ಬೆಂಗಳೂರು: ಪೋರ್ಚುಗಲ್ನ ಪ್ರಾಗ್ನಲ್ಲಿ ಇತ್ತೀಚೆಗೆ ನಡೆದ ನೃತ್ಯ ವಿಶ್ವ ಕಪ್ನಲ್ಲಿ ಬೆಂಗಳೂರಿನ ತಂಡ ಚಿನ್ನದ ಪದಕ ಗಳಿಸಿದೆ. ಬೆಂಗಳೂರಿನ ಯುರಿಧಿಮಿಕ್ಸ್ನ ಮಕ್ಕಳು ಈ ಚಿನ್ನದ ಪದಕ ಗಳಿಸಿ ಸಾಧನೆ ತೋರಿದ್ದಾರೆ.
ಪ್ರಾಗ್ನಲ್ಲಿ ಜು. 5ರಂದು ನೃತ್ಯ ವಿಶ್ವ ಕಪ್-2023 ನಡೆದಿದ್ದು, ಇದರಲ್ಲಿ ಬೆಂಗಳೂರಿನ ಯುರಿಧಿಮಿಕ್ಸ್ನ ವಿದುಷಿ ಕುಮಾರಿ ಸಂಯುಕ್ತ ಶಂಕರ್ ಮತ್ತು ಶಿಷ್ಯ ವೃಂದದ ಆದ್ಯಾ ಸಚಿನ್, ಶ್ರೀಹರಿಣಿ ಅರುಣ್ಮೋಜಿ, ಕೀರ್ತನಾ ಸೇತುಪತಿ, ಸಾಯಿಭವಾನಿ, ಸಂಜನಾ ನವೀನ್ ಭಾಗವಹಿಸಿ ಚಿನ್ನದ ಪದಕ ವಿಜೇತರಾಗಿದ್ದಾರೆ.
ಇದನ್ನೂ ಓದಿ: ‘ಮನೆಯಲ್ಲೇ ಇರು ಅಂತ ಹೇಳು, ಚಳಿಗಾಲ ಅಲ್ವಾ?’: ಸಿಎಂ ಹೀಗಂದಿದ್ದು ಯಾಕೆ-ಯಾರಿಗೆ?
ವಿದುಷಿ ಸಂಯುಕ್ತ ಶಂಕರ್ ಬೆಂಗಳೂರಿನ ಸಚ್ಚಿದಾನಂದ ಆರ್ಟ್ಸ್ ಫೌಂಡೇಷನ್ ಸಂಸ್ಥಾಪಕರಾಗಿದ್ದು, ಯುರಿಧಿಮಿಕ್ಸ್ನಲ್ಲಿ ಭರತನಾಟ್ಯ ತರಬೇತಿ ನೀಡುತ್ತಿದ್ದಾರೆ. ಇವರ ಮಾರ್ಗದರ್ಶನಲ್ಲಿ ನೃತ್ಯ ಸಂಯೋಜನೆ ಮತ್ತು ನೃತ್ಯ ತರಬೇತಿ ಪಡೆದ ಬೆಂಗಳೂರಿನ ಯುರಿಧಿಮಿಕ್ಸ್ನ ಮಕ್ಕಳು ನೃತ್ಯ ವಿಶ್ವ ಕಪ್ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಮಕ್ಕಳನ್ನು ಡೌನ್ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!