ಬೆಂಗಳೂರು: ತಮಿಳು ನಟ ವಿಶಾಲ್ ಅವರಿಗೂ ಕರ್ನಾಟಕ ಮತ್ತು ಕನ್ನಡಕ್ಕೂ ಹತ್ತಿರದ ನಂಟು. ಅವರು ಆಗಾಗ ಬೆಂಗಳೂರಿಗೆ ಬರುವುದು, ತಮ್ಮ ಚಿತ್ರಗಳ ಪ್ರಚಾರ ಮಾಡುವುದು ನಡೆಯುತ್ತಿರುತ್ತದೆ. ಈಗ ಅವರು ಇತ್ತೀಚೆಗೆ ಇನ್ನೊಮ್ಮೆ ಬೆಂಗಳೂರಿಗೆ ಬಂದಿದ್ದು. ಈ ಬಾರಿ ಅವರು ಬಂದಿದ್ದು, ಡಿ. 22ರಂದು ಬಿಡುಗಡೆಯಾಗುತ್ತಿರುವ ‘ಲಾಠಿ’ ಎಂಬ ಹೊಸ ಚಿತ್ರದ ಪ್ರಚಾರಕ್ಕಾಗಿ.
ಇದನ್ನೂ ಓದಿ: ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್ ಮಾಡಲು ಮನವಿ
ವಿಶಾಲ್ ಇದಕ್ಕೂ ಮುನ್ನ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ‘ಲಾಠಿ’ ಚಿತ್ರದಲ್ಲಿ ಮೊದಲ ಬಾರಿಗೆ ಅವರು ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾಣಿಸಿಕೊಂಡಿದ್ದು, ಪೇದೆಗಳು ಎಷ್ಟೆಲ್ಲಾ ಕಷ್ಟದ ಪರಿಸ್ಥಿತಿಗಳಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂಬ ಅಂಶವನ್ನು ಈ ಚಿತ್ರದಲ್ಲಿ ಹಿಡಿದಿಡಲಾಗಿದೆ.
ಈ ಚಿತ್ರದ ಕುರಿತು ಮಾತನಾಡುವ ವಿಶಾಲ್, ‘145 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರದ ನಿಜವಾದ ಹೀರೋಗಳೆಂದರೆ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಹಾಗೂ ಸಾಹಸ ನಿರ್ದೇಶಕ ಪೀಟರ್ ಹೇನ್ಸ್. ಹಾಡುಗಳು, ರೀರೆಕಾರ್ಡಿಂಗ್ ಹಾಗೂ ಸಾಹಸ ಸನ್ನಿವೇಶಗಳು ಅಷ್ಟು ಅದ್ಭುತವಾಗಿ ಮೂಡಿಬಂದಿದೆ. ಕೊನೆಯ 45 ನಿಮಿಷಗಳ ಸನ್ನಿವೇಶವಂತೂ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲುವಂತೆ ಮಾಡುವುದು ಖಚಿತ. ನಿರ್ದೇಶಕ ವಿನೋದ್ ಕುಮಾರ್ ಉತ್ತಮವಾಗಿ ನಿರ್ದೇಶಿಸಿದ್ದಾರೆ. ‘ಲಾಠಿ’ ಟಿಕೆಟ್ ನ ಬೆಲೆಯ ಒಂದು ರೂಪಾಯಿಯನ್ನು ರೈತರಿಗೆ ನೀಡಲು ತೀರ್ಮಾನಿಸಿದ್ದೇನೆ’ ಎನ್ನುತ್ತಾರೆ.
ಇದನ್ನೂ ಓದಿ: ಪ್ರಭಾಸ್ ಮದುವೆ ಯಾವಾಗ? ಕೊನೆಗೂ ಬಾಯಿಬಿಟ್ಟರು ‘ಡಾರ್ಲಿಂಗ್’
‘ಲಾಠಿ’ ಚಿತ್ರವುತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ಡಿಸೆಂಬರ್ 30 ರಂದು ತೆರೆ ಕಾಣಲಿದೆ. ಬೆಂಗಳೂರು ಕುಮಾರ್ ಕರ್ನಾಟಕದಾದ್ಯಂತ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.