More

    ಐಪಿಎಲ್​ ಇತಿಹಾಸದಲ್ಲೇ ಭಯಾನಕ ಮಿಸ್ಟೇಕ್​! ಆರ್​ಸಿಬಿಗೆ ಯಾಕಿಂಥಾ ಅನ್ಯಾಯ? ಸ್ಪೋಟಕ ಸತ್ಯ ಬಯಲು

    ಕೋಲ್ಕತ್ತ: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ನಿನ್ನೆ (ಏಪ್ರಿಲ್​ 21) ನಡೆದ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ನಡುವಿನ ಪಂದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಈ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಕೆಕೆಆರ್​ ರೋಚಕ ಗೆಲುವು ಸಾಧಿಸಿತು. ಆರ್​ಸಿಬಿ ಕೇವಲ 1 ರನ್​ ಅಂತರದಿಂದ ಹೀನಾಯು ಸೋಲನ್ನು ಅನುಭವಿಸಿತು. ಆದರೆ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟ್​ ಆದ ರೀತಿ ವಿವಾದವನ್ನು ಹುಟ್ಟು ಹಾಕಿತು. ಅದನ್ನು ಮೀರಿ ಮತ್ತೊಂದು ವಿವಾದ ಇದೀಗ ಹುಟ್ಟುಕೊಂಡಿದೆ. ಇದು ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಈ ಪಂದ್ಯದಲ್ಲಿ ಅಂಪೈರ್‌ಗಳು ಮಾಡಿದ ತಪ್ಪಿನಿಂದಾಗಿ ಕ್ರಿಕೆಟ್ ಜಗತ್ತೇ ಸದ್ಯ ತಲ್ಲಣಗೊಂಡಿದೆ. ಐಪಿಎಲ್ ಲೀಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಘೋರ ಪ್ರಮಾದ ನಡೆದಿದೆ. ಅಂಪೈರ್​ಗಳು ಮಾಡಿದ ತಪ್ಪಿಗೆ ಆರ್​ಸಿಬಿ ಬಲಿಯಾಗಿದೆ. ಈ ಸೀಸನ್​ನಲ್ಲಿ ಪ್ಲೇ ಆಫ್​ಗೆ ಏರುವ ಅವಕಾಶಗಳನ್ನು ಜೀವಂತವಾಗಿರಿಸಿಕೊಳ್ಳಲು, ಗೆಲ್ಲಲೇಬೇಕು ಎಂಬ ಗುರಿಯೊಂದಿಗೆ ನಿನ್ನೆ ಕೆಕೆಆರ್​ ವಿರುದ್ಧ ಸೆಣಸಾಡಿದ ಆರ್‌ಸಿಬಿ, ಗೆಲುವಿಗೆ ಇನ್ನು ಒಂದು ಹೆಜ್ಜೆ ಬಾಕಿ ಇರುವಾಗ ಸೋಲನ್ನು ಅನುಭವಿಸಿತು.

    ಈ ಪಂದ್ಯದಲ್ಲಿ ಆರ್‌ಸಿಬಿಗೆ ಕೊನೆಯ ಎಸೆತದಲ್ಲಿ ಮೂರು ರನ್‌ಗಳ ಅಗತ್ಯವಿತ್ತು. ಆದರೆ, ಕೇವಲ ಒಂದು ರನ್‌ ಗಳಿಸುವ ಮೂಲಕ 1 ರನ್ ಅಂತರದಲ್ಲಿ ಸೋಲುಂಡಿತು. ಆದರೆ, ಹೊಸದಾಗಿ ಬಹಿರಂಗಗೊಂಡ ಸಂಗತಿಯಲ್ಲಿ ಅಂಪೈರ್‌ಗಳು ಮಾಡಿದ ತಪ್ಪುಗಳಿಂದ ಆರ್​ಸಿಬಿ ಈ ಪಂದ್ಯದಲ್ಲಿ ಎರಡು ರನ್‌ಗಳನ್ನು ಕಳೆದುಕೊಳ್ಳಬೇಕಾಯಿತು. ಆ ಎರಡು ರನ್‌ಗಳು ಆರ್‌ಸಿಬಿಗೆ ನ್ಯಾಯಯುತವಾಗಿ ಸಿಗಬೇಕಿತ್ತು. ಸಿಕ್ಕಿದ್ದರೆ, ಆರ್​ಸಿಬಿ ಈ ಪಂದ್ಯವನ್ನು ಗೆಲ್ಲುತ್ತಿತ್ತು. ಈ ಸೀಸನ್​ನಲ್ಲಿ ಪ್ಲೇ ಆಫ್​ ರೇಸ್​ಗೇರುವ ಆಸೆಯನ್ನು ಜೀವಂತವಾಗಿ ಇರಿಸಿಕೊಳ್ಳುತ್ತಿತ್ತು. ಆದರೆ, ಅಂಪೈರ್‌ಗಳು ಮಾಡಿದ ಘೋರ ತಪ್ಪಿನಿಂದಾಗಿ ಆರ್‌ಸಿಬಿ ಸೋತಿದ್ದಲ್ಲದೆ, ತೀವ್ರ ಟೀಕೆಗಳಿಗೂ ಗುರಿಯಾಗಿದೆ.

    ಕೆಕೆಆರ್ ನೀಡಿದ 223 ರನ್‌ಗಳ ಗುರಿಯನ್ನು ಆರ್​ಸಿಬಿ ಬೆನ್ನಟ್ಟಿತ್ತು. ಕೆಕೆಆರ್ ಬೌಲರ್ ವರುಣ್ ಚಕ್ರವರ್ತಿ ಅವರು ಎಸೆದ 17ನೇ ಓವರ್‌ನ ಐದನೇ ಎಸೆತವನ್ನು ಆರ್​ಸಿಬಿಯ ಯುವ ಬ್ಯಾಟ್ಸ್​ಮನ್​ ಪ್ರಭುದೇಸಾಯಿ ಶಾರ್ಟ್ ಫೈನ್ ಲೆಗ್‌ನಲ್ಲಿ ಉತ್ತಮ ಶಾಟ್ ಆಡಿದರು. ಅಂಪೈರ್‌ಗಳು ಫೋರ್​ ಎಂದು ಹೇಳಿದರು. ಆದರೆ, ವಾಸ್ತವವಾಗಿ ಅದು ಸಿಕ್ಸರ್​ ಆಗಿತ್ತು. ಯಾವುದೇ ದೃಢೀಕರಣವಿಲ್ಲದೆ ಮತ್ತು ಪರಿಶೀಲಿಸದೆ ಫೋರ್​ ಎಂದು ಘೋಷಿಸಲಾಯಿತು. ಅಲ್ಲಿಗೆ ಆರ್‌ಸಿಬಿ ಅಮೂಲ್ಯ ಎರಡು ರನ್‌ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ಪಂದ್ಯದಲ್ಲಿ ಆರ್​ಸಿಬಿ ಒಂದು ರನ್‌ನಿಂದ ಸೋತಿತು. ಆ ಎರಡು ರನ್‌ಗಳು ಆರ್‌ಸಿಬಿ ಸ್ಕೋರ್‌ಗೆ ಸೇರಿದ್ದರೆ, ಈ ಪಂದ್ಯವನ್ನು ಆರ್‌ಸಿಬಿ ಗೆಲ್ಲುತ್ತಿತ್ತು.

    ತಮ್ಮ ಕೆಟ್ಟ ಅಂಪೈರಿಂಗ್‌ನಿಂದ ಆರ್‌ಸಿಬಿಗೆ ಹಾನಿ ಮಾಡುವುದಲ್ಲದೆ, ಐಪಿಎಲ್‌ಗೆ ಕೆಟ್ಟ ಹೆಸರು ತರಲು ಅಂಪೈರಿಂಗ್ ಮಾಡಲಾಗುತ್ತಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಅಂಪೈರ್ ರಿಚರ್ಡ್ ಕೆಟಲ್​ಬರ್ಗ್​ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಷ್ಟು ಸ್ಪಷ್ಟವಾಗಿ ಕಾಣುತ್ತಿರುವುದನ್ನು ಹೇಗೆ ಮಿಸ್​ ಮಾಡಿದರು ಎಂದು ಅಂಪೈರ್​ ತಪ್ಪನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ವಿಡಿಯೋ ಸಹ ಹಂಚಿಕೊಂಡಿದ್ದಾರೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ (ಏಪ್ರಿಲ್​ 21) ಈಡನ್ ಗಾರ್ಡ್​ನ್ಸ್​ನಲ್ಲಿ ನಡೆದ ಐಪಿಎಲ್ 2024ರ 36 ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು 1 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರಲ್ಲಿ ಸೋಲಿನ ಕೂಪದಿಂದ ಎದ್ದುಬರಲು ಮತ್ತೊಮ್ಮೆ ವಿಫಲವಾಗಿದೆ. ಪ್ಲೇ ಆಫ್ ಹಂತ ತಲುಪುವ ಕನಸು ಬಹುತೇಕ ಅಂತ್ಯಗೊಂಡಂತಾಗಿದೆ. ಆಡಿದ 8 ಪಂದ್ಯಗಳಲ್ಲಿ 7 ಸೋಲು ಮತ್ತು 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

    ಆರ್​ಸಿಬಿ ತಂಡದ ವಿಲ್ ಜಾಕ್ಸ್ ಹಾಗೂ ರಜತ್ ಪಾಟಿದಾರ್ ಅರ್ಧಶತಕದ ಕೊಡುಗೆ, ಸ್ಪಿನ್ ಬೌಲರ್​ ಕರಣ್‌ ಶರ್ಮಾ ಮಿಂಚಿನ ಬ್ಯಾಟಿಂಗ್ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೇವಲ ಒಂದು ರನ್ ಅಂತರದಿಂದ ವಿರೋಚಿತ ಸೋಲು ಅನುಭವಿಸಿದೆ. ಕೆಕೆಆರ್​ ನೀಡಿದ 223 ರನ್ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 20 ಓವರ್​ಗಳಲ್ಲಿ 221 ರನ್ ಗಳಿಸಿ ಆಲೌಟಾಯಿತು. (ಏಜೆನ್ಸೀಸ್​)

    ತಡರಾತ್ರಿಯ ಈ ಕೆಟ್ಟ ಅಭ್ಯಾಸವೇ ಹೀನಾಯ ಸೋಲಿಗೆ ಕಾರಣ: ಆರ್​ಸಿಬಿ ವಿರುದ್ಧ ಸುರೇಶ್​ ರೈನಾ ಕಿಡಿ!

    ನೋಬಾಲ್​ ಆಗಿದ್ರೂ ಔಟ್​ ನೀಡಿದ್ರು ಅಂತ ವಿರಾಟ್​ ಕೊಹ್ಲಿ ಆಕ್ರೋಶ: ಆದ್ರೆ ಐಸಿಸಿ ನಿಯಮ ಹೇಳುವುದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts