ಮುಂಬೈ: ಬಾಲಿವುಡ್ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ನ ಆತ್ಮಹತ್ಯೆಗೆ ಕಾರಣ ಸದ್ಯಕ್ಕೆ ನಿಗೂಢವಾಗಿದೆ. ಬಾಂದ್ರಾದಲ್ಲಿರುವ ಡ್ಯುಪ್ಲೆಕ್ಸ್ ಮನೆಯಲ್ಲಿ ಇತರ ನಾಲ್ವರೊಂದಿಗೆ ಸುಶಾಂತ್ ನೆಲೆಸಿದ್ದರು. ಇಬ್ಬರು ಸಹಾಯಕರಾದರೆ, ಇನ್ನಿಬ್ಬರು ಕೆಲಸದವರು. ಭಾನುವಾರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ನನ್ನು ನೋಡಿದ ಕೆಲಸದವರು ಪೊಲಿಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ತೆರಳಿದ ಪೊಲೀಸರು ಮನೆಯಲ್ಲಿದ್ದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕೂಪರ್ ಆ್ಯಂಡ್ ಬಾಬಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮುಂಬೈ ಪೊಲೀಸ್ ಆಯುಕ್ತ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ, ಸುಶಾಂತ್ ಕೊನೆಯ ಬಾರಿಗೆ ಬಾಲಿವುಡ್ ಚಿತ್ರರಂಗದ ಗೆಳೆಯನೊಬ್ಬನಿಗೆ ಕೊನೆಯ ಬಾರಿಗೆ ಕರೆ ಮಾಡಿದ್ದಾರೆ. ಪೊಲೀಸರು ಆತನನ್ನು ಕರೆಯಿಸಿ ಹೇಳಿಕೆ ಪಡೆದುಕೊಳ್ಳಲಿದ್ದಾರೆ.
ಇದನ್ನೂ ಓದಿ; ಜೂನ್ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್ಡೌನ್ ; ಇಲ್ಲಿದೆ ಫ್ಯಾಕ್ಟ್ಚೆಕ್
ಈ ಪ್ರಕರಣದಲ್ಲಿ ಇನ್ನೊಂದು ಮುಖ್ಯ ಬೆಳವಣಿಗೆ ಎಂದರೆ, ಸುಶಾಂತ್ ಸಿಂಗ್ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಏಕೆಂದರೆ, ಮನೆಯಲ್ಲಿ ಕೆಲ ವೈದ್ಯಕೀಯ ದಾಖಲೆಗಳು, ಖಿನ್ನತೆ ನಿವಾರಿಸಲು ನೀಡಲಾಗುವ ಔಷಧಗಳ ವಿವರಗಳಿರುವ ಚೀಟಿಗಳು ಪತ್ತೆಯಾಗಿವೆ.
ಸುಶಾಂತ್ಗಿದ್ದ ತೊಂದರೆ ಏನು? ಆತ ಯಾವ ರೀತಿಯ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದ ಮೊದಲಾದ ವಿವರಗಳನ್ನು ತಿಳಿದುಕೊಳ್ಳಲು ಪೋಲೀಸರು ವೈದ್ಯರ ಹೇಳಿಕೆಯನ್ನು ಪಡೆದುಕೊಳ್ಳಲಿದ್ದಾರೆ.
ಇದನ್ನೂ ಓದಿ; ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು; ಸುಶಾಂತ್ ಸಿಂಗ್ ಬದುಕಲ್ಲಿ ರೀಲು ರಿಯಲ್ಲಾಗಲಿಲ್ಲ…
ಕಳೆದೆರಡು ತಿಂಗಳಲ್ಲಿ ಬಾಲಿವುಡ್ನ ಇರ್ಫಾನ್ ಖಾನ್, ರಿಷಿ ಕಪೂರ್, ವಾಜಿದ್ ಖಾನ್ ಸೇರಿ ನಾಲ್ಕು ಸೆಲೆಬ್ರಿಟಿಗಳನ್ನು ಹಿಂದಿಚಿತ್ರರಂಗ ಕಳೆದುಕೊಂಡಿದೆ.
ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್ ಸಿಂಗ್; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ