More

    ವಿಚ್ಛೇದನ ಘೋಷಿಸಿದ ಮಾರನೇ ದಿನವೇ ಕಿರಣ್​ ರಾವ್ ಕೈಹಿಡಿದುಕೊಂಡು ಆಮೀರ್ ಖಾನ್ ಹೇಳಿದ್ದೇನು?

    ಬೆಂಗಳೂರು: ಹಿಂದಿಯ ಖ್ಯಾತನಟ ಆಮೀರ್ ಖಾನ್​-ಕಿರಣ್​ ರಾವ್ ತಮ್ಮ ದಾಂಪತ್ಯ ಜೀವನಕ್ಕೆ ನಿನ್ನೆಯಷ್ಟೇ ಅಂತ್ಯ ಹೇಳಿದ್ದು, ಇಬ್ಬರೂ ವಿಚ್ಛೇದನಗೊಂಡಿದ್ದನ್ನು ಘೋಷಿಸಿದ್ದರು. ಹೀಗೆ 15 ವರ್ಷಗಳ ದಾಂಪತ್ಯ ಕೊನೆಯಾಗಿದ್ದನ್ನು ಹೇಳಿಕೊಂಡ 24 ಗಂಟೆಗಳಲ್ಲೇ ಆಮೀರ್​ ಖಾನ್ ತಮ್ಮ ಮಾಜಿ ಪತ್ನಿಯ ಕೈಹಿಡಿದುಕೊಂಡಿದ್ದಾರೆ. ಮಾತ್ರವಲ್ಲ, ತಮ್ಮ ಬಗ್ಗೆ ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

    ವಿಚ್ಛೇದನದ ಬಳಿಕವೂ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡ ಇಬ್ಬರೂ ತಮ್ಮ ಕುರಿತು ಜನರಿಗೆ ಇರುವ ಅಭಿಪ್ರಾಯದ ಕುರಿತು ಹೇಳಿಕೊಂಡಿದ್ದಾರೆ. ನಮ್ಮಿಬ್ಬರ ನಿರ್ಧಾರದಿಂದ ಕೆಲವರಿಗೆ ಬೇಸರವಾಗಿರಬಹುದು, ಶಾಕ್​ ಆಗಿರಬಹುದು, ಆದರೆ ನಾವಿಬ್ಬರೂ ಸಂತೋಷವಾಗಿದ್ದೇವೆ ಎಂದು ನಿಮಗೆ ಹೇಳುತ್ತಿದ್ದೇವೆ. ನಮ್ಮ ಸಂಬಂಧದ ಸ್ಥಿತಿಯಲ್ಲಿ ಬದಲಾವಣೆ ಆಗಿರಬಹುದು, ಆದರೆ ನಾವಿಬ್ಬರೂ ಇನ್ನೂ ಕುಟುಂಬದ ರೀತಿಯಲ್ಲೇ ಇರುತ್ತೇವೆ. ಇಬ್ಬರ ಸಂತೋಷ ಹೀಗೇ ಉಳಿಯಲಿ ಎಂದು ಪ್ರಾರ್ಥಿಸಿಕೊಳ್ಳಿ ಎಂದು ಕಿರಣ್​ ರಾವ್ ಕೈ ಹಿಡಿದು ಆಮೀರ್​ ಖಾನ್​ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ಒಬ್ಬನ ಹುಟ್ಟುಹಬ್ಬ, ಮತ್ತೊಬ್ಬನಿಗೆ ಸಾವು, ಇನ್ನೊಬ್ಬನಿಗೆ ಗಾಯ: ಅಷ್ಟಕ್ಕೂ ದೇಹ ಛಿದ್ರವಾಗಿದ್ದೇಕೆ?

    ಈ ಟೀ ಸ್ಟಾಲ್​ನಲ್ಲಿ ಕೋತಿಯೇ ಕ್ಲೀನರ್​; ಅದೆಷ್ಟು ಚೆನ್ನಾಗಿ ತಟ್ಟೆ ತೊಳೆಯುತ್ತಿದೆ ನೋಡಿ..

    ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

    ನಿಮಗನಿಸಿದ್ದು ಸರಿ, ಆದರೆ ಸತ್ಯಾಂಶ ಇದು: ‘ದ್ವಿತ್ವ’ ಪೋಸ್ಟರ್ ಕಾಪಿ ಎಂದವರಿಗೆ ಪವನ್ ಸ್ಪಷ್ಟನೆ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts