More

    ಪಾಕ್​ನಲ್ಲಿ ಸಿಲುಕಿ ಭಾರತಕ್ಕೆ ಬಂದು ಪಾಲಕರಿಗಾಗಿ ಹುಡುಕುತ್ತಿರುವ ಮೂಕಿಯೊಬ್ಬಳ ಮನಕಲಕುವ ಕಥೆಯಿದು…

    ನಾಂದೇಡ್ (ಮಹಾರಾಷ್ಟ್ರ): ಸುಮಾರು 20 ವರ್ಷಗಳ ಹಿಂದಿನ ಕಥೆಯಿದು. ಏಳೆಂಟು ವರ್ಷದ ಮಹಾರಾಷ್ಟ್ರದ ಬಾಲೆ ಗೀತಾ ಅದ್ಹೇಗೋ ತಪ್ಪಿಸಿಕೊಂಡು ಪಾಕಿಸ್ತಾನದ ಗಡಿಯೊಳಕ್ಕೆ ಹೋಗಿಬಿಟ್ಟಳು. ದಿಕ್ಕೆಟ್ಟು ಹೋದ ಈ ಬಾಲಕಿಗೆ ಏನು ಮಾಡಬೇಕು ಎನ್ನುವುದೇ ತಿಳಿಯಲಿಲ್ಲ.

    ತಾನಿಲ್ಲೆದ್ದೇನೆ, ಇದ್ಯಾವ ಊರು ಏನೂ ಅರಿಯದೇ ಕಂಗಾಲಾಗಿ ಹೋದಳು ಈ ಬಾಲಕಿ, ಹುಟ್ಟಿದಾನಿಗಿಂದಲೂ ರೈಲು ನಿಲ್ದಾಣದ ಆಸುಪಾಸಿನಲ್ಲಿಯೇ ವಾಸವಾಗಿದ್ದ ಗೀತಾಳಿಗೆ ಅಲ್ಲಿ ರೈಲೊಂದು ಕಂಡಿತು. ಕೂಡಲೇ ಅವಳು ಆ ರೈಲನ್ನು ಹತ್ತಿದಳು. ಅದು ಪಾಕಿಸ್ತಾನದ ಲಾಹೋರ್‌ನ ಸಂಜೋತಾ ಎಕ್ಸ್‌ಪ್ರೆಸ್‌ ರೈಲಾಗಿತ್ತು.

    ಎಲ್ಲರೂ ಇಳಿದರೂ ಈ ಬಾಲಕಿಗೆ ಮಾತ್ರ ಏನು ಮಾಡಬೇಕು ಎಂದೇ ತಿಳಿಯಲಿಲ್ಲ. ಅಕ್ಷರಶಃ ಬೆದರಿ ಹೋಗಿದ್ದಳು. ಕಣ್ಣೀರು ಸುರಿಸುತ್ತಾ ಕುಳಿತುಬಿಟ್ಟಳು. ಅದೇ ವೇಳೆ ಈಕೆ ಪಾಕಿಸ್ತಾನದ ಪೊಲೀಸರ ಕಣ್ಣಿಗೆ ಬಿದ್ದಿದ್ದಾಳೆ. ಅವರು ಹೆಸರು, ಊರು, ವಿಳಾಸ ಎಲ್ಲಾ ಕೇಳಿದ್ದಾರೆ. ಅವರು ಏನು ಹೇಳುತ್ತಿದ್ದಾರೆ ಎನ್ನುವುದು ಈ ಬಾಲಕಿಗೆ ತಿಳಿಯಲೇ ಇಲ್ಲ, ಏಕೆಂದರೆ ಅವಳಿಗೆ ಮಾತನಾಡಲೂ ಬರುತ್ತಿರಲಿಲ್ಲ, ಕಿವಿಯೂ ಕೇಳಿಸುತ್ತಿರಲಿಲ್ಲ.

    ಪಾಕ್​ನಲ್ಲಿ ಸಿಲುಕಿ ಭಾರತಕ್ಕೆ ಬಂದು ಪಾಲಕರಿಗಾಗಿ ಹುಡುಕುತ್ತಿರುವ ಮೂಕಿಯೊಬ್ಬಳ ಮನಕಲಕುವ ಕಥೆಯಿದು...

    ಬಾಲಕಿ ಕಿವುಡಿ ಹಾಗೂ ಮೂಕಿ ಎನ್ನುವುದು ಪೊಲೀಸರಿಗೆ ತಿಳಿಯಿತು. ಭಾರತದವಳು ಇರಬೇಕು ಎಂದು ಆಕೆಯ ವೇಷಭೂಷಣ ನೋಡಿ ಪೊಲೀಸರಿಗೆ ಅನ್ನಿಸಿತು. ಅವರು ಬಾಲಕಿಯನ್ನು ಲಾಹೋರ್​ನ ಇದಾಹಿ ಪ್ರತಿಷ್ಠಾನಕ್ಕೆ ಒಪ್ಪಿಸಿದರು. ಮಕ್ಕಳನ್ನು ನೋಡಿಕೊಳ್ಳುವ ಸಂಸ್ಥೆ ಅದು. ಅಲ್ಲಿ ಗೀತಾಳನ್ನು ದತ್ತು ಪಡೆದು ಸಾಕಲಾಯಿತು.

    ಹತ್ತಾರು ವರ್ಷ ಗೀತಾ ಪಾಕಿಸ್ತಾನದಲ್ಲಿಯೇ ಕಳೆದಳು. ಅದು 2015ರ ಸಮಯ. ಆಗ ವಿದೇಶಾಂಗ ವ್ಯವಹಾರಗಳ ಸಚಿವಾಗಿ ಸುಷ್ಮಾ ಸ್ವರಾಜ್​ ಅಧಿಕಾರ ಸ್ವೀಕರಿಸಿದ್ದರು. ಭಾರತದ ಓರ್ವ ಬಾಲಕಿ ಪಾಕಿಸ್ತಾನದಲ್ಲಿ ಸಿಲುಕಿರುವುದು ಅವರಿಗೆ ತಿಳಿಯಿತು. ಕೂಡಲೇ ಅವರು ಪಾಕಿಸ್ತಾನವನ್ನು ಸಂಪರ್ಕಿಸಿ ಮಧ್ಯಪ್ರದೇಶದ ಇಂದೋರ್​ಗೆ ಕರೆತಂದರು. ಇಂದೋರ್‌ನಲ್ಲಿರುವ ಶ್ರವಣ ದೋಷ ವ್ಯಕ್ತಿಗಳಿಗಾಗಿ ಕೆಲಸ ಮಾಡುತ್ತಿರುವ ಆನಂದ್ ಸೇವಾ ಸಮಾಜ ಎಂಬ ಸ್ವಯಂ ಸೇವಾಸಂಸ್ಥೆಯಲ್ಲಿ ಆಶ್ರಯ ಒದಗಿಸಿದರು.

    ಸುಷ್ಮಾ ಸ್ವರಾಜ್ ಅವರು ಈಕೆಯನ್ನು ‘ಹಿಂದೂಸ್ತಾನ್ ಕಿ ಬೇಟಿ’ (ಭಾರತದ ಮಗಳು) ಎಂದು ಕರೆದಿದ್ದರು. ಜತೆಗೆ ಆಕೆಯ ಪಾಲಕರನ್ನು ಪೋಷಕರನ್ನು ಹುಡುಕಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಸಾಕಷ್ಟು ಪ್ರಯತ್ನ ಕೂಡ ನಡೆಸಿದ್ದರು. ಆದರೆ ಎಲ್ಲವೂ ವಿಫಲವಾಗಿತ್ತು.
    ಅಚ್ಚರಿಯ ಎಂದರೆ ಪಾಲಕರಿಗಾಗಿ ಸುಷ್ಮಾ ಸ್ವರಾಜ್​ ಅವರು ಪ್ರಯತ್ನ ಮಾಡುತ್ತಿರುವಾಗಲೇ ಅನೇಕ ಮಂದಿ ತಾವೇ ಈಕೆಯ ಪಾಲಕರು ಎಂದು ಹೇಳಿಕೊಂಡು ಬಂದಿದ್ದರು. ಆದರೆ ಗೀತಾ ಯಾರನ್ನೂ ಗುರುತ ಹಿಡಿದಿರಲಿಲ್ಲ. ಅನುಮಾನದ ಹಿನ್ನೆಲೆಯಲ್ಲಿ ಗೀತಾಳನ್ನು ಯಾರೊಟ್ಟಿಗೂ ಕಳಿಸಿರಲಿಲ್ಲ.

    ಪಾಕ್​ನಲ್ಲಿ ಸಿಲುಕಿ ಭಾರತಕ್ಕೆ ಬಂದು ಪಾಲಕರಿಗಾಗಿ ಹುಡುಕುತ್ತಿರುವ ಮೂಕಿಯೊಬ್ಬಳ ಮನಕಲಕುವ ಕಥೆಯಿದು...

    ಈ ನಡುವೆಯೇ ಸುಷ್ಮಾ 2019ರ ಆಗಸ್ಟ್​ 6ರಂದು ಕೊನೆಯುಸಿರೆಳೆದರು. ಮಧ್ಯಪ್ರದೇಶ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆ ಈಕೆಯ ಮನೆ ಮತ್ತು ಕುಟುಂಬದವರ ಪತ್ತೆಗಾಗಿ ಪ್ರಯತ್ನಿಸುತ್ತಿದೆ.

    ಇದೀಗ ಗೀತಾಳ ಕುಟುಂಬದವರನ್ನು ಹುಡುಕೊಂಡು ಮಹಾರಾಷ್ಟ್ರದ ನಾಂದೇಡ್‌ಗೆ ಬರಲಾಗಿದೆ. ಸ್ವಯಂ ಸೇವಾ ಸಂಸ್ಥೆಯ ಸಂಜ್ಞಾ ಭಾಷಾ ತಜ್ಞ ಜ್ಞಾನೇಂದ್ರ ಪುರೋಹಿತ್ ಅವರ ನೆರವಿನೊಂದಿಗೆ ನಾಂದೇಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ, ‘ನನ್ನ ಪಾಲಕರನ್ನು ಹುಡುಕುವ ಪ್ರಯತ್ನದಲ್ಲಿದ್ದೇನೆ. ನನ್ನ ಮನೆ ಇಲ್ಲೇ ರೈಲ್ವೆ ನಿಲ್ದಾಣದ ಬಳಿ ಇದ್ದ ನೆನಪು. ಸಮೀಪದಲ್ಲಿ ನದಿ ಇತ್ತು. ದೇವಸ್ಥಾನವಿತ್ತು’ ಎಂದು ಮಾಹಿತಿ ಹಂಚಿಕೊಂಡಿದ್ದಾಳೆ.

    ತನ್ನ ಕುಟುಂಬ ಮಹಾರಾಷ್ಟ್ರದಲ್ಲಿರುವ ಬಗ್ಗೆ ಆಕೆಗೆ ತುಂಬ ನಂಬಿಕೆ ಇದೆ. , ಹಲವು ಚಿತ್ರಗಳನ್ನು ತೋರಿಸಿ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಹೋಲಿಕೆ ಎಂಬಂತೆ ನಾಂದೇಡ್‍ನಲ್ಲಿ ಕೆಲವು ಸಂಘಟನೆಗಳ ಸಹಕಾರದೊಂದಿಗೆ ಗೀತಾ ಕುಟುಂಬಸ್ಥರ ಪತ್ತೆ ಕಾರ್ಯ ನಡೆಯುತ್ತಿದೆ. ಆದರೆ ಇದುವರೆಗೂ ಈ ಭಾರತ್​ ಕೀ ಬೇಟಿಗೆ ಪಾಲಕರು ಸಿಕ್ಕಿಲ್ಲ.

    10 ಮದುವೆಯಾದರೂ ಸಿಕ್ಕಿಲ್ಲವಂತೆ ಸುಖ- ಗಂಡನಿಂದ ಈಕೆಗೆ ಬೇಕಾಗಿದ್ದೇನು ಅಂತ ಹೇಳಿದ್ದಾಳೆ ಕೇಳಿ…

    ಉಲ್ಟಾ ಹೋದ ಮದುಮಗನ ಕುರ್ತಾ ಎಳೆದ ವಧು- ಫನ್ನಿ ವಿಡಿಯೋ ವೈರಲ್​

    ಮೂರು ಬಾರಿ ಶಾಸಕಿಯಾಗಿದ್ದ ಮಾಜಿ ಸಚಿವೆ ರೇಣುಕಾ ರಾಜೇಂದ್ರನ್​ ನಿಧನ

    ಸ್ನೇಹಿತರು ಲಕ್ಷಲಕ್ಷ ಸಂಪಾದಿಸ್ತಿದ್ರೆ ನಾನು ಸಾವಿರದಲ್ಲೇ ಇದ್ದೇನೆ- ಡಿಪ್ರೆಷನ್​ಗೆ ಹೋಗುತ್ತಿರುವೆ, ಏನು ಮಾಡಲಿ?

    ಲಾಕ್​ಡೌನ್​ನಲ್ಲಿ ದಾಖಲೆ ಅದೃಷ್ಟ… ಈಕೆ ಮಾಡಿರುವ ಅಡುಗೆಯ ಕೇಳಿ ದಂಗಾಗುವುದು ಗ್ಯಾರೆಂಟಿ…

    ಮಧ್ಯಾಹ್ನ ಮುಹೂರ್ತ ಇದ್ರೆ, ವರ ಬಂದದ್ದು ರಾತ್ರಿ! ಕೋಪದಿಂದ ಬೇರೆಯವರನ್ನು ಮದ್ವೆಯಾದ ವಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts