| ಹರ್ಷವರ್ಧನ್ ಬ್ಯಾಡನೂರು
ತಮಿಳು ನಟ ವಿಶಾಲ್ “ಲಾಠಿ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಹೊರಟಿದ್ದಾರೆ. ಆ ಚಿತ್ರದ ಬಳಿಕ ಇದೀಗ “ಮಾರ್ಕ್ ಆ್ಯಂಟನಿ’ ಕೂಡ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ. ಇದೇ ಖುಷಿಯಲ್ಲಿ ವಿಶಾಲ್ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. “ಮಾರ್ಕ್ ಆ್ಯಂಟನಿ’ ಶೂಟಿಂಗ್ ವೇಳೆ ನಡೆದ ಅವಡ, ಆಧ್ಯಾತ್ಮದ ಕಡೆಗಿನ ಒಲವು, ಮುಂದಿನ ಸಿನಿಮಾಗಳು ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
- “ಮಾರ್ಕ್ ಆ್ಯಂಟನಿ’ ಚಿತ್ರ ಪ್ರಾರಂಭವಾಗಿದ್ದು ಹೇಗೆ?
-ನಿರ್ದೇಶಕ ಆದಿಕ್ ಏಳು ವರ್ಷಗಳಿಂದ ಈ ಕಥೆ ಹೇಳಲು ಪ್ರಯತ್ನಿಸುತ್ತಿದ್ದರು. ನನ್ನ ಡೇಟ್ಸ್ಗಾಗಿ ಕಾಯುತ್ತಿದ್ದರು. ಚೆನ್ನೈನಲ್ಲಿ ಒಮ್ಮೆ ಭೇಟಿಯಾದೆವು. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ. ಸೈಫೈ ಟೈಮ್ ಟ್ರಾವೆಲ್ ಜಾನರ್ ಕಥೆ ನನಗೆ ತುಂಬ ಇಷ್ಟವಾಯಿತು. ನನ್ನ ಕರಿಯರ್ನ ಅತಿ ದೊಡ್ಡ ಬಜೆಟ್ ಚಿತ್ರವಿದು. 5, 10 ವರ್ಷಗಳಿಗೆ ಒಮ್ಮೆ ಇಂತಹ ಕಥೆಗಳು ಬರುತ್ತವೆ. ನನ್ನ ಸಿನಿಮಾ ಜೀವನದಲ್ಲಿ ಒಂದು ಮೈಲಿಗಲ್ಲಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ : ಅವರು ಹಾಗೆ ಮಾಡಬಾರದಿತ್ತು ; “ಡ್ರೀಮ್ ಗರ್ಲ್ 2′ ಚಿತ್ರತಂಡದ ಬಗ್ಗೆ ನಟಿ ನುಶ್ರತ್ ಭರೂಚಾ ಬೇಸರ
- ನಿಮ್ಮ ಪಾತ್ರದ ಬಗ್ಗೆ…
– ನಾನಿಲ್ಲಿ ಮಾರ್ಕ್ ಮತ್ತು ಆ್ಯಂಟನಿ ಎರಡೂ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. 1975ರಲ್ಲಿ ಅಪ್ಪ ಆ್ಯಂಟನಿ ಗ್ಯಾಂಗ್ಸ್ಟರ್, 1990ರಲ್ಲಿ ಮಗ ಮಾರ್ಕ್ ಮೆಕ್ಯಾನಿಕ್ ಕಥೆ ಒಟ್ಟಿಗೆ ಸಾಗುತ್ತಿರುತ್ತದೆ. ಅವರಿಬ್ಬರೂ ಹೇಗೆ ಕನೆಕ್ಟ್ ಆಗುತ್ತಾರೆ ಎಂಬುದೇ ಕಥೆ. ಚಾಲೆಂಜಿಂಗ್ ಪಾತ್ರ. ಚಿತ್ರದಲ್ಲಿ ಹಲವು ಸರ್ಪ್ರೈಸ್ಗಳಿವೆ. ರಿಲೀಸ್ ಆದ ಬಳಿಕ ಜನರಿಗೆ ಗೊತ್ತಾಗಲಿದೆ. - ಎಸ್ಜೆ ಸೂರ್ಯ ಜತೆ ನಟಿಸಿದ ಅನುಭವ ಹೇಗಿತ್ತು?
– ಎಸ್ಜೆ ಸೂರ್ಯ ಅವರನ್ನು 25 ವರ್ಷಗಳಿಂದ ಸ್ಕ್ರೀನ್ ಮೇಲೆ ನೋಡುತ್ತಿದ್ದೇನೆ. ನಾನು ನಟನಾದ ಬಳಿಕ ಅವರ ಪರಿಚಯ. 25 ವರ್ಷಗಳ ಹಿಂದೆ ಅವರಲ್ಲಿ ಏನು ಫೈರ್ ಇತ್ತೋ ಈಗಲೂ ಅದೇ ಫೈರ್ ಇದೆ. ಈ ಚಿತ್ರದಲ್ಲಿ ಅವರೂ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ ನಟಿಸಿದ್ದು ಆಕ್ಟಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಕಲಿತಷ್ಟು ಅನುಭವ ನೀಡಿತು. 3 ಪೇಜ್ ಡೈಲಾಗ್ ಒಂದು ಟೇಕ್ನಲ್ಲಿ ಕೊಡುತ್ತಾರೆ. - ಚಿತ್ರೀಕರಣದ ವೇಳೆ ಅವಡ ಸಂಭವಿಸಿತ್ತು…
– ಸೂರ್ಯ ಅವರು ನನಗೆ ಒದ್ದು, ನಾನು ಬೀಳಬೇಕಿತ್ತು. ಆಗ ಟ್ರಕ್ ಗೋಡೆಗೆ ಗುದ್ದಿ ನಿಲ್ಲಬೇಕಿತ್ತು. ಆದರೆ ಟ್ರಕ್ ನನ್ನೆಡೆಗೆ ನುಗ್ಗಿಬಂತು. ನಾನು ಅದರ ವಿರುದ್ಧವಾಗಿ ಮುಖ ಮಾಡಿದ್ದ ಕಾರಣ, ಅದು ಬಂದಿದ್ದೂ ಗೊತ್ತಾಗಲಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಟನೆ ನಡೆಯಿತು. 10 ನಿಮಿಷ ಏನು ಮಾಡುತ್ತಿದ್ದೇನೆ, ಎಲ್ಲಿದ್ದೇನೆ ಎಂಬುದೇ ಗೊತ್ತಾಗಲಿಲ್ಲ. ಆ ಟನೆಯ ಬಳಿಕ ಶೂಟಿಂಗ್ ಅಷ್ಟಕ್ಕೆ ನಿಲ್ಲಿಸಿ ಪ್ಯಾಕಪ್ ಮಾಡಿಬಿಟ್ಟೆವು. ಅದು ಸಾವನ್ನು ತುಂಬ ಹತ್ತಿರದಿಂದ ನೋಡಿದ ಅನುಭವವಾಯಿತು. ಆ ಟ್ರಕ್ ಹಾಗೇ ಮುಂದೆ ಬಂದಿದ್ದರೆ ನಾನಿವತ್ತು ನಿಮ್ಮೊಂದಿಗೆ ಮಾತನಾಡುತ್ತಿರಲಿಲ್ಲ.
ಇದನ್ನೂ ಓದಿ : 1 ಚಿತ್ರ, 4 ಭಾಷೆ, 24 ಟ್ಯೂನ್ಗಳು! ಪ್ಯಾನ್ ಇಂಡಿಯಾ ಸಿಕಾಡಾ ಚಿತ್ರತಂಡದ ವಿಭಿನ್ನ ಪ್ರಯತ್ನ
- ಇತ್ತೀಚೆಗೆ ಆಧ್ಯಾತ್ಮದತ್ತ ಹೆಚ್ಚು ಗಮನ ಹರಿಸಿದ್ದೀರಂತೆ.
- ದೇವಸ್ಥಾನಕ್ಕೆ ಹೋದಾಗ ನಮಗೆ ಒಂದೊಂದು ವಿಶೇಷವಾದ ಅನುಭವಗಳಾಗುತ್ತವೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಪ್ರತಿ ಹಳ್ಳಿಗಳಲ್ಲೂ ವೀರಭದ್ರಸ್ವಾಮಿಯನ್ನು ಕಾಣಬಹುದು. ಊರನ್ನು ಕಾಯುವ ದೇವರು ವೀರಭದ್ರಸ್ವಾಮಿ. “ಮಾರ್ಕ್ ಆ್ಯಂಟನಿ’ ಚಿತ್ರದ ಪ್ರಮುಖ ಸನ್ನಿವೇಶದ ಚಿತ್ರೀಕರಣದಲ್ಲಿ 40 ಡಾನ್ಸರ್ಗಳು, 500ಕ್ಕೂ ಹೆಚ್ಚು ಜನರಿದ್ದರು. 8 ದಿನಗಳ ಕಾಲ ಶೂಟಿಂಗ್ ಮಾಡಬೇಕಿತ್ತು. ಆದರೆ, ಎರಡು ದಿನ ಮಳೆಯ ಕಾರಣ ಕ್ಯಾನ್ಸಲ್ ಮಾಡಬೇಕಾಯಿತು. ಒಮ್ಮೆ ವೀರಭದ್ರಸ್ವಾಮಿಯ ದೊಡ್ಡ ಪ್ರತಿಮೆಗೆ ಪೇಂಟ್ ಮಾಡುವಾಗ ಚಿತ್ರತಂಡದವರೊಬ್ಬರು ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡರು. ಆಗ ಒಂದು ತಿಂಗಳು ಮತ್ತೆ ಮುಂದೂಡಬೇಕಾಯಿತು. ಮರಳಿ ಬಂದು ಪೂಜೆ ನಡೆಸಿ ಶೂಟಿಂಗ್ ಮತ್ತೆ ನಡೆಸಿದೆವು. ಆರನೇ ದಿನ ಶೂಟಿಂಗ್ ವೇಳೆ 5 ನಿಮಿಷ ನಾನು ಸಂಪೂರ್ಣವಾಗಿ ಮೈಮರೆತಿದ್ದೆ. ಇಂತಹ ಅನುಭವಗಳು ನನ್ನಲ್ಲೂ ನಂಬಿಕೆ ಹೆಚ್ಚಿಸಿದೆ. ಜತೆಗೆ ನಾನು ಆಗಾಗ ಕೊಡಗಿನ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತೇನೆ. ನನ್ನ ಎರಡನೇ ತಾಯಿ ಆಕೆ.
ಇದನ್ನೂ ಓದಿ : ವ್ಯಾಕ್ಷಿನ್ ವಾರ್ನಲ್ಲಿ ಕಾಂತಾರ ಚೆಲುವೆ; ಸಲಾರ್ ರಿಲೀಸ್ ದಿನವೇ ವಿವೇಕ್ ಅಗ್ನಿಹೋತ್ರಿ ಸಿನಿಮಾ
- “ಮಾರ್ಕ್ ಆ್ಯಂಟನಿ’ಯಲ್ಲಿ ಏನನ್ನು ನಿರೀಸಬಹುದು?
– ಟೈಮ್ ಟ್ರಾವೆಲ್ ಕುರಿತ ಸಿನಿಮಾ, ದೃಶ್ಯವೈಭವವಿದೆ. ಕರೊನಾ ಬಳಿಕ ಥಿಯೇಟರ್ಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಆಡಿಯನ್ಸ್ನ ಮತ್ತೆ ಥಿಯೇಟರ್ಗೆ ಬರುವಂತೆ ಮಾಡುವ ಸಿನಿಮಾ. ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸೆ. 15ರಂದು ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಸೆ. 22 ಹಿಂದಿಯಲ್ಲಿ ಬಿಡುಗಡೆಯಾಗಲಿದೆ. - ಸಿನಿಮಾ ನಿರ್ದೇಶಿಸಲು ಸಿದ್ಧತೆ ಹೇಗೆ ನಡೆಯುತ್ತಿದೆ.
– 34ನೇ ಚಿತ್ರವನ್ನು ನಾನೇ ನಿರ್ದೇಶಿಸಲಿದ್ದೇನೆ. “ತುಪ್ಪರಿವಾಲನ್ 2′ ಮುಂದಿನ ವರ್ಷ ಪ್ರಾರಂಭವಾಗಲಿದೆ. ಲಂಡನ್ನಲ್ಲಿ ನಡೆಯುವ ಕೊಹಿನೂರ್ ವಜ್ರದ ಕುರಿತ ಕಥೆ.