More

    ಕ್ಯಾಂಪಸ್​ನಲ್ಲಿ ಕ್ರಾಂತಿ ಮಾಡೋಕೆ ಹೊರಟಿದ್ದಾರೆ ಸಂತೋಷ್​!

    ನಿರ್ದೇಶಕ ಸಂತೋಷ್​ಗೆ ಕಾಲೇಜ್​ ಕಥೆಗಳೆಂದರೆ ಅದೇನೋ ಇಷ್ಟ. ಅವರ ಮೊದಲ ಚಿತ್ರ ‘ಸ್ಟೂಡೆಂಟ್ಸ್​’, ಕಾಲೇಜ್ ಕಥೆಯಾಗಿತ್ತು. ಎರಡನೆಯ ಚಿತ್ರ ‘ಬಿಂದಾಸ್​ ಗೂಗ್ಲಿ’ ಸಹ ಇದೇ ಹಾದಿಯಲ್ಲಿತ್ತು. ಈಗ ಅವರು ಮೂರನೆಯ ಚಿತ್ರವನ್ನು ಘೋಷಿಸಿದ್ದು, ಅದೂ ಸಹ ಕಾಲೇಜ್​ ಕ್ಯಾಂಪಸ್​ ಸುತ್ತ ಸುತ್ತುವ ಚಿತ್ರವಂತೆ.

    ‘ಕ್ಯಾಂಪಸ್​ ಕ್ರಾಂತಿ’ ಚಿತ್ರವು ಸೆಪ್ಟೆಂಬರ್​ನಲ್ಲಿ ಪ್ರಾರಂಭವಾಗಲಿದೆಯಂತೆ. ಅದಕ್ಕೂ ಮುನ್ನ, ಪ್ರೀಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಸಂತೋಷ್​. ಲಾಕ್​ಡೌನ್​ ಸಮಯದಲ್ಲಿ ಕುಳಿತು ಚಿತ್ರದ ಕಥೆ-ಚಿತ್ರಕಥೆಯನ್ನು ಸಿದ್ಧಪಡಿಸಿರುವ ಅವರು, ಇದೀಗ ಶೂಟಿಂಗ್​ ಹೊರಡುವುದಕ್ಕೆ ತಯಾರಿ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಮೆಲೋಡಿ ಮಳೆ ಸುರಿಸಿದ ರಘು ದೀಕ್ಷಿತ್​; ಡಾ. ರಾಜ್​ ಮೊಮ್ಮಗಳ ಸಿನಿಮಾದ ಹಾಡು ಬಿಡುಗಡೆ

    ಚಿತ್ರದ ಹೆಸರೇ ಹೇಳುವಂತೆ ಕಾಲೇಜಿನಲ್ಲಾಗುವ ಕ್ರಾಂತಿಯ ಸುತ್ತ ಈ ಚಿತ್ರ ಸುತ್ತುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಬಾರ್ಡರ್​ನಲ್ಲಿ ನಡೆಯುವ ಒಂದು ಘಟನೆ ಇಟ್ಟುಕೊಂಡು, ಅದಕ್ಕೆ ಕಾಲೇಜ್​ ಹುಡುಗರು ಹೇಗೆ ಕಾರಣವಾಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ. ಕಾಲೇಜ್​ ಹುಡುಗರು ಈ ಕ್ರಾಂತಿಗೆ ಕಾರಣವಾಗುವುದರಿಂದ, ಚಿತ್ರಕ್ಕೆ ಕ್ಯಾಂಪಸ್​ ಕ್ರಾಂತಿ ಎಂಬ ಹೆಸರನ್ನು ಇಡಲಾಗಿದೆ.

    ಹಿಂದಿನ ಚಿತ್ರಗಳಂತೆ, ಈ ಚಿತ್ರಗಳು ಒಂದಿಷ್ಟು ಹೊಸಬರು ಇದ್ದಾರೆ. ಅದರಲ್ಲೂ ಆರ್ಯ, ಆರತಿ ಮತ್ತು ಸಹನಾ ಗೌಡ ಎಂಬ ಹೊಸ ನಾಯಕ-ನಾಯಕಿಯರನ್ನು ಈ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಹೊರಟಿದ್ದಾರೆ. ಮಿಕ್ಕಂತೆ ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ.

    ಇದನ್ನೂ ಓದಿ: 300 ಕೋಟಿ ದುಡಿಯಬೇಕೆಂಬ ಟಾರ್ಗೆಟ್​ ಮುಟ್ಟುತ್ತಾರಾ ಪವನ್​ ಕಲ್ಯಾಣ್​?

    ಈಗಾಗಲೇ ಲಾಕ್​ಡೌನ್​ ಮುಗಿದ ನಂತರ, ಚಿತ್ರದ ಹಾಡುಗಳ ರೆಕಾರ್ಡಿಂಗ್​ ಕೆಲಸಗಳನ್ನು ಮುಗಿಸಲಾಗಿದೆ. ಚಿತ್ರಕ್ಕೆ ವಿ. ಮನೋಹರ್ ಸಂಗೀತ ಸಂಯೋಜಿಸುತ್ತಿದ್ದು, ನಾಲ್ಕು ಹಾಡುಗಳನ್ನು ಈಗಾಗಲೇ ರೆಕಾರ್ಡ್​ ಮಾಡಲಾಗಿದೆ.

    ‘ಕ್ಯಾಂಪಸ್​ ಕ್ರಾಂತಿ’ ಚಿತ್ರದ ಚಿತ್ರೀಕರಣವು ಬೆಂಗಳೂರಲ್ಲದೆ ಗೋಕಾಕ್​, ದೂಧ್​ ಸಾಗರ್​ ಮುಂತಾದ ಹಲವು ಕಡೆಗಳಲ್ಲಿ ನಡೆಯಲಿದೆ.

    ಎಷ್ಟು ಸಾಧ್ಯವೋ ಅಷ್ಟು ಬೇಗ ‘ಆಚಾರ್ಯ’ ಮುಗಿಸಲು ಕಾಜಲ್​ ಕಾತರ … ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts