More

    ಅಮೆರಿಕದ ಪುತ್ತಿಗೆ ಮಠದಲ್ಲಿ ಬೃಹತೀ ಸಹಸ್ರ ಯಾಗ

    ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರ ಪೀಠಾರೋಹಣದ ಸುವರ್ಣ ಮಹೋತ್ಸವದ ಅಂಗವಾಗಿ ಅಮೆರಿಕದ ಹೂಸ್ಟನ್​ ಮಹಾನಗರದಲ್ಲಿರುವ ಪುತ್ತಿಗೆ ಮಠದ ಶಿಷ್ಯರು, ಭಕ್ತರ ಸಹಕಾರದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತೀ ಸಹಸ್ರ ಯಾಗ ಸಂಪನ್ನಗೊಂಡಿತು.
    ವಿದೇಶ ಗಳಲ್ಲಿ ಭಾರತೀಯ ಗೋತಳಿ ರಕ್ಷಿಸುವ ಮತ್ತು ಬೆಳೆಸುವ ಉದ್ದೇಶದಿಂದ ನಿರ್ಮಿಸಿರುವ ವಿಶಾಲವಾದ ಗೋಶಾಲೆಯ ಆವರಣದಲ್ಲಿ ಯಾಗ ಆಯೋಜಿಸಲಾಗಿತ್ತು. ಸಾವಿರಕ್ಕೂ ಅಧಿಕ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.

    ಅರಣಿ ಮಥನ

    ಟೆಕ್ಸಾಸ್​ ಗೋ ಶಾಲಾ ಮತ್ತು ಗೀತಾ ಚಿಂತನ ಸಭಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದ ಉಸ್ತುವಾರಿಯನ್ನು ಹೂಸ್ಟನ್​ ಪುತ್ತಿಗೆ ಮಠದ ಹೂಸ್ಟನ್​ ಶಾಖೆಯ ಪ್ರಧಾನ ಅರ್ಚಕ ರಘುರಾಂ ಭಟ್​ ನಿರ್ವಹಿಸಿದ್ದರು. ಶ್ರೀ ಮಠದ ವಿದೇಶಿ ಶಾಖೆಗಳ ಪ್ರಧಾನ ಕಾಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ವೇದಮೂರ್ತಿ ಅತ್ತೂರ್​ ರವೀಂದ್ರ ಭಟ್​ ಮಾರ್ಗದರ್ಶನದಲ್ಲಿ ವಾದಿರಾಜ್​ ಭಟ್​, ಅವಿನಾಶ್​ ಭಟ್​ ಮತ್ತು ತ್ರಿವಿಕ್ರಮ ಭಟ್​ ಯಾಜಕರಾಗಿ ಸಹಕರಿಸಿದರು. ಸಾಂಪ್ರದಾಯಿಕ ಅರಣಿ ಮಥನದೊಂದಿಗೆ ಅಗ್ನಿಜನನ ಮಾಡಲಾಯಿತು.

    ಗರುಡ ಮಾದರಿಯ ಯಜ್ಞ ಕುಂಡ

    ಗೋಶಾಲೆಯಲ್ಲಿರುವ ಭಾರತದ ದೇಸೀಯ ದನಗಳ ಗೋಮಯದಿಂದಲೇ ಯಜ್ಞವೇದಿಕೆಯನ್ನು ಸಾರಿಸಲಾಗಿತ್ತು. ಹೋಮಾವಸಾನದಲ್ಲಿ ಯಜ್ಞ ಮಂಟಪದ ಬಳಿಯೇ ಗೀರ್​ ಜಾತಿಯ ದನಗಳಿಗೆ ಪೂಜೆ ಸಲ್ಲಿಸಲಾಯಿತು. 360 ಇಟ್ಟಿಗೆಗಳಿಂದ ಗರುಡ ಮಾದರಿಯ ಯಜ್ಞ ಕುಂಡ ನಿರ್ಮಿಸಲಾಗಿತ್ತು. ಪ್ರತಿ ಇಟ್ಟಿಗೆಯಲ್ಲೂ ವಿಷ್ಣು ಸಹಸ್ರನಾಮ ಬರೆಯಲಾಗಿತ್ತು. 54 ಬಗೆಯ ವಿವಿಧ ಅಪೂರ್ವ ಔಷಧ ಮತ್ತು ವನಸ್ಪತಿಗಳನ್ನು ಯಜ್ಞಕ್ಕಾಗಿಯೇ ಭಾರತದಿಂದ ತರಿಸಿಕೊಳ್ಳಲಾಗಿತ್ತು. ಉಡುಪಿಯಿಂದ ಪುತ್ತಿಗೆ ಶ್ರೀಪಾದರು ವೀಡಿಯೋ ಮೂಲಕ ಸಂದೇಶ ನೀಡಿದರು. ಉಡುಪಿ ಶೈಲಿಯ ಪ್ರಸಾದ ಭೋಜನ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts