ಕಲಬುರಗಿ: ಭಾರಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆಗಿಳಿದ ವಿದ್ಯಾರ್ಥಿನಿಯರು ಸುರಿಯುವ ಮಳೆಯಲ್ಲೇ ಬಸ್ವೊಂದನ್ನು ಅಡ್ಡಗಟ್ಟಿ ಘೋಷವಾಕ್ಯಗಳನ್ನು ಕೂಗಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಈ ಸನ್ನಿವೇಶ ಕಂಡುಬಂದಿತ್ತು.
ಇವರೆಲ್ಲರೂ ಸೇಡಂ ತಾಲೂಕಿನ ಬೊಂದೆಂಪಲ್ಲಿ, ಖಂಡೆರಾಯನಪಲ್ಲಿ ತಾಂಡಾದ ವಿದ್ಯಾರ್ಥಿನಿಯರು. ತಮ್ಮ ಊರಿಗೆ ಬಸ್ ಸೌಕರ್ಯ ಇಲ್ಲದ್ದರಿಂದ ಐದಾರು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾದ್ದರಿಂದ ಈ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಐದು ದಿನ ಶವಗಳ ಜತೆಗಿದ್ದ ಎರಡೂವರೆ ವರ್ಷದ ಮಗುವಿಗೆ ಇಂದು ರಕ್ತಪರೀಕ್ಷೆ!; ಒಂದೇ ಕುಟುಂಬದ ಐವರ ಸಾವಿನ ಪ್ರಕರಣ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಅಧ್ಯಕ್ಷರು ಸೇಡಂ ತಾಲೂಕಿನವರೇ ಆಗಿದ್ದರೂ ನಮ್ಮ ಊರಿಗೆ ಬಸ್ ಸೌಲಭ್ಯ ಕಲ್ಪಿಸಿಲ್ಲ ಎಂದು ರೋಸಿಹೋಗಿರುವ ವಿದ್ಯಾರ್ಥಿನಿಯರು ಹೀಗೆ ಪ್ರತಿಭಟನೆ ನಡೆಸಿ ಬಸ್ ಸೌಕರ್ಯ ನೀಡುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ವಿದೇಶದಿಂದ ಬಂದಿದ್ರು, ಇಂದು ಸುಟ್ಟು ಕರಕಲಾದ್ರು; ಸಿಲಿಂಡರ್ ಸ್ಫೋಟಕ್ಕೆ ಅಮ್ಮ-ಮಗಳು ಬಲಿ