ದೆಹಲಿ: ಬಾಲಾಕೋಟ್ನ ಏರ್ ಸ್ಟ್ರೈಕ್ ಹೀರೋ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ಗೆ ದೀಪಾವಳಿಯ ಶುಭಾಶಯಗಳ ಜೊತೆಗೇ ಅಭಿನಂದನೆಗಳನ್ನು ಹೇಳುವ ಸಂದರ್ಭ ಒದಗಿ ಬಂದಿದೆ. ಏಕೆಂದರೆ ಅವರಿಗೆ ಪದೋನ್ನತಿ ಲಭಿಸಿದೆ.
ವಿಂಗ್ ಕಮಾಂಡರ್ ಅಭಿನಂದನ್ ಎಂದಾಕ್ಷಣ ಅವರು ಅಂದು ಪಾಕ್ ನೆಲದೊಳಕ್ಕೆ ಹೊಕ್ಕು ಎದೆಗುಂದದೆ ದಿಟ್ಟ ಉತ್ತರ ಕೊಟ್ಟು ಜೀವಂತ ಮರಳಿದ ಆ ರೋಚಕ ಕ್ಷಣಗಳೇ ಕಣ್ಮುಂದೆ ಬರುತ್ತವೆ. 2019ರ ಫೆ. 27ರಂದು ನಡೆದಿದ್ದ ಪಾಕ್ ದಾಳಿಯಲ್ಲಿ ಶತ್ರುಗಳ ಎಫ್-16 ಯುದ್ಧವಿಮಾನವನ್ನು ಅಭಿನಂದನ್ ತಮ್ಮ ಮಿಗ್-21 ಮೂಲಕವೇ ಹೊಡೆದರುಳಿಸಿದ್ದರು.
ಇದನ್ನೂ ಓದಿ: ಇದು ಅಪ್ಪುವನ್ನೇ ಒಪ್ಪುವ ರೂಪು.. ತಕ್ಷಣಕ್ಕೆ ನೋಡಿದರೆ ಥೇಟ್ ಪುನೀತ್!
ನಂತರ ಗಾಯಗೊಂಡು ಶತ್ರುಗಳ ವಶವಾದರೂ ದಿಟ್ಟತನದಿಂದಲೇ ಪರಿಸ್ಥಿತಿಯನ್ನು ಎದುರಿಸಿ ಭಾರತಕ್ಕೆ ಮರಳಿ ದೇಶದ ಜನರಿಂದ ಅಪಾರ ಮೆಚ್ಚುಗೆ ಗಳಿಸಿದ್ದರು. ಇವರಿಗೆ ನಂತರ ಶೌರ್ಯಪ್ರಶಸ್ತಿಯನ್ನೂ ನೀಡಲಾಯಿತು. ಇದೀಗ ಭಾರತೀಯ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ಆಗಿ ಪದೋನ್ನತಿ ನೀಡಿದೆ.
ಡಾಕ್ಟರ್ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್