ಬೆಂಗಳೂರು: ಪ್ರತಿನಿತ್ಯ ಸಾಮಾಜಿಕ ಜಾಲತಾಣ ಓಪನ್ ಮಾಡಿ ನೋಡಿದರೆ ಕನ್ನಡ ಬಿಗ್ಬಾಸ್ ಶೋಗೆ ಸಂಬಂಧಿಸಿದ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಟ್ರೋಲ್ ಪೇಜ್ಗಳಲ್ಲಂತೂ ಸ್ಪರ್ಧಿಗಳ ಬಗ್ಗೆ ಒಂದಲ್ಲ ಒಂದು ವಿಚಾರ ಚರ್ಚೆಯಾಗುತ್ತಲೇ ಇರುತ್ತದೆ. ಆದರೆ, ಕೆಲವು ಅಂತೆ-ಕಂತೆಗಳ ಸುದ್ದಿಯಾಗಿದ್ದು, ಯಾವುದು ಸತ್ಯ ಎಂಬ ಗೊಂದಲವೂ ಕೆಲವೊಮ್ಮೆ ಓದುಗರಲ್ಲಿ ಹುಟ್ಟಿಕೊಳ್ಳುತ್ತವೆ.
ಆಘಾತಕಾರಿ ಸಂಗತಿಯೇನೆಂದರೆ, ಸಾಮಾಜಿಕ ಜಾಲತಾಣದಲ್ಲಿ ವೇಷ ಮರೆಸಿಕೊಂಡು ಇಲ್ಲಸಲ್ಲದ ವಿಚಾರಗಳನ್ನು ಹರಿಬಿಡುತ್ತಾ ಅಪಪ್ರಚಾರ ಮಾಡುವವರೇ ಹೆಚ್ಚು. ಈ ವಿಚಾರದಲ್ಲಿ ಸೆಲೆಬ್ರಿಟಿಗಳೇ ಮೊದಲ ಸಂತ್ರಸ್ತರು. ಒಬ್ಬರಿಗೊಬ್ಬರ ನಡುವೆ ತಂದಿಟ್ಟು ತಮಾಷೆ ನೋಡುವವರೆ ಹೆಚ್ಚು. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ಸೆಲೆಬ್ರಿಟಿಗಳ ಕುಟುಂಬವೂ ಕೂಡ ಆಡಿಕೊಳ್ಳುವರ ಬಾಯಿಗೆ ಎಲೆ-ಅಡಿಕೆಯಾಗಿ ಉಗಿಸಿಕೊಳ್ಳುತ್ತಾರೆ. ಹೀಗಾಗಿ ಜಾಲತಾಣದಲ್ಲಿ ವ್ಯವಹರಿಸುವ ತುಂಬಾ ಎಚ್ಚರದಿಂದ ಇರಬೇಕು.
ಈ ವಿಚಾರವನ್ನು ಈಗೇಕೆ ಹೇಳುತ್ತಿದ್ದೀರಿ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಕಾರಣವೂ ಇದೆ. ಜಾಲತಾಣದಲ್ಲಿ ವೇಷ ಮರೆಸಿಕೊಂಡು ಅಪಪ್ರಚಾರ ಮಾಡುತ್ತಿರುವವರ ಜಾಲಕ್ಕೆ ಬಿಗ್ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಮತ್ತು ಕುಟುಂಬ ಇದೀಗ ದಾಳವಾಗಿದೆ. ಈ ವಿಚಾರವನ್ನು ಸ್ವತಃ ಸಂಗೀತಾ ಕುಟುಂಬ ಪ್ರಸ್ತಾಪ ಮಾಡಿದ್ದು, ಸುಳ್ಳು ಪ್ರಚಾರ ಮಾಡುವವರಿಗೆ ಖಡಕ್ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಎಚ್ಚರಿಕೆ ಸಂದೇಶವೇನು?
ಸಂಗೀತಾಳ ಅಭಿಮಾನಿಗಳು ಎನ್ನುವ ಸೋಗಿನಲ್ಲಿ ಅವಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿ ಮಾಡಿ, ಅನ್ಯ ಸ್ಪರ್ಧಿಗಳ ಮೇಲೆ ಸುಳ್ಳು ಪ್ರಚಾರಗಳನ್ನು ಮಾಡುತ್ತಾ, ಸಂಗೀತಾ ಹೆಸರನ್ನು ಎಳೆಯುತ್ತಾ, ಸುಖಾಸುಮ್ಮನೆ ನಿಮ್ಮ ಕಪಿ ಆಟಗಳ ಮೂಲಕ ತೊಂದರೆ ಕೊಡುವುದನ್ನು ನಿಲ್ಲಿಸಿ. ಸಂಗೀತಾಳ ಕುಟುಂಬವಾಗಿ ನಾವು ಯಾವ ಅಭ್ಯರ್ಥಿಯ ಮೇಲೂ ಯಾವುದೇ ರೀತಿಯ ಆರೋಪವನ್ನಾಗಲಿ ಅಥವಾ ಅಪಪ್ರಚಾರವನ್ನಾಗಲಿ ಮಾಡಿರುವುದಿಲ್ಲ ಮತ್ತು ಮಾಡುವುದೂ ಇಲ್ಲ. ನಾವು ಸುಮ್ಮನಿದ್ದೀವಿ ಎಂದು ಆಲಕ್ಷಿಸಿದರೆ ಮಂದಿನ ಪರಿಣಾಮ ಸರಿಯಾಗಿರುವುದಿಲ್ಲ ಎಂದು ಸಂಗೀತಾ ಕುಟುಂಬ ಅಪಪ್ರಚಾರ ಮಾಡುತ್ತಿರುವವರಿಗೆ ಎಚ್ಚರಿಸಿದೆ.
ಜಾಲತಾಣದಲ್ಲಿ ಪ್ರತಿನಿತ್ಯ ಸಂಗೀತಾಳ ಬಗ್ಗೆ ಸಾಕಷ್ಟು ಪೋಸ್ಟ್ಗಳು ಹರಿದಾಡುತ್ತಿವೆ. ಕೆಲವರು ಸಂಗೀತಾಗೆ ಬೆಂಬಲ ನೀಡಿದರೆ, ಇನ್ನು ಕೆಲವರು ಸಂಗೀತಾ ಹೆಸರೇಳಿಕೊಂಡು ಇತರೆ ಸ್ಪರ್ಧಿಗಳ ಬಗ್ಗೆ ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ, ಬೇರೆ ಸ್ಪರ್ಧಿಗಳ ಕಾಲೆಳೆಯುವ ಮೂಲಕ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಕಳೆದ ವಾರ ಮನೆಯಿಂದ ಹೊರಬಂದಿರುವ ಪವಿ ಪೂವಪ್ಪ ಕೂಡ ಸಂಗೀತಾ ಫ್ಯಾನ್ಸ್ಗಳ ಟ್ರೋಲ್ಗೆ ಗುರಿಯಾಗಿದ್ದಾರೆ. ಅಲ್ಲದೆ, ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ. ನನಗೆ ವೋಟ್ ಮಾಡಿರುವವರಿಗೆ ಮತ್ತು ಮಾಡದೆ ಇದ್ದವರಿಗೂ ಧನ್ಯವಾದ ಹೇಳ್ತೀನಿ. ತುಂಬಾ ನೆಗಟಿವ್ ಕಮೆಂಟ್ ಕೂಡ ಹಾಕಿದ್ದೀರಾ! ಹಾಕ್ರಿ, ಚೆನ್ನಾಗಿ ದುಡ್ಡು ಮಾಡ್ಕೊಳ್ಳಿ ಅಂತ ಹೇಳ್ತೀನಿ. ನನಗೆ ಕೆಲವರು ವಿನಯ್ ಗ್ರೂಪ್ಗೆ ಸೇರಿದ್ದೀರಾ, ವಿನಯ್ ಚಮಚ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಸಂಗೀತಾ ಕುಟುಂಬ ಎಚ್ಚರಿಕೆ ಸಂದೇಶ ರವಾನಿಸುವ ಮೂಲಕ ಸಂಗೀತಾ ಅಭಿಮಾನಿಗಳೆಂಬ ಹೆಸರಲ್ಲಿ ಕೆಟ್ಟ ಕಾಮೆಂಟ್ಗಳನ್ನು ಮಾಡಿ ಮಜಾ ತೆಗೆದುಕೊಳ್ಳುತ್ತಿರುವವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದೆ.
BBKS10: ಸಂಗೀತಾ ಫ್ಯಾನ್ಸ್ಗೆ ಪವಿ ಕೊಟ್ಟ ಕೌಂಟರ್ ಇದು! ಇಲ್ಲಿದೆ ನೋಡಿ ವಿಡಿಯೋ
ಕುಂದಾಪುರದಲ್ಲಿ ಬಸ್ ಚಕ್ರದಡಿಗೆ ಸಿಲುಕಬೇಕಿದ್ದ ಸೈಕಲ್ ಸವಾರ ಪವಾಡ ರೀತಿ ಪಾರು! ವಿಡಿಯೋ ವೈರಲ್
ಕರ್ನಾಟಕದಲ್ಲಿ ಹಿಜಾಬ್ ನಿಷೇಧ ತೆಗೆದುಹಾಕಲು ನಿರ್ಧಾರ: ಸಿಎಂ ಸಿದ್ದರಾಮಯ್ಯ ಘೋಷಣೆ
ರಾಯಲ್ ಎನ್ಫೀಲ್ಡ್ಗೆ ಪ್ರತಿನಿತ್ಯ ವಿಶೇಷ ಪೂಜೆ! ಬುಲೆಟ್ ದೇವಸ್ಥಾನದ ಹಿಂದಿದೆ ಭಯಾನಕ ಕತೆ