ವಿಜಯನಗರ: ಪೊಲೀಸ್ ಇಲಾಖೆಯ ಮೇಲೂ ಕರೊನಾ ಮೃತ್ಯು ಛಾಯೆ ಆವರಿಸಿದೆ. ಈಗಾಗಲೇ ಸಾಕಷ್ಟು ಪೊಲೀಸ್ ಸಿಬ್ಬಂದಿತನ್ನು ತನ್ನ ಮೃತ್ಯುಕೂಪಕ್ಕೆ ಸೆಳೆದಿರುವ ಕರೊನಾ ಇದೀಗ ಕೂಡ್ಲಿಗಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ರನ್ನು ಬಲಿಪಡೆದುಕೊಂಡಿದೆ.
ವಿರೂಪಾಕ್ಷಪ್ಪ (58) ಕರೊನಾಗೆ ಬಲಿಯಾದ ಎಎಸ್ಐ. ಇವರು ಮೂಲತಃ ಸಂಡೂರು ತಾಲೂಕಿನ ಚೋರನೂರು ಗ್ರಾಮದವರು. ಕಳೆದ ಕೆಲ ದಿನಗಳ ಹಿಂದೆ ಕರೊನಾ ಧೃಡಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿರಿ: ಕರೊನಾವನ್ನೇ ಮಣಿಸಿದವರ ಮನದಾಳ; ಸಾವು-ನೋವುಗಳ ನಡುವೆ ಆಶಾಕಿರಣ..
ಜಿಂದಾಲ್ನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿರೂಪಾಕ್ಷಪ್ಪ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. (ದಿಗ್ವಿಜಯ ನ್ಯೂಸ್)
ಡೊಮಿನಿಕಾದಲ್ಲಿ ಬಂಧನವಾಗಿರೋ ಮೆಹುಲ್ ಚೋಕ್ಸಿ ಫೋಟೋ ವೈರಲ್: ಗಡಿಪಾರು ಆದೇಶ ಮುಂದೂಡಿಕೆ