More

    ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?

    ಮುಂಬೈ: ಬಾಲಿವುಡ್​ನ ಪ್ರತಿಭಾವಂತ ನಟ ಸುಶಾಂತ್​ ಸಿಂಗ್​ ರಜಪೂತ್​ನ ಆತ್ಮಹತ್ಯೆಗೆ ಕಾರಣ ಸದ್ಯಕ್ಕೆ ನಿಗೂಢವಾಗಿದೆ. ಬಾಂದ್ರಾದಲ್ಲಿರುವ ಡ್ಯುಪ್ಲೆಕ್ಸ್​ ಮನೆಯಲ್ಲಿ ಇತರ ನಾಲ್ವರೊಂದಿಗೆ ಸುಶಾಂತ್​ ನೆಲೆಸಿದ್ದರು. ಇಬ್ಬರು ಸಹಾಯಕರಾದರೆ, ಇನ್ನಿಬ್ಬರು ಕೆಲಸದವರು. ಭಾನುವಾರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್​ನನ್ನು ನೋಡಿದ ಕೆಲಸದವರು ಪೊಲಿಸರಿಗೆ ಮಾಹಿತಿ ನೀಡಿದ್ದರು.

    ಸ್ಥಳಕ್ಕೆ ತೆರಳಿದ ಪೊಲೀಸರು ಮನೆಯಲ್ಲಿದ್ದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕೂಪರ್​ ಆ್ಯಂಡ್​ ಬಾಬಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮುಂಬೈ ಪೊಲೀಸ್​ ಆಯುಕ್ತ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಈ ನಡುವೆ, ಸುಶಾಂತ್ ಕೊನೆಯ ಬಾರಿಗೆ ಬಾಲಿವುಡ್​ ಚಿತ್ರರಂಗದ ಗೆಳೆಯನೊಬ್ಬನಿಗೆ ಕೊನೆಯ ಬಾರಿಗೆ ಕರೆ ಮಾಡಿದ್ದಾರೆ. ಪೊಲೀಸರು ಆತನನ್ನು ಕರೆಯಿಸಿ ಹೇಳಿಕೆ ಪಡೆದುಕೊಳ್ಳಲಿದ್ದಾರೆ.

    ಇದನ್ನೂ ಓದಿ; ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​ 

    ಈ ಪ್ರಕರಣದಲ್ಲಿ ಇನ್ನೊಂದು ಮುಖ್ಯ ಬೆಳವಣಿಗೆ ಎಂದರೆ, ಸುಶಾಂತ್​ ಸಿಂಗ್​ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಏಕೆಂದರೆ, ಮನೆಯಲ್ಲಿ ಕೆಲ ವೈದ್ಯಕೀಯ ದಾಖಲೆಗಳು, ಖಿನ್ನತೆ ನಿವಾರಿಸಲು ನೀಡಲಾಗುವ ಔಷಧಗಳ ವಿವರಗಳಿರುವ ಚೀಟಿಗಳು ಪತ್ತೆಯಾಗಿವೆ.

    ಸುಶಾಂತ್​ಗಿದ್ದ ತೊಂದರೆ ಏನು? ಆತ ಯಾವ ರೀತಿಯ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದ ಮೊದಲಾದ ವಿವರಗಳನ್ನು ತಿಳಿದುಕೊಳ್ಳಲು ಪೋಲೀಸರು ವೈದ್ಯರ ಹೇಳಿಕೆಯನ್ನು ಪಡೆದುಕೊಳ್ಳಲಿದ್ದಾರೆ.

    ಇದನ್ನೂ ಓದಿ; ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು; ಸುಶಾಂತ್​ ಸಿಂಗ್​ ಬದುಕಲ್ಲಿ ರೀಲು​ ರಿಯಲ್ಲಾಗಲಿಲ್ಲ… 

    ಕಳೆದೆರಡು ತಿಂಗಳಲ್ಲಿ ಬಾಲಿವುಡ್​ನ ಇರ್ಫಾನ್ ಖಾನ್​, ರಿಷಿ ಕಪೂರ್​, ವಾಜಿದ್ ಖಾನ್​ ಸೇರಿ ನಾಲ್ಕು ಸೆಲೆಬ್ರಿಟಿಗಳನ್ನು ಹಿಂದಿಚಿತ್ರರಂಗ ಕಳೆದುಕೊಂಡಿದೆ.

    ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts