ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯಕ್ರಿಯೆ ಸೋಮವಾರ ನಡೆದಿದೆ. ಬಾಲಿವುಡ್ನ ದಿಗ್ಗಜರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಪೊಲೀಸರು ಈಗಾಗಲೇ ಈ ಪ್ರಕರಣವನ್ನು ಆತ್ಮಹತ್ಯೆ ಎಂದೇ ಕರೆದಿದ್ದಾರೆ. ಆದರೆ ಇದೊಂದು ಕೊಲೆ, ಪೊಲೀಸರು ತನಿಖೆ ನಡೆಸಲೇ ಬೇಕು ಎಂದು ಒತ್ತಾಯಿಸಿದ್ದಾರೆ ನಟನ ಚಿಕ್ಕಪ್ಪ ಆರ್.ಸಿ ಸಿಂಗ್.
ಸುಶಾಂತ್ ಸಿಂಗ್ ಮೂಲತಃ ಬಿಹಾರದವರು. ಅವರ ಮನೆ ಪಟನಾದಲ್ಲಿದೆ. ಆರಂಭಿಕ ವಿದ್ಯಾಭ್ಯಾಸ ಪಟನಾದಲ್ಲಿಯೇ ನಡೆದಿತ್ತು. ನಂತರ ದೆಹಲಿಗೆ ಅವರ ಕುಟುಂಬ ವಲಸೆ ಬಂದಿತ್ತು. ಬಾಲಿವುಡ್ ನಂಟಿನ ಬಳಿಕ ಸುಶಾಂತ್ ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದರು.
ಇದನ್ನೂ ಓದಿ; ನಟ ಸುಶಾಂತ್ ಸಿಂಗ್ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?
ಪಟನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಶಾಂತ್ ಸಿಂಗ್ ಚಿಕ್ಕಪ್ಪ ಆರ್.ಸಿ. ಸಿಂಗ್, ಇದೊಂದು ಆತ್ಮಹತ್ಯೆ ಎಂದು ನಂಬಲು ಸಾಧ್ಯವಿಲ್ಲ. ಆತನ ಸಾವಿನ ಹಿಂದೆ ಏನೋ ಷಡ್ಯಂತ್ರವಿದೆ. ಅವನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲಿಸರು ತನಿಖೆ ನಡೆಸಲೇಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಡುವೆ, ಜನ್ ಅಧಿಕಾರ ಪಕ್ಷದ ಮುಖ್ಯಸ್ಥ ಪಪ್ಪು ಯಾದವ್ ಕೂಡ ಕೇಸ್ನ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಸುಶಾಂತ್ ಸಿಂಗ್ನನ್ನು ನಾನು ಬಲ್ಲೆ. ಆತ ಕರ್ಮ ಯೋಗಿಯಾಗಿದ್ದ, ಬಿಹಾರಕ್ಕೆ ಹೆಮ್ಮೆ ಎನಿಸಿದ್ದ. ಈ ಬಗ್ಗೆ ಕೇಂದ್ರ ಸರ್ಕಾರವೇ ಮುತುವರ್ಜಿ ವಹಿಸಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ; ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್ ಸಿಂಗ್; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ
ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಮೃತದೇಹ ಕಂಡು ಬಂದಿತ್ತು. ಹೀಗಾಗಿ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಘೋಷಿಸಿದ್ದಾರೆ. ಈ ಸಾವು ಇಡೀ ಬಾಲಿವುಡ್ಗೆ ಶಾಕ್ ನೀಡಿದೆ.
ಸಾವಿಗೆ ಖಿನ್ನತೆ ಜತೆಗೆ, ಆರ್ಥಿಕ ಸಂಕಷ್ಟವೂ ಕಾರಣ ಇರಬಹುದು ಎಂಬ ವಿಶ್ಲೇಷಣೆಗಳು ನಡೆದಿವೆ. ಆದರೆ, ಪೊಲೀಸ್ ತನಿಖೆಯಿಂದಷ್ಟೇ ನಿಜ ಬಯಲಾಗಲಿದೆ.
ಸರ್ಕಾರಿ ಜಾಹೀರಾತಿನಲ್ಲಿ ನೀಲಿಚಿತ್ರ ತಾರೆ; ನೆಟ್ಟಿಗರಿಂದಲೂ ಮೆಚ್ಚುಗೆ…!