More

    ಗಂಡ-ಹೆಂಡಿರಂತೆ ಇದ್ದ ಇಬ್ಬರು ‘ವಿವಾಹಿತರು’ ಮನೆಯಲ್ಲೇ ಹೆಣವಾದರು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆಯೋ ಆತ್ಮಹತ್ಯೆಯೋ?!

    ರಾಮನಗರ: ಮದುಗೆಯಾಗಿ ಹೆಂಡತಿಯಿಂದ ಬೇರೆಯಾಗಿದ್ದ ವ್ಯಕ್ತಿ, ವಿವಾಹವಾಗಿ ಗಂಡನಿಂದ ಬೇರೆಯಾಗಿದ್ದ ಮಹಿಳೆ.. ಈ ಇಬ್ಬರೂ ಗಂಡ-ಹೆಂಡಿರ ಥರ ಒಂದೇ ಮನೆಯಲ್ಲಿದ್ದು, ಈಗಿಲ್ಲ ಎಂಬಂತಾಗಿದ್ದಾರೆ. ಅರ್ಥಾತ್, ಇಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

    ರಾಮನಗರ ಜಿಲ್ಲೆ ಮಾಗಡಿಯ ತಿರುಮಲ ದೇವಾಂಗ ಬೀದಿಯಲ್ಲಿನ ಮನೆಯಲ್ಲಿ ಈ ಪ್ರಕರಣ ವರದಿಯಾಗಿದೆ. ನರಸಿಂಹಮೂರ್ತಿ ರಾವ್ (35), ಹೇಮಾ (33) ಮೃತಪಟ್ಟವರು. ಇಬ್ಬರೂ ವಿವಾಹಿತರಾಗಿದ್ದರೂ ತಮ್ಮ ಮೊದಲಿನ ಸಂಗಾತಿಯಿಂದ ಪ್ರತ್ಯೇಕಗೊಂಡು ಒಟ್ಟಿಗೇ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು.

    ಇದನ್ನೂ ಓದಿ: ಮೂರು ದಿನ ಮನೆಯೊಳಗೇ ಇತ್ತು ಕಾಳಿಂಗ ಸರ್ಪ!; ಬರೋಬ್ಬರಿ 7 ಅಡಿ ಉದ್ದದ ಉರಗ..

    ಸಾವಿಗೀಡಾಗಿರುವ ನರಸಿಂಹಮೂರ್ತಿ ರಾವ್​ಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇದೆ. ಅದಾಗ್ಯೂ ಆತ ಪತ್ನಿಯನ್ನು ಬಿಟ್ಟು ಹೇಮಾ ಜತೆ ಸಂಸಾರ ನಡೆಸುತ್ತಿದ್ದ. ಹೇಮಾ ಕೂಡ ವಿವಾಹಿತಳಾಗಿದ್ದ ಗಂಡನನ್ನು ಬಿಟ್ಟು ನರಸಿಂಹಮೂರ್ತಿ ಜೊತೆ 3 ವರ್ಷಗಳಿಂದ ವಾಸವಾಗಿದ್ದಳು.

    ಇದನ್ನೂ ಓದಿ: ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..

    ಆದರೆ ನಾಲ್ಕು ತಿಂಗಳಿನಿಂದ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯತ್ತಿತ್ತು ಎನ್ನಲಾಗಿದೆ. ಇಂದು ಇಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಕೊಲೆಯೋ ಎಂಬುದಿನ್ನೂ ಖಚಿತವಾಗಬೇಕಿದೆ. ಹೇಮಾಳಿಗೆ ಉರುಳು ಹಾಕಿ ಬಳಿಕ ನರಸಿಂಹಮೂರ್ತಿ ನೇಣು ಹಾಕಿಕೊಂಡಿರಬಹುದು ಎಂಬ ಶಂಕೆಯೂ ಇದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

    ಅತ್ತ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಕಾರ್ಖಾನೆ ಬಂದ್​; ಇತ್ತ ಬೇಕಾಬಿಟ್ಟಿಯಾಗಿ ಸಾಲ ನೀಡಿದ್ದ ಅಧಿಕಾರಿ ಸಸ್ಪೆಂಡ್..​

    ಸರ್ಕಾರಿ ಕಚೇರಿಗೆ ನುಗ್ಗಿ ಕೆಎಎಸ್​ ಅಧಿಕಾರಿಗೇ ಕೊಲೆ ಬೆದರಿಕೆ; ಹಣ ಮಂಜೂರು ಮಾಡುವಂತೆ ಧಮ್ಕಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts