ಶಿರ್ವ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಎಸ್ಟಿಇ ಬೋಧಕ ಘಟಕಕ್ಕೆ ಕರ್ನಾಟಕ ವಿಭಾಗದ ಉತ್ತಮ ಐಎಸ್ಟಿಇ ಫ್ಯಾಕಲ್ಟಿ ಚಾಪ್ಟರ್ ಎಟಕ ಪ್ರಶಸ್ತಿ ಲಭಿಸಿದೆ. ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಭುವನೇಶ್ವರಂನಲ್ಲಿ ಇತ್ತೀಚೆಗೆ ನಡೆದ 53ನೇ ಐಎಸ್ಟಿಇ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.
ಕಾಲೇಜಿನ ಐಎಸ್ಟಿಇ ಶಿಕ್ಷಕರ ಘಟಕ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ 2022-23ನೇ ಸಾಲಿನಲ್ಲಿ ನಡೆಸಿದ ಹಲವಾರು ಕಾರ್ಯಕ್ರಮಗಳನ್ನು ಮೆಚ್ಚಿ ಈ ಪ್ರಶಸ್ತಿಯನ್ನು ರಾಜ್ಯ ಐಎಸ್ಟಿಇ ವತಿಯಿಂದ ನೀಡಲಾಗಿದೆ. ಸಂಸ್ಥೆ ಪರವಾಗಿ ಐಎಸ್ಟಿಇ ಘಟಕ ಸಂಯೋಜಕ ಚೇತನ್ ಆರ್. ಪ್ರಶಸ್ತಿ ಸ್ವೀಕರಿಸಿದರು. ಎರಡನೇ ಬಾರಿ ಸಂಸ್ಥೆಗೆ ಈ ಪ್ರಶಸ್ತಿ ದೊರಕಿರುವುದಕ್ಕೆ ಸಂಸ್ಥೆ ಸಂಸ್ಥಾಪಕ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಕಾರ್ಯದರ್ಶಿ ರತ್ನಕುಮಾರ್ ಮತ್ತು ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಹರ್ಷ ವ್ಯಕ್ತಪಡಿಸಿದ್ದಾರೆ.