ಧಾರವಾಡ: ಇಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ನೋಡಲು ಅಭ್ಯರ್ಥಿಯೇ ಇಲ್ಲ ಎಂಬಂತಾಗಿದೆ. ಏಕೆಂದರೆ ಚುನಾವಣೆಗೆ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಫಲಿತಾಂಶ ಪ್ರಕಟವಾಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.
ಧಾರವಾಡದ ಮನಗುಂಡಿ ಗ್ರಾಮದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮನಗುಂಡಿಯ 2ನೇ ವಾರ್ಡ್ನ ‘ಅ’ ವರ್ಗದಿಂದ ಸ್ಪರ್ಧಿಸಿದ್ದ ಶೋಭಾ ಮಲ್ಲೇಶ ಹಡಪದ ಅವರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಇವರು ಮನಗಂಡಿ 2ನೇ ವಾರ್ಡ್ನಲ್ಲಿ ಕ್ರಮಸಂಖ್ಯೆ 8ರಲ್ಲಿ ಬಕೆಟ್ ಚಿಹ್ನೆಯೊಂದಿಗೆ ಸ್ಪರ್ಧಿಸಿದ್ದರು. ಇನ್ನು ಚುನಾವಣೆ ದಿನವೇ ಧಾರವಾಡದಲ್ಲಿ ಅಭ್ಯರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಮೂಲಕ ಧಾರವಾಡದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಫಲಿತಾಂಶಕ್ಕೂ ಮುನ್ನವೇ ಅಗಲಿದಂತಾಗಿದೆ.
ಸುಮ್ಮನೆ ಫೋನ್ನಲ್ಲಿ ಮಾತಾಡಿ ಗೆಳೆತನ ಬೆಳೆಸಿದ್ದಕ್ಕೆ ಜೀವ ಕಳೆದುಕೊಂಡಳು..!