More

    ನಾಳೆ ಬೆಳ್ಳಂಬೆಳಗ್ಗೆ ‘ಊರ್ವಶಿ’ ಬಳಿ ‘ಹುಲಿಹಿಂಡು’; ಗರುಡ.. ವೃಷಭ.. ಮತ್ತು ಟೈಗರ್ ಡ್ಯಾನ್ಸ್​!

    ಬೆಂಗಳೂರು: ನಾಳೆ ಬೆಳ್ಳಂಬೆಳಗ್ಗೆ ಊರ್ವಶಿ ಬಳಿ ಹುಲಿಹಿಂಡು ಕಾಣಿಸಿಕೊಳ್ಳಲಿವೆ. ಅರ್ಥಾತ್, ಗಾಂಧಿನಗರದ ಊರ್ವಶಿ ಥಿಯೇಟರ್ ಬಳಿ ಟೈಗರ್ ಡಾನ್ಸ್​ ನೋಡುವ ಸೌಭಾಗ್ಯ ಸಿನಿಪ್ರಿಯರದ್ದಾಗಿರಲಿದೆ. ಹೌದು.. ಸಾಮಾನ್ಯವಾಗಿ ಹುಲಿಕುಣಿತ ಎಂದರೆ ಕರಾವಳಿಯಲ್ಲಿ, ಅದೂ ನವರಾತ್ರಿ ಸಂದರ್ಭದಲ್ಲಷ್ಟೇ ಹೆಚ್ಚಾಗಿ ಕಾಣಿಸಿಕೊಳ್ಳುವಂಥದ್ದು. ಅದನ್ನೀಗ ಬೆಂಗಳೂರಿನಲ್ಲೂ ನೋಡುವ ಅವಕಾಶ ಕಲಾಪ್ರಿಯರದ್ದಾಗಲಿದೆ.

    ಅಷ್ಟಕ್ಕೂ ಊರ್ವಶಿ ಬಳಿ ‘ಹುಲಿ’ ಕಾಣಿಸಿಕೊಳ್ಳಲು ಕಾರಣ, ಗರುಡ ಮತ್ತು ವೃಷಭ. ಅಂದರೆ ರಾಜ್​ ಬಿ ಶೆಟ್ಟಿ ನಿರ್ದೇಶನ ಹಾಗೂ ಅವರು ಮತ್ತು ರಿಷಬ್​ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಗರುಡ ಗಮನ, ವೃಷಭ ವಾಹನ’ ಸಿನಿಮಾದ ಬಿಡುಗಡೆಯ ವಿಶೇಷ ಆಕರ್ಷಣೆಯಾಗಿ ಚಿತ್ರತಂಡ ಈ ವ್ಯವಸ್ಥೆ ಮಾಡಿದೆ. ಸಿನಿಮಾ ಶೀರ್ಷಿಕೆಯಲ್ಲಿ ಪ್ರಾಣಿಗಳ ಮೊರೆ ಹೋಗಿರುವ ಚಿತ್ರತಂಡ, ಇದೀಗ ಸಿನಿಮಾ ಬಿಡುಗಡೆಯಲ್ಲಿ ಹುಲಿಗಳ ಮೊರೆ ಹೋದಂತಾಗಿದೆ.

    ಇದನ್ನೂ ಓದಿ: ಗರುಡ ಗಮನ, ವೃಷಭ ವಾಹನ: ಹರಿ ಇದ್ದಾನೆ, ಶಿವ ಇದ್ದಾನೆ, ‘ಅವಳಿಲ್ಲ’..!

    ಈ ಹಿಂದೆ ರಕ್ಷಿತ್ ಶೆಟ್ಟಿ ನಿರ್ದೇಶನದ ‘ಉಳಿದವರು ಕಂಡಂತೆ’ ಸಿನಿಮಾ ಹಾಡೊಂದರಲ್ಲಿ ಹುಲಿ ಕುಣಿತವಿತ್ತು. ಈಗ ರಕ್ಷಿತ್ ಶೆಟ್ಟಿ ಅವರ ‘ಪರಮ್ವಾ ಪಿಕ್ಚರ್ಸ್​’ ಮೂಲಕ ನಿರ್ಮಾಣಗೊಂಡಿರುವ ಈ ಸಿನಿಮಾದ ಬಿಡುಗಡೆಯಲ್ಲಿ ರಿಯಲ್​ ಆಗಿ ಹುಲಿ ಕುಣಿತ ಇರಲಿದೆ. ನಾಳೆ ಅಂದರೆ ನ. 19ರಂದು ‘ಗರುಡ ಗಮನ, ವೃಷಭ ವಾಹನ’ದ ಮೊದಲ ದಿನದ ಮೊದಲ ಪ್ರದರ್ಶನಕ್ಕೂ ಮುನ್ನ ಪರಿಣತ ಹುಲಿವೇಷ ತಂಡದಿಂದ ಟೈಗರ್ ಡಾನ್ಸ್​ ಇರಲಿದ್ದು, ಆ ಮೂಲಕ ಬಿಡುಗಡೆಗೆ ವಿಶೇಷ ಸೆಳೆತ ಕಲ್ಪಿಸುವ ಯೋಜನೆಯನ್ನು ಸಿನಿಮಾತಂಡ ಹಾಕಿಕೊಂಡಿದೆ.

    ನಾಳೆ ಬೆಳ್ಳಂಬೆಳಗ್ಗೆ 'ಊರ್ವಶಿ' ಬಳಿ 'ಹುಲಿಹಿಂಡು'; ಗರುಡ.. ವೃಷಭ.. ಮತ್ತು ಟೈಗರ್ ಡ್ಯಾನ್ಸ್​!

    ಬೆಡ್​ ಕೇಳಿದ ನಟಿಗೆ ಸಿಕ್ಕಿದ್ದು ಅರ್ಧಮಂಚ; ಒಂದು ಕೊಟ್ಟು ಇನ್ನೊಂದು ಕೊಟ್ಟಿಲ್ಲ ಎಂದು ಬೇಸರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts