿಸುತ್ತಾನೆ? ಸಿನಿಮಾ ನೋಡಿ.
ಈ ಹಿಂದೆ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರವಿದು. ಪ್ರಾರಂಭದಲ್ಲಿ ಪೋಲಿ ಪೊಲೀಸಪ್ಪನಾಗಿ ಕ್ರಮೇಣ ಸೀರಿಯಸ್ ಸಿಸಿಬಿ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅವರೇ ಸಂಗೀತ ನೀಡಿರುವ ಹಾಡುಗಳು ಬೆಳ್ಳಿತೆರೆಯಲ್ಲಿ ಅದ್ಧೂರಿಯಾಗಿ ಮೂಡಿಬಂದಿವೆ. ಅದೇ ವೈಭವ ಮಾತಿನ ಭಾಗದಲ್ಲೂ ಇದ್ದಿದ್ದರೆ ಸಿನಿಮಾ ಮತ್ತಷ್ಟು ಕಲರ್ಫುಲ್ ಆಗಿರುತ್ತಿತ್ತು. ಚಂದನ್ ನೀಡಿರುವ ಹಿನ್ನೆಲೆ ಸಂಗೀತವೂ ಹೊಸತನದಿಂದ ಕೂಡಿದೆ. ಗ್ಲಾಮರ್ ಗೊಂಬೆಯಾಗಿ ಅಪೂರ್ವ ಸೆಳೆದರೆ, ತಬಲಾ ನಾಣಿ ನಗಿಸುವುದರ ಜತೆಗೆ ಗಂಭೀರವಾಗಿಯೂ ಮಿಂಚಿದ್ದಾರೆ. ನವರಸನ್, ಪ್ರಶಾಂತ್ ಸೇರಿ ಉಳಿದವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೆಮ್ ಥ್ರಿಲ್ಲರ್ಗಳಲ್ಲಿ ಚಿತ್ರಕಥೆ ತುಂಬ ಮುಖ್ಯ. ಪ್ರೇಕ್ಷಕರು ಊಹಿಸಿದಂತೆ ಕಥೆ ನಡೆದುಬಿಟ್ಟರೆ, ಅಲ್ಲಿ ಥ್ರಿಲ್ ಇರುವುದಿಲ್ಲ. ಆದರೆ, ಆ ವಿಷಯದಲ್ಲಿ “ಸೂತ್ರಧಾರಿ’ ಬುದ್ಧಿವಂತಿಕೆ ಉಪಯೋಗಿಸಿದ್ದಾನೆ. ರ್ಟನ್, ಟ್ವಿಸ್ಟ್ಗಳ ಮೂಲಕ ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸುವಲ್ಲಿ ಸಕ್ಸಸ್ ಆಗಿದ್ದಾರೆ.