ಕೊಡಗು: ಕರ್ನಾಟಕದ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹೆಸರನ್ನು ಬೆಳಗಿಸಿದ್ದಾರೆ. ಇದೀಗ ಭಾರತೀಯ ಬಾಕ್ಸಿಂಗ್ ತಂಡಕ್ಕೆ ಕೋಚ್ ಆಗಿ ಕೊಡಗು ಜಿಲ್ಲೆಯ ವಿಶು ಕುಟ್ಟಪ್ಪ ನೇಮಕ ಆಗಿದ್ದಾರೆ.
ಕೊಡಗು ಜಿಲ್ಲೆಯ ಕೋಕೇರಿ ಗ್ರಾಮದ ಎ.ವಿಶು ಕುಟ್ಟಪ್ಪ ಇದೀಗ ಎರಡನೇ ಬಾರಿಗೆ ನೇಮಕವಾಗಿದ್ದಾರೆ. ಇವರೂ ಸಾಮಾನ್ಯ ಆಟಗಾರರೇನಲ್ಲ. ಈ ಹಿಂದೆ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಯನ್ನು ಇವರು ಮುಡಿಗೇರಿಸಿಕೊಂಡಿದ್ದರು.
ಇದೀಗ ಕುಟ್ಟಪ್ಪ ಅವರು ಕೋಚ್ ಆಗಿ ನೇಮಕವಾಗಿರುವ ಬಗ್ಗೆ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ. ಹಿಂದೆ 2018ರಿಂದ 2021ರವರೆಗೆ ರಾಷ್ಟ್ರೀಯ ಕೋಚ್ ಆಗಿ ಇವರು ಕಾರ್ಯ ನಿರ್ವಹಿಸಿದ್ದರು. ಇದೀಗ ಅವರು ಮತ್ತೊಮ್ಮೆ ನೇಮಕವಾಗಿದ್ದು 2024 ರ ಒಲಂಪಿಕ್ಸ್ವರೆಗೆ ಇವರನ್ನು ಅದೇ ಸ್ಥಾನದಲ್ಲಿ ಮುಂದುವರಿಸುವ ಸಾಧ್ಯತೆ ಇದೆ. ಕುಟ್ಟಪ್ಪ ಅವರು ಹಿಂದೆ ಭಾರತೀಯ ಸೇನೆಯಲ್ಲೂ ಕರ್ತವ್ಯ ನಿಒರ್ವಹಿಸಿದ್ದರು. ಇವರು ಸಿ. ಅಚ್ಚಯ್ಯ – ಶಾಂತಿ ದಂಪತಿಯ ಪುತ್ರ.