ಬೆಂಗಳೂರು: ಹಿಂದಿಯ ಖ್ಯಾತನಟ ಆಮೀರ್ ಖಾನ್-ಕಿರಣ್ ರಾವ್ ತಮ್ಮ ದಾಂಪತ್ಯ ಜೀವನಕ್ಕೆ ನಿನ್ನೆಯಷ್ಟೇ ಅಂತ್ಯ ಹೇಳಿದ್ದು, ಇಬ್ಬರೂ ವಿಚ್ಛೇದನಗೊಂಡಿದ್ದನ್ನು ಘೋಷಿಸಿದ್ದರು. ಹೀಗೆ 15 ವರ್ಷಗಳ ದಾಂಪತ್ಯ ಕೊನೆಯಾಗಿದ್ದನ್ನು ಹೇಳಿಕೊಂಡ 24 ಗಂಟೆಗಳಲ್ಲೇ ಆಮೀರ್ ಖಾನ್ ತಮ್ಮ ಮಾಜಿ ಪತ್ನಿಯ ಕೈಹಿಡಿದುಕೊಂಡಿದ್ದಾರೆ. ಮಾತ್ರವಲ್ಲ, ತಮ್ಮ ಬಗ್ಗೆ ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ವಿಚ್ಛೇದನದ ಬಳಿಕವೂ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡ ಇಬ್ಬರೂ ತಮ್ಮ ಕುರಿತು ಜನರಿಗೆ ಇರುವ ಅಭಿಪ್ರಾಯದ ಕುರಿತು ಹೇಳಿಕೊಂಡಿದ್ದಾರೆ. ನಮ್ಮಿಬ್ಬರ ನಿರ್ಧಾರದಿಂದ ಕೆಲವರಿಗೆ ಬೇಸರವಾಗಿರಬಹುದು, ಶಾಕ್ ಆಗಿರಬಹುದು, ಆದರೆ ನಾವಿಬ್ಬರೂ ಸಂತೋಷವಾಗಿದ್ದೇವೆ ಎಂದು ನಿಮಗೆ ಹೇಳುತ್ತಿದ್ದೇವೆ. ನಮ್ಮ ಸಂಬಂಧದ ಸ್ಥಿತಿಯಲ್ಲಿ ಬದಲಾವಣೆ ಆಗಿರಬಹುದು, ಆದರೆ ನಾವಿಬ್ಬರೂ ಇನ್ನೂ ಕುಟುಂಬದ ರೀತಿಯಲ್ಲೇ ಇರುತ್ತೇವೆ. ಇಬ್ಬರ ಸಂತೋಷ ಹೀಗೇ ಉಳಿಯಲಿ ಎಂದು ಪ್ರಾರ್ಥಿಸಿಕೊಳ್ಳಿ ಎಂದು ಕಿರಣ್ ರಾವ್ ಕೈ ಹಿಡಿದು ಆಮೀರ್ ಖಾನ್ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)
ಒಬ್ಬನ ಹುಟ್ಟುಹಬ್ಬ, ಮತ್ತೊಬ್ಬನಿಗೆ ಸಾವು, ಇನ್ನೊಬ್ಬನಿಗೆ ಗಾಯ: ಅಷ್ಟಕ್ಕೂ ದೇಹ ಛಿದ್ರವಾಗಿದ್ದೇಕೆ?
ಈ ಟೀ ಸ್ಟಾಲ್ನಲ್ಲಿ ಕೋತಿಯೇ ಕ್ಲೀನರ್; ಅದೆಷ್ಟು ಚೆನ್ನಾಗಿ ತಟ್ಟೆ ತೊಳೆಯುತ್ತಿದೆ ನೋಡಿ..
ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?
ನಿಮಗನಿಸಿದ್ದು ಸರಿ, ಆದರೆ ಸತ್ಯಾಂಶ ಇದು: ‘ದ್ವಿತ್ವ’ ಪೋಸ್ಟರ್ ಕಾಪಿ ಎಂದವರಿಗೆ ಪವನ್ ಸ್ಪಷ್ಟನೆ ಇದು..