ವಿಜಯಪುರ: ಸ್ಟಾರ್ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿರುವ ನಟಿ, ಮಾಜಿ ಸಂಸದೆ ರಮ್ಯಾಗೆ ಹೋದಲ್ಲೆಲ್ಲ ಮದುವೆ ಯಾವಾಗ ಎಂಬ ಪ್ರಶ್ನೆಯೇ ಕೇಳಿ ಬರುತ್ತಿದೆ. ಇಂದು ವಿಜಯಪುರದಲ್ಲಿ ಪ್ರಚಾರದಲ್ಲಿರುವ ಅವರಿಗೆ ಮದುವೆ ಯಾವಾಗ ಎಂಬ ಪ್ರಶ್ನೆ ಮತ್ತೊಮ್ಮೆ ಎದುರಾಗಿದೆ.
ಇದನ್ನೂ ಓದಿ: ನಾಳೆ ನೀಟ್ ಪರೀಕ್ಷೆ: ಹಾಫ್ ಶರ್ಟ್-ಚಪ್ಪಲಿ ಕಡ್ಡಾಯ; ಪ್ರವೇಶಪತ್ರದ ಜತೆ ಏನಿರಬೇಕು?
ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲ್ ಪರ ಪ್ರಚಾರದಲ್ಲಿ ತೊಡಗಿದ್ದ ರಮ್ಯಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ಹತ್ಯೆ ಮಾಡುವುದಾಗಿ ಮಣಿಕಂಠ ರಾಠೋಡ್ ಆಡಿಯೋ ರಿಲೀಸ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ, ರಾಜಕೀಯ ಕೀಳುಮಟ್ಟಕ್ಕೆ ಹೋಗಿದೆ ಎಂದರು. ಮೊದಲು ಈ ರೀತಿ ಇರುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿ, ಇಶ್ಯೂ ಬಗ್ಗೆ ಫೈಟ್ ಮಾಡ್ತಿದ್ರು, ಆದರೆ ಈಗ ರಾಜಕಾರಣ ಇಷ್ಟೊಂದು ಕೀಳುಮಟ್ಟಕ್ಕೆ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್ನ ನಂಬರ್; ಏನಿದರ ಹಿನ್ನೆಲೆ?
ಇಲ್ಲಿಯೂ ರಮ್ಯಾಗೆ ಮದುವೆ ಕುರಿತ ಪ್ರಶ್ನೆ ಎದುರಾಗಿದೆ. ಮದುವೆ ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು, ಒಳ್ಳೇ ಹುಡುಗ ಸಿಕ್ಕರೆ ಆಗುತ್ತೇನೆ ಎಂದರು. ‘ಗೌಡ್ರ ಹುಡುಗನೇ ಬೇಕಾ?’ ಎಂದು ಮಾಧ್ಯಮದವರ ಪ್ರಶ್ನೆಗೆ ಒಳ್ಳೆ ಹುಡುಗ ಇದ್ರೆ ಸಾಕು ಎಂದರು. ಮೊನ್ನೆಯಷ್ಟೇ ಗೌಡ್ರ ಹುಡುಗನನ್ನು ಹುಡುಕಿ ಎಂದ ಅವರು, ಈ ಸಲ ಒಳ್ಳೇ ಹುಡುಗನನ್ನು ನೀವೇ ಹುಡುಕಿ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಇದು ಡೈವೋರ್ಸ್ ಫೋಟೋಶೂಟ್: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!
ಮೋದಿ ಪ್ರಚಾರ ವಿಚಾರವಾಗಿ ಮಾತನಾಡಿದ ರಮ್ಯಾ, ಮೋದಿ ರಾಜಧಾನಿಗೆ ಬಂದಿದ್ದು ಸ್ವಾಗತಾರ್ಹ. ಅವರಿಗೂ ಬೆಂಗಳೂರು ಸ್ಥಿತಿ ಗೊತ್ತಾಗಲಿ, ಇಲ್ಲಿಯ ಸಮಸ್ಯೆ ಬಗ್ಗೆ ಅರಿತುಕೊಳ್ಳಲಿ ಎಂದು ಹೇಳಿದರು.