ಬೆಂಗಳೂರು: ಹಾಲಿ ನಡೆಯುತ್ತಿರುವ ಇಂಡಿಯಾ ಆರ್ಟ್ ಫೆಸ್ಟಿವಲ್ನಲ್ಲಿ ಸ್ಕಲ್ಪ್ಚರ್ಸ್ ಆನ್ ಕ್ಯಾನ್ವಾಸ್ ಶೀರ್ಷಿಕೆ ಅಡಿಯಲ್ಲಿ ಕಲಾವಿದರಾದ ಸತ್ಯ ಗೌತಮನನ್ ಎಂಬುವವರು ವೀಕ್ಷಕರಿಗೆ ಇತಿಹಾಸದ ಗತವೈಭವವನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇಂಡಿಯಾ ಆರ್ಟ್ ಫೆಸ್ಟಿವಲ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ಚಿತ್ರಗಳೆಲ್ಲವೂ ಭಾರತದಿಂದ ಕಳ್ಳಸಾಗಾಣೆಯಾಗಿ ವಿದೇಶದಲ್ಲಿರುವ ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತಿತ್ತು. ಈ ಚಿತ್ರಕಲೆಗಳೆಲ್ಲವೂ ಚೋಳರ ಕಾಲಕ್ಕೆ ಸೇರಿದ್ದು, ಕ್ರಿಶ. 8-12 ನೇ ಶತಮಾನದ್ದು ಎಂದು ತಿಳಿದು ಬಂದಿದ್ದು, ಈ ಕಾಲಘಟ್ಟವನ್ನು ಕಲೆ, ವಾಸ್ತುಶಿಲ್ಪ ಮತ್ತು ಸಾಹಿತ್ಯಕ್ಕೆ ಸುವರ್ಣ ಯುಗವೆಂದು ಪರಿಗಣಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಕಲಾವಿದೆ ಸತ್ಯ ಗೌತಮನನ್, ಕಲಾಕೃತಿಯ ಅನೇಕ ಮೂಲ ಶಿಲ್ಪಗಳು ವಸ್ತುಸಂಗ್ರಹಾಲಯಗಳಲ್ಲಿ ಮತ್ತು ಸಂಗ್ರಾಹಕರ ಬಳಿ ಉಳಿದಿವೆ, ನಿರಂತರ ಜಾಗೃತಿ ಹಾಗೂ ಸತತ ಪ್ರಯತ್ನದಿಂದಾಗಿ ಈ ಕಲಾಕೃತಿಗಳನ್ನು ಭಾರತಕ್ಕೆ ವಾಪಸ್ ತರಲಾಗಿದೆ. ವಿದೇಶದಲ್ಲಿರುವವರು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದು, ನಮ್ಮ ದೇಶದಲ್ಲಿಯೂ ಇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಕಲಾವಿದೆ ಸತ್ಯ ಗೌತಮನನ್ ಹೇಳಿದ್ದಾರೆ.
ಕೃಷಿ ಇಂಜಿನಿಯರ್ ಪದವಿದರರಾಗಿರುವ ಸತ್ಯ ಗೌತಮನನ್ ಸಿಂಗಾಪುರದ ನ್ಯಾಷನಲ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ (NAFA) ದಿಂದ ಪಾಶ್ಚಿಮಾತ್ಯ ಕಲೆಗಳಲ್ಲಿ ಅರೆಕಾಲಿಕ ಡಿಪ್ಲೊಮಾವನ್ನು ಹೊಂದಿರುವ ಕಲಾವಿದರಾಗಿದ್ದಾರೆ.
ಭಾರತದ ಈ ಮೂರು ರಾಜ್ಯಗಳು ನಮಗೆ ಸೇರಿದ್ದು; ವಿವಾದ ಹುಟ್ಟುಹಾಕಿದ Bangladesh