ಬೆಂಗಳೂರು: ವರ್ಷಕ್ಕೊಮ್ಮೆ ವನಮಹೋತ್ಸವ ಎಂದೋ, ಜನ್ಮದಿನ ಎಂದೋ ಯಾರಾದರೂ ಒಂದೋ ಎರಡೋ ಗಿಡ ನೆಡುವುದನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಇವರು ಕಳೆದ ಐದೂವರೆ ವರ್ಷಗಳಿಂದ ಒಂದೇ ಒಂದು ವಾರವೂ ತಪ್ಪದೇ ಗಿಡಗಳನ್ನು ನೆಡುತ್ತ ಬಂದಿದ್ದಾರೆ.
ಹೀಗೊಂದು ಸಾಧನೆ ಮಾಡುವುದಕ್ಕೆ ಅದಮ್ಯ ಚೇತನ ಇರಬೇಕು. ಅಷ್ಟಕ್ಕೂ ಇಂಥದ್ದೊಂದು ಸಾಧನೆಯನ್ನು ಸಂಸದರಾಗಿದ್ದ ಅನಂತಕುಮಾರ್ ಅವರು ಹುಟ್ಟುಹಾಕಿರುವ ‘ಅದಮ್ಯ ಚೇತನ’ ಸಂಸ್ಥೆ ಮಾಡಿದೆ. ಕಳೆದು ಐದೂವರೆ ವರ್ಷಗಳಿಂದ ಪ್ರತಿವಾರವೂ ನಾವು ಇದನ್ನು ತಪ್ಪದೇ ಮಾಡಿಕೊಂಡು ಬರುತ್ತಿರುವುದಾಗಿ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿಕೊಂಡಿದ್ದಾರೆ.
ಈ ವಿಷಯದಲ್ಲಿ ಅದಮ್ಯ ಚೇತನ ತಂಡ ಒಂದು ವಾರವನ್ನೂ ತಪ್ಪಿಸಿಲ್ಲ. ಪ್ರತಿ ಭಾನುವಾರ ಗಿಡಗಳನ್ನು ನೆಡುತ್ತಲೇ ಬಂದಿದೆ. ಇಂದು ಇದು ನಮ್ಮ 288ನೇ ಹಸಿರು ಭಾನುವಾರ. ಅನಂತಕುಮಾರ್ ಅವರು ಆರಂಭಿಸಿದ್ದ ಈ ಸಸ್ಯಾಗ್ರಹವನ್ನು ನಮ್ಮ ಯುವ ಸ್ವಯಂಸೇವಕರು ಅತ್ಯುಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂಬುದಾಗಿ ತೇಜಸ್ವಿನಿ ಅನಂತಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Since last five and half years our @adamya_chetana team has not missed even one Sunday. We have planted saplings on every Sunday.
Today 288th consecutive green Sunday. Our young volunteers continuing this Sasyagraha started by @AnanthKumar_BJP with utmost zeal and interest. pic.twitter.com/nuzzQHiDDd
— Tejaswini AnanthKumar (@Tej_AnanthKumar) July 4, 2021
ವಿಚ್ಛೇದನ ಘೋಷಿಸಿದ ಮಾರನೇ ದಿನವೇ ಕಿರಣ್ ರಾವ್ ಕೈಹಿಡಿದುಕೊಂಡು ಆಮೀರ್ ಖಾನ್ ಹೇಳಿದ್ದೇನು?
ಮಂಸೋರೆ ಮನಸೂರೆಗೊಳಿಸಿದ ಅಖಿಲಾ; ಇಂದು ನಡೆಯಿತು ನಿಶ್ಚಿತಾರ್ಥ, ಮದ್ವೆ ದಿನ ಹಾರಲಿದೆ ತಿರಂಗ!