ಹೀರೋ ಆದರು ಕೌರವ ವೆಂಕಟೇಶ್​; 1862 ಚಿತ್ರಗಳ ಸಾಹಸ ಸಂಯೋಜಕನ ಹೊಸ ಸಾಹಸ!

blank
blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕನ್ನಡದ ಹೆಸರಾಂತ ಸಾಹಸ ನಿರ್ದೇಶಕ ಕೌರವ ವೆಂಕಟೇಶ್​ ಕಳೆದ ವರ್ಷ “ಕೊಕೇನ್​’ ಚಿತ್ರಕ್ಕಾಗಿ ಡೈರೆಕ್ಟರ್​ ಕ್ಯಾಪ್​ ಧರಿಸುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದರು. ಇದೀಗ ಹೀರೋ ಆಗಿ ಡೆಬ್ಯೂ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಹೆಸರು “ಒಂದು ಸುಂದರ ದೆವ್ವದ ಕಥೆ’. “ದಾಸರಹಳ್ಳಿ’, “ದೇವದೂತ’ ಚಿತ್ರಗಳಿಗೆ ಆ್ಯಕ್ಷನ್​-ಕಟ್​ ಹೇಳಿರುವ ನೃತ್ಯಸಂಯೋಜಕ ಎಂ.ಆರ್​. ಕಪಿಲ್​ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದೇ 23ರಿಂದ ಶೂಟಿಂಗ್​ ಪ್ರಾರಂಭವಾಗಲಿದೆ.

ಹೀರೋ ಆದರು ಕೌರವ ವೆಂಕಟೇಶ್​; 1862 ಚಿತ್ರಗಳ ಸಾಹಸ ಸಂಯೋಜಕನ ಹೊಸ ಸಾಹಸ!

ಇದೇ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಬಗ್ಗೆ ಕೌರವ ವೆಂಕಟೇಶ್​, “ಕಪಿಲ್​ ಅವರ “ದಾಸರಹಳ್ಳಿ’ ಚಿತ್ರದಲ್ಲಿ ನಾನು ಅತಿಥಿ ಪಾತ್ರದಲ್ಲಿ ನಟಿಸಿದ್ದೆ. ಆಗ ಅವರು ಈ ಕಥೆ ಹೇಳಿ, ನಾನು ಪಾತ್ರಕ್ಕೆ ಸೂಟ್​ ಆಗುತ್ತೇನೆ ಎಂದರು. ಕಥೆ ಮತ್ತು ಪಾತ್ರ ಇಷ್ಟವಾದ ಕಾರಣ, ನಾನೂ ಒಪ್ಪಿಕೊಂಡೆ. ನಾನಿಲ್ಲಿ ಗೂರ್ಖಾ ಪಾತ್ರದಲ್ಲಿ ನಟಿಸಲಿದ್ದೇನೆ. ಕಳ್ಳರನ್ನು ಹಿಡಿದು ಮನೆಗಳನ್ನು ರಕ್ಷಿಸುತ್ತಿರುತ್ತೇನೆ. ಆರು ಕೊಲೆಗಳು ನಡೆಯುತ್ತವೆ. ಅದರ ಸುತ್ತ ಹಾರರ್​ ಅಂಶಗಳಿರುವ ಕಥೆಯಿದು. ಆ್ಯಕ್ಷನ್​ಗೆ ಹೆಚ್ಚು ಪ್ರಾಮುಖ್ಯವಿರಲಿದೆ’ ಎಂದು ಮಾಹಿತಿ ನೀಡುತ್ತಾರೆ.

ಹೀರೋ ಆದರು ಕೌರವ ವೆಂಕಟೇಶ್​; 1862 ಚಿತ್ರಗಳ ಸಾಹಸ ಸಂಯೋಜಕನ ಹೊಸ ಸಾಹಸ!

ಕೋರಿಯೋಗ್ರರ್​ ಮತ್ತು ಆ್ಯಕ್ಷನ್​ ಡೈರೆಕ್ಟರ್​ ಜೋಡಿ “ಒಂದು ಸುಂದರ ದೆವ್ವದ ಕಥೆ’ಗೆ ಒಂದಾಗಿರುವುದು ಕುತೂಹಲ ಮೂಡಿಸುತ್ತದೆ. ಕೌರವ ವೆಂಕಟೇಶ್​ ಜತೆ ಮುನಿರಾಜು, ಗುರುಪ್ರಸಾದ್​, ಸುರೇಶ್​ ಮುರಳಿ, ವಿಸಿಎನ್​ ಮಂಜು, ವಿಕ್ಟರಿ ವಾಸು, ದಯಾಳನ್​, ಶಂಕರ್​ ಭಟ್​, ಪ್ರೇಮ್​ ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

1862 ಚಿತ್ರಗಳಿಗೆ ಸಾಹಸ!

ಹೀರೋ ಆದರು ಕೌರವ ವೆಂಕಟೇಶ್​; 1862 ಚಿತ್ರಗಳ ಸಾಹಸ ಸಂಯೋಜಕನ ಹೊಸ ಸಾಹಸ!
ಕೌರವ ವೆಂಕಟೇಶ್​ ತಮ್ಮ ಮೂರು ದಶಕಗಳ ಸಿನಿಮಾ ಜರ್ನಿಯಲ್ಲಿ 1862 ಚಿತ್ರಗಳಲ್ಲಿ ಸಾಹಸ ನಿರ್ದೇಶನ ಮಾಡಿದ್ದಾರೆ. “ಕನ್ನಡದ ಜತೆಗೆ ತುಳು, ಹಿಂದಿ, ತೆಲುಗು, ಮರಾಠಿ, ತಮಿಳಿನಲ್ಲೂ ಸಾಹಸ ಸಂಯೋಜನೆ ಮಾಡಿದ್ದೇನೆ. ಬಹುಶಃ ಅತಿ ಹೆಚ್ಚು ಅರ್ಥಾತ್​ 29 ತುಳು ಸಿನಿಮಾಗಳಿಗೆ ನಾನು ಆ್ಯಕ್ಷನ್​ ಡೈರೆಕ್ಟ್​ ಮಾಡಿದ್ದೇನೆ. ಈ ವರ್ಷ 2000 ಸಿನಿಮಾ ಪೂರೈಸುವ ವಿಶ್ವಾಸವಿದೆ. ಕಳೆದ ವರ್ಷ “ಕೊಕೇನ್​’ ಮೂಲಕ ನಿರ್ದೇಶಕನಾದೆ. ಸದ್ಯ ಆ ಸಿನಿಮಾ ಕೊನೆಯ ಹಂತದಲ್ಲಿದ್ದು, ಸೆಪ್ಟೆಂಬರ್​ನಲ್ಲಿ ರಿಲೀಸ್​ ಮಾಡುವ ಪ್ಲ್ಯಾನ್​ ಇದೆ. ಅದಾಗುತ್ತಲೇ ನಿರ್ದೇಶಕನಾಗಿ ಇನ್ನೊಂದು ಸಿನಿಮಾ ಘೋಷಿಸಲಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

ಹೀರೋ ಆದರು ಕೌರವ ವೆಂಕಟೇಶ್​; 1862 ಚಿತ್ರಗಳ ಸಾಹಸ ಸಂಯೋಜಕನ ಹೊಸ ಸಾಹಸ!

Share This Article

ಯಾವೆಲ್ಲ ಕಾಯಿಲೆಗಳಿಗೆ ಸೀಬೆ ಹಣ್ಣು ರಾಮಬಾಣ? ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Guava

Guava Fruit: ಸೀಬೆ ಹಣ್ಣು ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಬಹುತೇಕರು ಕೆಂಪು ಬಣ್ಣದ ಪೇರಳೆಯನ್ನು ಬಹಳ…

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…