ಹುಬ್ಬಳ್ಳಿ : ಮಾಂಗೇಲಾ-ಜದ್ರಮಾ ಕುಂತಿ ನಿಲ್ದಾಣಗಳ ಮಧ್ಯೆ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ ಈ ಮಾರ್ಗದ ವಿವಿಧ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಮಾ. 3ರಂದು ಮಂಗಳೂರು ಜಂಕ್ಷನ್- ವಿಜಯಪುರ ಎಕ್ಸ್ಪ್ರೆಸ್ ರೈಲು ಸಂಚಾರ ಬಾಗಲಕೋಟ- ವಿಜಯಪುರ ನಿಲ್ದಾಣಗಳ ಮಧ್ಯೆ ರದ್ದಾಗಿದ್ದು, ಈ ರೈಲು ಬಾಗಲಕೋಟವರೆಗೆ ಮಾತ್ರ ಸಂಚರಿಸಲಿದೆ.
ಮಾ. 4ರಂದು ವಿಜಯಪುರ- ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ಸಂಚಾರ ವಿಜಯಪುರ- ಬಾಗಲಕೋಟ ನಿಲ್ದಾಣದ ಮಧ್ಯೆ ರದ್ದಾಗಿದ್ದು, ಈ ರೈಲು ಬಾಗಲಕೋಟದಿಂದ ಸಂಚಾರ ಪ್ರಾರಂಭಿಸಲಿದೆ.