More

    ಕುದುರೆ ಏರಿ ಬಂದು ತಾಲೂಕಿನ ಬಜೆಟ್​ ಮಂಡಿಸಿದ ಅಧ್ಯಕ್ಷರು!

    ಹಾವೇರಿ: ಬಜೆಟ್​ ಮಂಡನೆ ಎಂದರೆ ಅಲ್ಲಿ ಜನರು ಸಾಕಷ್ಟು ಕುತೂಹಲವನ್ನು ಹುಟ್ಟಿಸುತ್ತದೆ. ಅದಕ್ಕೆ ಕಾರಣ ಸರಳ. ಬಜೆಟ್​ ಜನರ ಜೀವನದ ದಿಕ್ಕನ್ನು ಬದಲಿಸುವ ಸಾಮರ್ಥ್ಯ ಇರುವ ವಿಚಾರ. ಆದರೆ ಈ ಪಟ್ಟಣ ಪಂಚಾಯಿತಿಯಲ್ಲಿ ಜನರು ಕುತೂಹಲದಿಂದ ಹುಬ್ಬೇರಿಸಿದ್ದು ಮಾತ್ರ ಬೇರೆ ಕಾರಣಕ್ಕೆ. ಇಲ್ಲಿನ ಅಧ್ಯಕ್ಷರು ಕುದುರೆಯನ್ನು ಏರಿ ಬಂದು ಬಜೆಟ್​ ಮಂಡಿಸಿದ್ದಾರೆ.

    ಈ ಅಪರೂಪದ ಘಟನೆ ನಡೆದದ್ದು ಹಾವೇರಿ ಜಿಲ್ಲೆಯ ಹಿರೆಕೇರೂರಿನಲ್ಲಿ. ಹಿರೇಕೆರೂರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಂಠಾಧರ ಅಂಗಡಿ ಕುದುರೆ ಏರಿ ಬಂದ ಪಟ್ಟಣ ಪಂಚಾಯಿತಿಯ ಅದ್ಯಕ್ಷರಾಗಿದ್ದಾರೆ. ತಾಲೂಕಿನ ಬಜೆಟ್​ಅನ್ನು ಪಟ್ಟಣ ಪಂಚಾಯಿತಿಯ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಬಜೆಟ್ ಮಂಡನೆಗೆ ಕುದುರೆ ಏರಿ ಬಂದ ಪಂಚಾಯಿತಿ ಅಧ್ಯಕ್ಷರು ಜನರ ಗಮನ ಸೆಳೆದಿದ್ದು 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts