More

    ಕೆಲವರು ಆಡೋ ಮಾತಿನಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ; ಮನನೊಂದು ಕಣ್ಣೀರಿಟ್ಟ ವರ್ತೂರ್ ಸಂತೋಷ್

    ಬೆಂಗಳೂರು: ತಮ್ಮ ನೇರವಾದ ಮಾತಿನಿಂದಲೇ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ವರ್ತೂರ್​ ಸಂತೋಷ್​, ಬಿಗ್​ ಬಾಸ್​ ಮನೆಯಿಂದ ಹೊರಬಂದ ಬಳಿಕ ಸೆಲೆಬ್ರಿಟಿ ಆಗಿದ್ದಾರೆ. ರಾಜ್ಯದ ಪ್ರತಿ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ಸಂತೋಷ್​ಗೆ ಕೆಲವು ನಿಂದಕರು ಸಹ ಇದ್ದಾರೆ. ದೊಡ್ಮನೆಯೊಳಗಡೆ ಅವರು ನಡೆದುಕೊಂಡ ವರ್ತನೆ ಅನೇಕರಿಗೆ ಇಷ್ಟ ಆಗಿತ್ತು. ದೊಡ್ಮನೆಯಿಂದ ಬಂದನಂತರದಲ್ಲಿ ಹೊರಗಡೆ ಸಾಕಷ್ಟು ವಿವಾದಗಳು ಸೃಷ್ಟಿಯಾಗಿತ್ತು.

    ಇದೀಗ ಹೊಸ ವಿಡಿಯೋ ಒಂದರಲ್ಲಿ ನಿಂದಕರ ಮಾತಿಗೆ ಮನನೊಂದು ಕಣ್ಣೀರು ಹಾಕಿರುವ ಸಂತೋಷ್, ನಿಂದಕರಿಗೆ ತಕ್ಕ ಶಾಸ್ತಿ ಕಲಿಸಬೇಕೆಂದು ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನೇಕರು ಸಂತೋಷ್​ ಬೆಂಬಲಕ್ಕೆ ನಿಂತಿದ್ದಾರೆ.

    ಈ ಕುರಿತು ಮಾತನಾಡಿರುವ ಸಂತೋಷ್​, ನಾನು ಯಾರಿಗೂ ಮೋಸ ಮಾಡಿದವನಲ್ಲ, ಯಾರ ಅನ್ನವನ್ನೂ ಕಿತ್ತುಕೊಂಡವನಲ್ಲ. ನನ್ನ ಮನೆಯ ಅನ್ನ ತಿಂದು, ನಾನು ಮಾಡಿದ ಸಾವಿರ, ಎರಡು ಸಾವಿರ ಹಣಕ್ಕೆ ಬರುತ್ತಿದ್ದ ಯಲಹಂಕ ಮಂಜು ಇಂದು ನನ್ನ ವಿರುದ್ಧ ಬಾಯಿಗೆ ಬಂದಂತೆ ಹೇಸಿಗೆ ಮಾತನಾಡುತ್ತಿದ್ದಾನೆ.

    Varthur Santhosh

    ಇದನ್ನೂ ಓದಿ: ಕ್ರಿಸ್​ ಗೇಲ್​-ಎಬಿಡಿ ಹೆಸರಿನಲ್ಲಿರುವ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​; ಏನದು?

    ಒಂದಲ್ಲ ಎರಡಲ್ಲ ಬಹಳ ನೋವಾಗುತ್ತೆ. ಒಂದು ವಿಡಿಯೋ ಮುಂದೆ ಬಂದು ಮಾತಾಡಬೇಕಾದರೆ, ಅವರವರ ನೋವು ಅವರಿಗೆ ಗೊತ್ತಿರುತ್ತೆ. ನಮ್ಮ ತಾಯಿ ನಮ್ಮ ತಂದೆಯನ್ನು ಕಳೆದುಕೊಂಡ ಮೇಲೆ ನನ್ನನ್ನು ಅಷ್ಟೇ ಗೌರವದಿಂದ ಸಾಕಿರೋದು. ನಮ್ಮ ರೇಸ್‌ನಲ್ಲಿ ಇವರೆಲ್ಲ ಒಂದು ಸಾವಿರ, ಎರಡು ಸಾವಿರಕ್ಕೆ ಬಂದವರು. ಇದೇ 2022ರಲ್ಲಿ ರೇಸ್ ಮಾಡಿದಾಗ ಬಂದು ಎಂಜಲು ಕಾಸು ತಿಂದ ಮಕ್ಕಳು ಇವರು. ನಮ್ಮ ಅನ್ನ ತಿಂದು ಇವತ್ತು ನಮಗೆ ಅನ್ನುತ್ತಾರೆ. ಅದಕ್ಕೆ ಭಗವಂತನೇ ಸಾಕ್ಷಿ.

    ನನ್ನ ತಾಯಿ, ನನ್ನ ಸ್ನೇಹಿತರು, ಬಂಧುಗಳ ಬಗ್ಗೆ, ನನ್ನ ಸಂಸಾರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಜನರು, ಧರ್ಮ ದೇವರುಗಳು, ನಾನು ಯಾರಿಗೂ ಮೋಸ ಮಾಡಿದವನಲ್ಲ, ನಾನು ಕಣ್ಣೀರು ಹಾಕಿದ್ರೆ ಡ್ರಾಮಾ ಅಂತ ಹೇಳ್ತಾರೆ. ಜನರೇ ಧರ್ಮ ದೇವತೆಗಳು. ನಾನು ಯಾವ ಊರಿಗೆ ಹೋದರೂ ನನಗೆ ಮರ್ಯಾದೆ ಕೊಡ್ತಾರೆ. ಮಾನ ಮರ್ಯಾದೆಗೋಸ್ಕರ ನಾವು ಬದುಕಿದ್ದೇವೆ. ನನ್ನ ತಂದೆ ತುಂಬ ಕಷ್ಟಪಟ್ಟಿದ್ದಾರೆ. ಆದರೆ ಅವರಿಗೆ ಇವರೆಲ್ಲ ಕೆಟ್ಟದಾಗಿ ಮಾತಾಡ್ತಾರೆ. ಇದನ್ನೆಲ್ಲ ಕೇಳಿ ನಮ್ಮ ತಾಯಿ ಊಟ ಮಾಡ್ತಿಲ್ಲ. ಜನರೇ ನನ್ನ ನಿಂದಕರಿಗೆ ಬುದ್ಧಿ ಕಲಿಸಬೇಕು ಎಂದು ಹೇಳುತ್ತಾ ವರ್ತೂರು ಸಂತೋಷ್​ ಕಣ್ಣೀರು ಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts