ಬೆಂಗಳೂರು: ಕರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ರೈಲು ಸೇವೆ ಹಂತಹಂತವಾಗಿ ಟ್ರಾ್ಯಕ್ಗೆ ಮರಳಲಿದ್ದು, ಸೆ. 12ರಿಂದ ನೈಋತ್ಯ ರೈಲ್ವೆ 7 ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ.
ರಾಜ್ಯದ ವಿವಿಧ ನಗರಗಳು ಹಾಗೂ ಹೊರರಾಜ್ಯಗಳಿಗೆ ಸಂರ್ಪಸುವ 7 ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಅದರನ್ವಯ, ಭಾನುವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ಬೆಂಗಳೂರು- ಮೈಸೂರು ನಡುವೆ ಬುಧವಾರ, ಗುರುವಾರ ಮತ್ತು ಶುಕ್ರವಾರ ಬೆಂಗಳೂರು ದಂಡು ನಿಲ್ದಾಣದಿಂದ ಗುವಾಹಟಿಗೆ ಶುಕ್ರವಾರ ಮತ್ತು ಭಾನುವಾರ ಯಶವಂತಪುರದಿಂದ ರಾಜಸ್ಥಾನದ ಬಿಕಾನೇರ್ಗೆ ಸೋಮವಾರ ಮತ್ತು ಮಂಗಳವಾರ ಯಶವಂತಪುರದಿಂದ ಉತ್ತರ ಪ್ರದೇಶದ ಗೋರಖ್ಪುರಕ್ಕೆ ಗುರುವಾರ ಮತ್ತು ಶನಿವಾರ ಮೈಸೂರಿನಿಂದ ಜೈಪುರಕ್ಕೆ ರೈಲುಗಳು ಸಂಚರಿಸಲಿವೆ.
ಇದನ್ನೂ ಓದಿ: ಅಜ್ಜನ ಆಸ್ತಿಯಲ್ಲಿ ಅಮ್ಮನಿಗೆ ಹಕ್ಕಿಲ್ಲ ಎನ್ನುತ್ತಿದ್ದಾರೆ ಮಾವಂದಿರು, ಇದು ಸರಿಯೆ?
ಮೈಸೂರಿನಿಂದ ಸೊಲ್ಲಾಪುರ, ಬೆಂಗಳೂರಿನಿಂದ ದೆಹಲಿಗೆ ಪ್ರತಿದಿನ ವಿಶೇಷ ರೈಲು ಸೇವೆ ಇರಲಿದೆ. ಸೆ. 10ರಿಂದ ಆನ್ಲೈನ್ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದು.