More

    ಕರೊನಾ ನರಕಾಸುರನ ವಿರುದ್ಧದ ಹೋರಾಟಕ್ಕೆ ಪುತ್ತಿಗೆ ಮಠದಿಂದ 10 ಲಕ್ಷ ರೂಪಾಯಿ ದೇಣಿಗೆ

    ಉಡುಪಿ: ದೇಶಾದ್ಯಂತ ಕರೊನಾ ವೈರಸ್​ ಸೋಂಕಿನ ಅಟ್ಟಹಾಸ ಮುಂದುವರಿದಿದೆ. ಇದರ ವಿರುದ್ಧ ಹೋರಾಡಲು ಪುತ್ತಿಗೆ ಮಠದ ವತಿಯಿಂದ 10 ಲಕ್ಷ ರೂಪಾಯಿ ದೇಣಿಗೆ ನೀಡುತ್ತಿರುವುದಾಗಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
    ಕರೊನಾವನ್ನು ನರಕಾಸುರನಿಗೆ ಹೋಲಿಸಿರುವ ಶ್ರೀಗಳು, ಇದನ್ನು ಉದ್ದೇಶಪೂರ್ವಕವಾಗಿ ಪಸರಿಸುತ್ತಿರುವ ಸಾಧ್ಯತೆ ಇರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.

    ಕರೊನಾವನ್ನು ಉಲ್ಟಾ ಹೇಳಿದರೆ ನರಕ ಎಂದಾಗುತ್ತದೆ. ಇಂಥ ನರಕಾಸರನ ಸಂಹಾರ ಮಾಡಲು ಕೃಷ್ಣನೇ ಮತ್ತೊಮ್ಮೆ ಅವತಿರಬೇಕಿದೆ ಎಂದು ಹೇಳಿದ್ದಾರೆ.

    ಮಾನವ ಸಮುದಾಯ ಮಾಡಿದ ತಪ್ಪುಗಳಿಂದ ಈ ಪರಿಸ್ಥಿತಿ ಬಂದಿದೆ. ಪ್ರಾಚೀನ ಮೌಲ್ಯಗಳನ್ನು ಬದಿಗೆ ಇಟ್ಟು, ಅನಗತ್ಯ ಪ್ರಾಣಿ ಸಂಹಾರ ಮಾಡುತ್ತಿರುವುದು ಕರೊನಾ ಪಿಡುಗಿಗೆ ಕಾರಣವಾಗಿದೆ. ಮನುಷ್ಯನ ದೇಹ ಸಸ್ಯಾಹಾರಕ್ಕೆ ಸೂಕ್ತವಾಗಿದೆ. ಅದನ್ನು ಬಿಟ್ಟು ಮನುಷ್ಯ ಬದುಕಲು ಮಾಂಸಾಹಾರ ಸೇವಿಸುವುದು ಸರಿಯಲ್ಲ. ಅದರ ಅಗತ್ಯವೂ ಇಲ್ಲ. ಜೀವಂತ ಪ್ರಾಣಿಗಳನ್ನು ಹಿಡಿದು ತಿನ್ನುವುದರಿಂದ ಕರೊನಾ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮಾನವ ಸಮುದಾಯ ವಿಧ್ವಂಸಕ ಚಿಂತನೆಯಲ್ಲಿ ಸಾಗುತ್ತಿದೆ. ಭಗವಂತ ಭೂಮಿಯನ್ನು ಸೃಷ್ಟಿ ಮಾಡಿದ್ದು ಬದುಕುವುದಕ್ಕಾಗಿ. ಆದರೆ ಮನುಷ್ಯರು ಶಸ್ತ್ರಾಸ್ತ್ರ ಒಗ್ಗೂಡಿಸುವಲ್ಲಿ ನಿರತರಾಗಿದ್ದಾರೆ. ಕರೊನಾದಿಂದ ಜಗತ್ತನ್ನು ನಾಶ ಮಾಡಬಹುದು ಎಂದು ದುಷ್ಟರಿಗೆ ಗೊತ್ತಾಗಿದೆ. ಆದ್ದರಿಂದ, ಉದ್ದೇಶಪೂರ್ವಕವಾಗಿ ಕರೊನಾ ಹರಡುವ ಪ್ರಯತ್ನವೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಒಬ್ಬ ದುಷ್ಟನಿಂದ ಸಮಾಜಕ್ಕೆ ದೇಶಕ್ಕೆ ತೊಂದರೆಯಾಗುತ್ತದೆ. ಜಾಗತಿಕ ವೇದಿಕೆಯಲ್ಲಿ ಕರೊನಾ ಬಗ್ಗೆ ಚರ್ಚೆಯಾಗಬೇಕು. ಈಗಾಗಲೇ ವಿಶ್ವದ ಧಾರ್ಮಿಕ ನಾಯಕರ ಜತೆ ನಾವು ಚರ್ಚಿಸಿದ್ದೇವೆ. ಈ ಪಿಡುಗಿನ ವಿರುದ್ಧ ದೂರಗಾಮಿ ಹೋರಾಟದ ಚಿಂತನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

    ಇತರ ದೇಶಗಳನ್ನು ಕಂಡು ಸಮಸ್ಯೆಯ ತೀವ್ರತೆಯನ್ನು ಅರಿಯಬೇಕು. ಕರೊನಾದಿಂದ ಪುತ್ತಿಗೆ ಮಠದ ವಿದೇಶಿ ಶಾಖೆಗಳಿಗೆ ತೊಂದರೆಯಾಗಿದೆ. ಅಮೆರಿಕ ಮತ್ತು ಬ್ರಿಟನ್​ನ 11 ಶಾಖೆಗಳನ್ನು ಮುಚ್ಚಿದ್ದೇವೆ. ಮಠದ ಸಿಬ್ಬಂದಿ, ಅರ್ಚಕರು ಗೊಂದಲದಲ್ಲಿದ್ದಾರೆ. ವಿದೇಶದ ಸರಕಾರಗಳು ನಮಗೆ ಸಾಕಷ್ಟು ಸಹಾಯ ಮಾಡಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಮಹಿಳೆಯರೇ ಮನೆಯಲ್ಲಿರುವ ಗಂಡುಮಕ್ಳನ್ನು ಹದ್ದುಬಸ್ತಿನಲ್ಲಿಡಿ- ರಸ್ತೆಗಿಳಿಯಲು ಬಿಡಬೇಡಿ ಎಂದ ಮಲೆಯಾಳಿ ನಟ ಸೂರಜ್​ ವೆಂಜರಮೂಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts