ಲಖನೌ: ಕರೊನಾ ಪೂರ್ತಿ ದೇಶವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಆಕ್ಸಿಜನ್ ಸಿಗದೆ ಪ್ರತಿದಿನ ನೂರಾರು ಮಂದಿ ಬಲಿಯಾಗುವಂತೆ ಮಾಡಿದೆ. ಇಂಥ ಸಮಯದಲ್ಲಿ ಎಲ್ಲೋ ಕೆಲವರು ಸಮಾಜ ಸೇವೆಗೆ ಮುಂದಾಗಿರುವುದನ್ನು ನಾವು ನೋಡಬಹುದು. ಅದೇ ರೀತಿ ಉತ್ತರ ಪ್ರದೇಶದ ಉದ್ಯಮಿಯೊಬ್ಬರು ಸೋಂಕಿತರಿಗೆ ಕೇವಲ 1 ರೂಪಾಯಿಗೆ ಆಕ್ಸಿಜನ್ ಸಿಲಿಂಡರ್ ಕೊಡುವ ಮೂಲಕ ದೇವರಾಗಿದ್ದಾರೆ.
ಹಮಿರ್ಪುರ ಜಿಲ್ಲೆಯ ಉದ್ಯಮಿ ಮನೋಜ್ ಗುಪ್ತಾ ಈ ರೀತಿ ಪರೋಪಕಾರ ಮಾಡುತ್ತಿರುವ ವ್ಯಕ್ತಿ. ಅಂದ ಹಾಗೆ ಈ ಮನೋಜ್ಗೆ ಕಳೆದ ವರ್ಷ ಕರೊನಾ ಸೋಂಕು ದೃಢವಾಗಿತ್ತಂತೆ. ಆ ಸಮಯದಲ್ಲಿ ಅವರು ಅನುಭವಿಸಿದ ನೋವಿನಿಂದ ಅವರು ಬೇಸತ್ತಿದ್ದರಂತೆ. ಸೋಂಕಿತರ ನೋವು ಗೊತ್ತಿರುವ ಕಾರಣದಿಂದಾಗಿ ಇದೀಗ ಸೋಂಕಿತರ ಸಹಾಯಕ್ಕೆ ಅವರು ಮುಂದಾಗಿದ್ದಾರೆ. ತಮ್ಮ ಕಾರ್ಖಾನೆಯಲ್ಲಿ ಪ್ರತಿದಿನ 1 ಸಾವಿರ ಆಕ್ಸಿಜನ್ ಸಿಲಿಂಡರ್ ತುಂಬಿಸುವ ಸಾಮರ್ಥ್ಯವಿದ್ದು, ಸೋಂಕಿತರು ಅಥವಾ ಅವರ ಸಂಬಂಧಿಗಳಿಂದ 1 ರೂಪಾಯಿ ಪಡೆದು ಒಂದು ಆಕ್ಸಿಜನ್ ಸಿಲಿಂಡರ್ ತುಂಬಿಸಿಕೊಡುತ್ತಿದ್ದಾರೆ.
ಹೆಚ್ಚಿನ ಹಣ ಕೊಟ್ಟು ಆಕ್ಸಿಜನ್ ಸಿಲಿಂಡರ್ ಖರೀದಿಸಲಾಗದ ಸಾಕಷ್ಟು ಬಡವರು ಮನೋಜ್ ಬಳಿ ಬಂದು ಆಕ್ಸಿಜನ್ ಪಡೆದು ಹೋಗುತ್ತಿದ್ದಾರೆ. ಸೋಂಕಿತರ ಆರ್ಟಿಪಿಸಿಆರ್ ವರದಿ ತೋರಿಸಿದವರಿಗೆ ಆಕ್ಸಿಜನ್ ಕೊಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ! ರಾಜ್ಕುಮಾರ್ ಬರ್ತ್ಡೇ ವಿಷ್ ಮಾಡಿದ ಆರ್ಸಿಬಿ
ಐ ಡ್ರಾಪ್ ಬದಲು ನೈಲ್ ಗ್ಲ್ಯೂವನ್ನು ಕಣ್ಣಿಗೆ ಹಾಕಿಕೊಂಡ ಮಹಿಳೆ! ಆಮೇಲೆ ಏನಾಯ್ತು ಗೊತ್ತಾ?