ಮಂಡ್ಯ: ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶಿಸಿದ ಬೆನ್ನಿಗೇ ರಾಜಕೀಯ ಪಕ್ಷಗಳ ನಾಯಕರ ಮಾತಿನ ಚಕಮಕಿ ಹೆಚ್ಚಾಗಿದ್ದು, ಒಬ್ಬೊಬ್ಬರಿಂದ ಒಂದೊಂದು ರೀತಿಯ ಹೇಳಿಕೆಗಳು ಕೇಳಿ ಬರುತ್ತಿವೆ. ಅದೇ ರೀತಿ ಮಂಡ್ಯದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಕೈಲಾಗದವನು ಎದುರು ಬರುವ ಪೈಲ್ವಾನ್ಗೆ ಒದಿತೀನಿ ಎನ್ನುತ್ತಾನೆ, ಆದರೆ ಅವನು ಎದ್ದೇಳುವುದಿಲ್ಲ, ಒದೆಯುವುದಕ್ಕೆ ಆಗಲ್ಲ. ಕಾಂಗ್ರೆಸ್ನವರಿಗೆ ಆರ್ಎಸ್ಎಸ್ನವರನ್ನು ಕಂಡರೆ ತಡೆದುಕೊಳ್ಳಲು ಆಗುತ್ತಿಲ್ಲ. ಸಿದ್ದರಾಮಯ್ಯ-ಇಬ್ರಾಹಿಂ ಇವರಿಬ್ಬರೇ ಆರ್ಎಸ್ಎಸ್ ಬಗ್ಗೆ ಮಾತನಾಡ್ತಾರೆ, ಅವರಿಬ್ಬರು ಬೀಗರು, ಅವರಿಗೆ ಮುಸ್ಲಿಮರ ವೋಟು. ಪಿಎಫ್ಐ ಬ್ಯಾನ್ ಮಾಡಿದ್ದು ತಪ್ಪು ಎನ್ನುತ್ತಿದ್ದಾರೆ. ಹಾಗಾದರೆ ಸ್ಪಷ್ಟವಾಗಿ ಹೇಳಿಬಿಡಲಿ, ಹಿಂದೂಗಳ ವೋಟ್ ಬೇಡವಾ? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ರಾಷ್ಟ್ರಭಕ್ತ ಮುಸ್ಲಿಮರು ಇವತ್ತು ಬಿಜೆಪಿ ಜೊತೆ ಇದ್ದಾರೆ. ಕಾಂಗ್ರೆಸ್ನವರಿಗೆ ಏನು ಮಾಡ್ಬೇಕು ಅಂತ ತೋಚುತ್ತಿಲ್ಲ. ಬಾಯಿಗೆ ಬಂದ ಹಾಗೆ ಒದರುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ವಿದೂಷಕ ಎನ್ನುವ ಸಿದ್ದರಾಮಯ್ಯ ಅವರನ್ನು ಏನಂತ ಕರೆಯಬೇಕು ಎಂದಿರುವ ಈಶ್ವರಪ್ಪ, ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ಗೆ ವಿಲನ್, ಕಾಂಗ್ರೆಸ್ಗೆವಿಲನ್, ಹಿಂದುಳಿದವರು-ದಲಿತರಿಗೆ ವಿಲನ್, ಹಿಂದೂಗಳಿಗೂ ವಿಲನ್. ಮುಸ್ಲಿಮರಿಗೆ ಮಾತ್ರ ಸಿದ್ದರಾಮಯ್ಯ ಹೀರೋ, ಸಿದ್ದರಾಮಯ್ಯ ಕರ್ನಾಟಕ ರಾಜ್ಯಕ್ಕೆ ವಿಲನ್ ಎಂದು ಹೇಳಿದ್ದಾರೆ.
ತೆರೆ ಮೇಲೆ ರಾರಾಜಿಸಲಿದ್ದಾರೆ ‘ಜೂನಿಯರ್’ ಜನಾರ್ದನ ರೆಡ್ಡಿ; ಕಿರೀಟಿ ಹೊಸ ಸಿನಿಮಾ ಟೈಟಲ್ ಲಾಂಚ್..