More

    ರಾಜ್ಯದಲ್ಲಿ ಸಿಡಿಲಾತಂಕ: ಇಂದು ಮತ್ತಿಬ್ಬರ ಸಾವು, 3 ದಿನಗಳಲ್ಲಿ ಏಳು ಬಲಿ!

    ವಿಜಯಪುರ: ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆ ಮುಂದುವರಿಯಲಿದೆ ಎಂಬ ಮುನ್ಸೂಚನೆಯನ್ನು ಇಂದು ನೀಡಲಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಸಿಡಿಲಾತಂಕವೂ ಹೆಚ್ಚಾಗಿದೆ. ಮೊನ್ನೆಯಷ್ಟೇ ರಾಜ್ಯದಲ್ಲಿ ಐವರು ಸಿಡಿಲಿಗೆ ಬಲಿಯಾಗಿದ್ದು, ಇಂದು ಮತ್ತಿಬ್ಬರು ಸಿಡಿಲಪ್ಪಳಿಸಿ ಸಾವಿಗೀಡಾಗಿದ್ದಾರೆ.

    ಗದಗ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಮೂವರು ಸಾವಿಗೀಡಾಗಿದ್ದರು. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹರಿಪುರ ನಿವಾಸಿ ಮುರುಗೇಶ್ ಹೊಸಮನಿ (44), ಖಾನಪುರ ಗ್ರಾಮದ ನಿವಾಸಿ ಬಾಬು ದೊಡ್ಡಮನಿ (55), ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ನಿವಾಸಿ ಹನಮಪ್ಪ ಮನ್ನಾಪುರ ಸಿಡಿಲಿನಿಂದಾಗಿ ಮೃತಪಟ್ಟಿದ್ದರು.

    ಅದೇ ದಿನ ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ಹೊರಭಾಗದ ಸರ್ಕಾರಿ ಕಾಲೇಜ್ ಬಳಿ ಮರದ ಕೆಳಗೆ ನಿಂತಿದ್ದ ಟೈಲ್ಸ್ ಕಾರ್ಮಿಕ, ಹಸನಾಬಾದಿ ನಿವಾಸಿ ವೀರೇಶ ನಿಶೀಮಪ್ಪ ಹೊಸಮನಿ (25) ಸಾವಿಗೀಡಾಗಿದ್ದರು. ಅಲ್ಲದೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೆಟಗೇರಿಯ ಮನೀಶಾ ದತ್ತುಗೊರವ (35) ಸಿಡಿಲು ಬಡಿದು ಸಾವಿಗೀಡಾಗಿದ್ದರು.

    ಅದಾಗಿ ಒಂದೇ ದಿನದ ಅಂತರದಲ್ಲಿ ಅಂದರೆ ಇಂದು ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ ಸಿಡಿಲಿನ ಹೊಡೆತದಿಂದಾಗಿ ಇಬ್ಬರು ಕುರಿಗಾಹಿಗಳು ಮೃತಪಟ್ಟಿದ್ದಾರೆ. ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಬೀರಪ್ಪ ಶಿವಪ್ಪ ಬಡೆಗೋಳ (20), ಮಹೇಶ ಸತ್ಯಪ್ಪ ಬಡೆಗೋಳ (18) ಮೃತಪಟ್ಟವರು. ಈ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಕುರಿಗಳು ಕೂಡ ಸಾವಿಗೀಡಾಗಿವೆ.

    ಕರ್ನಾಟಕದಲ್ಲಿ ಯುಪಿ ಮಾಡೆಲ್​; ರಾಜ್ಯದ 50 ವಿಧಾನಸಭಾ ಕ್ಷೇತ್ರಗಳಲ್ಲಿ ಸಂತರ ಸ್ಪರ್ಧೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts