More

    ಗ್ಯಾಂಗ್​ಸ್ಟರ್​ ಅವತಾರದಲ್ಲಿ ವಿಕ್ರಮ್ ರವಿಚಂದ್ರನ್​; ಪುತ್ರನ ಚಿತ್ರಕ್ಕೆ ತಂದೆ ಕೊಟ್ಟ ಟೈಟಲ್ ಏನು?

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಎರಡನೇ ಸಿನಿಮಾದ ಶೀರ್ಷಿಕೆ ಇಂದು ಅನಾವರಣಗೊಂಡಿದೆ. ವಿಶೇಷವೆಂದರೆ ಪುತ್ರನ ಈ ಚಿತ್ರಕ್ಕೆ ರವಿಚಂದ್ರನ್ ಅವರೇ ಟೈಟಲ್ ಫಿಕ್ಸ್ ಮಾಡಿದ್ದಾರೆ. ಅರ್ಥಾತ್, ಈ ಸಿನಿಮಾದ ಶೀರ್ಷಿಕೆ ಸೂಚಿಸಿದ್ದೇ ಕ್ರೇಜಿಸ್ಟಾರ್.

    ಇಂದು ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ರಮ್ ರವಿಚಂದ್ರನ್ ಅಭಿನಯದ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್ ಕಂಪ್ಲೀಟ್ ಗ್ಯಾಂಗ್​​ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡರು. ‘ತ್ರಿವಿಕ್ರಮ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ್ದ ವಿಕ್ಕಿ, ಈಗ ರಾ ಹಾಗೂ ಗ್ಯಾಂಗ್​​ಸ್ಟರ್​​ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ಮುಂದಾಗಿದ್ದಾರೆ. ಅಂದಹಾಗೆ ಪುತ್ರನ ಈ ಚಿತ್ರಕ್ಕೆ ರವಿಚಂದ್ರನ್ ಕೊಟ್ಟಿರುವ ಟೈಟಲ್ ‘ಮುಧೋಳ್’.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ತ್ರಿವಿಕ್ರಮ ರಿಲೀಸ್ ಆಗಿದ್ದು ಜೂ.24, ನನ್ನ ಎರಡನೇ ಸಿನಿಮಾದ ಟೈಟಲ್ ಇಂದು ಲಾಂಚ್ ಮಾಡುತ್ತಿದ್ದೇವೆ ಎಂದ ವಿಕ್ರಮ್ ರವಿಚಂದ್ರನ್​, ತಾವೊಂದು ಬ್ರ್ಯಾಂಡ್ ಸೆಟ್ ಮಾಡುವ ಆಸೆ ಇಟ್ಟುಕೊಂಡಿದ್ದನ್ನೂ ಹೇಳಿಕೊಂಡರು. ತುಂಬಾ ಮಂದಿ ‘ವಿಕೆಆರ್’ ಎಂದರೆ ಏನು ಎಂದು ಕೇಳುತ್ತಿದ್ದರು. ‘ವಿಕೆಆರ್’ ಅಂದರೆ ವಿಕ್ರಮ್ ರವಿಚಂದ್ರನ್ ಅಂತ. ವಿಕೆಆರ್ ಬ್ರ್ಯಾಂಡ್ ಶುರು ಮಾಡೋಣ ಅಂದುಕೊಂಡಿದ್ದೇನೆ. ವಿ ಅಂದರೆ ವೀರಸ್ವಾಮಿ, ಆರ್​ ಅಂದರೆ ರವಿಚಂದ್ರನ್, ಮಧ್ಯ ಕೆ ಅಂದರೆ ಕನ್ನಡ ಎಂದು ಹೇಳಿದ ಅವರು, ಪ್ರಯತ್ನ ನಿರಂತರ, ಪ್ರಯತ್ನ ಮಾಡಿ ಜೀವನದಲ್ಲಿ ಗೆಲುವುದು ಮುಖ್ಯವಲ್ಲ, ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದಿದ್ದು, ಇದು ನನ್ನ ಎರಡನೇ ಹೆಜ್ಜೆ, ನಿಮ್ಮ ಪ್ರೀತಿ ಹಾರೈಕೆ ಹೀಗೇ ಇರಲಿ ಎಂದು ಅಭಿಮಾನಿಗಳನ್ನು ಕೇಳಿಕೊಂಡರು.

    ಗ್ಯಾಂಗ್​ಸ್ಟರ್​ ಅವತಾರದಲ್ಲಿ ವಿಕ್ರಮ್ ರವಿಚಂದ್ರನ್​; ಪುತ್ರನ ಚಿತ್ರಕ್ಕೆ ತಂದೆ ಕೊಟ್ಟ ಟೈಟಲ್ ಏನು?

    ಇದನ್ನೂ ಓದಿ: ಒಬ್ಬ 14 ಫ್ಲ್ಯಾಟ್​ಗಳ ಒಡೆಯ, ಇನ್ನೊಬ್ಬ 15 ಸೈಟ್​ಗಳ ಮಾಲೀಕ: ಇಲ್ಲಿದೆ ಭ್ರಷ್ಟರ ಆಸ್ತಿ ವಿವರ!

    ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕ, ಸಿನಿಮಾ ಬರಹಗಾರ ಆಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ್ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಹೆಜ್ಜೆ. ಈ ಸಿನಿಮಾದಲ್ಲಿನ ಶ್ವಾನದ ಕುರಿತು ನಿರ್ದೇಶಕ ಕಾರ್ತಿಕ್ ಮಾತನಾಡುತ್ತ, ‘ಮುಧೋಳ್’ಗಾಗಿ ತುಂಬಾ ಕಡೆ ಹುಡುಕಾಡಿದೆವು. ನಮ್ಮ ಮ್ಯಾನೇಜರ್ ಹತ್ತಿರ ಹೇಳಿದೆ. ತ್ಯಾಗರಾಜ್ ಎಂಬುವವರು ಆ ಶ್ವಾನವನ್ನು ತರಬೇತುಗೊಳಿಸಿದ್ದಾರೆ. ಟೈಟಲ್ ಟೀಸರ್​ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

    ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಈಶ್ವರಿ ಕಂಬೈನ್ಸ್ ಒಂದು ಪರಂಪರೆ. ನಾಯಕಿಯರು ರವಿಚಂದ್ರನ್ ಅವರ ಜೊತೆ ಕೆಲಸ ಮಾಡಬೇಕು ಎಂದು ಕೇಳಿಕೊಳ್ಳುತ್ತಿದ್ದರು. ಅದೇ ರೀತಿ ರೈಟರ್ಸ್ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಅಂದುಕೊಳ್ಳುತ್ತಿದ್ದಾರೆ. ನಾನು ಆ ಸಂಸ್ಥೆಯ ವಿಕ್ರಮ್ ಅವರ ಜೊತೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ ಎಂದರು.

    ಗ್ಯಾಂಗ್​ಸ್ಟರ್​ ಅವತಾರದಲ್ಲಿ ವಿಕ್ರಮ್ ರವಿಚಂದ್ರನ್​; ಪುತ್ರನ ಚಿತ್ರಕ್ಕೆ ತಂದೆ ಕೊಟ್ಟ ಟೈಟಲ್ ಏನು?

    ಇದನ್ನೂ ಓದಿ: ವಿಷ್ಣುವರ್ಧನ್ ಗುಂಗು: ಸೆಟ್ಟೇರಿತು ಮತ್ತೊಂದು ಚಿತ್ರ ‘ಮಾರ್ಗರೇಟ್-ಲವರ್ ಆಫ್ ರಾಮಾಚಾರಿ’

    ಎಸ್. ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆ್ಯಕ್ಷನ್ ಈ ಚಿತ್ರಕ್ಕಿದೆ. ತಾಂಡವ್ ಸ್ಟುಡಿಯೋಸ್ ಬ್ಯಾನರ್​ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡುತ್ತಿರುವ ‘ಮಧೋಳ್’ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಷ್​, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನಗಳ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದೆ.

    ರಕ್ತದಲ್ಲಿ ಬರೆದುಕೊಡುತ್ತೇನೆ, ನಂಬಿಕೆದ್ರೋಹಿ ಶೆಟ್ಟರ್ ಗೆಲ್ಲಲು ಸಾಧ್ಯವಿಲ್ಲ, ಅವರನ್ನು ಸೋಲಿಸುವುದೊಂದೇ ಗುರಿ: ಬಿಎಸ್​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts