More

    ದೂರ ಮಾಡುವವರು ಈಡಿಯಟ್‌ಗಳು … ಹಾಗಂತ ಸೋನಾಕ್ಷಿ ಹೇಳಿದ್ದು ಯಾರಿಗೆ?

    ಸೋನಾಕ್ಷಿ ಸಿನ್ಹಾ ಭಯಂಕರ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತಾ? ಕೆಲವರ ಮನಸ್ಥಿತಿ. ನಾಯಿಗಳಿಂದ ಕರೊನಾ ಹಬ್ಬುತ್ತದೆ ಎಂದು ಅದ್ಯಾರೋ ಸುಳ್ಳು ಹಬ್ಬಿಸಿದ್ದಾರೆ. ಇದನ್ನು ಕೇಳಿದ ಜನ, ತಮ್ಮ ನಾಯಿಗಳನ್ನು ದೂರ ಮಾಡುತ್ತಿದ್ದಾರೆ. ಅಂಥವರ ಕೃತ್ಯವನ್ನು ಅಮಾನವೀಯ ಎಂದಿರುವ ಸೋನಾಕ್ಷಿ, ಅವರನ್ನು ಈಡಿಯಟ್‌ಗಳೆಂದು ಬಯ್ದಿದ್ದಾರೆ.

    ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಖಡಕ್ ಸಂದೇಶ ಬಿಟ್ಟಿರುವ ಸೋನಾಕ್ಷಿ, ‘ನಾಯಿಗಳಿಂದ ಕರೊನಾ ವೈರಸ್ ಹರಡುತ್ತದೆ ಎಂದು ಹಲವರು ತಮ್ಮ ನಾಯಿಗಳನ್ನು ದೂರ ಮಾಡುತಿದ್ದಾರಂತೆ. ಇದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ಹಾಗೇನಾದರೂ, ಆ ಮೂಕಪ್ರಾಣಿಗಳನ್ನು ದೂರ ಮಾಡಿದರೆ, ನಿಮಗಿಂಥ ದೊಡ್ಡ ಈಡಿಯಟ್‌ಗಳಿಲ್ಲ. ನೀವು ದೂರ ಇಡಬೇಕಾಗಿರುವುದು ನಾಯಿಗಳನ್ನಲ್ಲ, ಮೂರ್ಖತನವನ್ನ’ ಎಂದು ಸೋನಾಕ್ಷಿ ಸಿಟ್ಟು ಪ್ರದರ್ಶಿಸಿದ್ದಾರೆ.

    ಈ ವಿಷಯವಾಗಿ ತಮ್ಮ ಅಭಿಪ್ರಾಯಗಳನ್ನು ಇನ್ನಷ್ಟು ಹಂಚಿಕೊಂಡಿರುವ ಅವರು, ‘ನಾವು ನಮ್ಮ ಸುತ್ತಮುತ್ತಲಿನ ಜನರನ್ನು ಮೊದಲು ಈ ಬಗ್ಗೆ ಗಮನಸೆಳೆದು, ಅವರು ಸಹ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು. ನನಗೇನು ಆಗುವುದಿಲ್ಲ ಎಂಬ ಜನರ ಮನಸ್ಥಿತಿ ಮೊದಲು ಬದಲಾಗಬೇಕಿದೆ. ಬರೀ ತಮ್ಮೊಬ್ಬರ ಬಗ್ಗೆಯಷ್ಟೇ ಅಲ್ಲ, ಇಡೀ ಮನುಕುಲದ ಬಗ್ಗೆ ಯೋಚಿಸಬೇಕಿದೆ. ಒಬ್ಬ ಸೋಂಕಿತರಿಂದ ಇನ್ನಷ್ಟು ಜನರಿಗೆ ಸಮಸ್ಯೆಯಾಗುತ್ತಿದೆ. ಅದೇ ಕಾರಣಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುಹೆಚ್ಚಾಗುತ್ತಿದೆ. ಇಟಲಿಯಲ್ಲೇನಾಗಿದೆ ನೋಡಿ. ಅದೇ ಕಾರಣಕ್ಕೆ ಮನೆಯಲ್ಲಿರಿ’ ಎಂದು ಸೋನಾಕ್ಷಿ ಹೇಳಿದ್ದಾರೆ.

    ಮಲಗಿದ್ರೆ ಸಾವು; ಕೂತಿದ್ರೆ ರೋಗ; ನಡೀತಿದ್ರೆ ಜೀವನ … ಮುಖ್ಯಮಂತ್ರಿಗಳಿಗೆ ಉಪೇಂದ್ರ ಕೊಟ್ಟ ಎರಡು ಸಲಹೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts