ಬೆಂಗಳೂರು: ಕಳೆದ ಅನೇಕ ದಿನಗಳಿಂದ ಭಾರಿ ಸದ್ದು ಮಾಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕೀಹೊಳಿ ಅವರ ಸಿಡಿ ಪ್ರಕರಣ ನಾಳೆ ಅಂತ್ಯ ಕಾಣುವ ಸಾಧ್ಯತೆ ಇದೆ. ಏಕೆಂದರೆ ನ್ಯಾಯಾಧೀಶರ ಮುಂದೆ ಸಿಡಿಯಲ್ಲಿರುವ ಯುವತಿ ಹಾಜರಾಗುವ ಸಾಧ್ಯತೆ ಇದೆ.
ಈ ಕುರಿತು ಯುವತಿಯ ಪರ ವಕೀಲರು ಹೇಳಿಕೆ ನೀಡಿದ್ದಾರೆ. ಫೇಸ್ಬುಕ್ ಲೈವ್ನಲ್ಲಿ ಬಂದು ಹೇಳಿಕೆ ನೀಡಿರುವ ವಕೀಲ ಜಗದೀಶ್ ಅವರು, ನ್ಯಾಯಾಧೀಶರು ಅನುಮತಿ ನೀಡಿದ್ರೆ ನಾಳೆ ಯುವತಿ ಹಾಜರು ಮಾಡಲಾಗುವುದು ಎಂದು ಹೇಳಿದ್ದಾರೆ.
ಪೊಲೀಸರು, ತನಿಖಾಧಿಕಾರಿಗಳ ಮೇಲೆ ಆರೋಪಿಯ ಪ್ರಭಾವ ಹೆಚ್ಚಾಗಿದೆ. ಈ ಕೇಸ್ನಲ್ಲಿ ಸರಿಯಾದ ತನಿಖೆ ಸಾಧ್ಯನೇ ಇಲ್ಲ. ಪೊಲೀಸರು ತನಿಖೆ ಸಂಪೂರ್ಣ ದಿಕ್ಕು ತಪ್ಪಿಸಿದ್ದಾರೆ. ಆದ್ದರಿಂದ ಇದಕ್ಕೆ ತಾರ್ಕಿಕ ಅಂತ್ಯವಾಗಬೇಕು ಎಂದರೆ ಯುವತಿ ಕೋರ್ಟ್ ಮುಂದೆ ಹಾಜರಾಗಬೇಕು, ಆರೋಪಿಗೂ ಸಹ ಮೆಡಿಕಲ್ ಟೆಸ್ಟ್ ಮಾಡಲೇಬೇಕು ಎಂದು ವಕೀಲ ಜಗದೀಶ್ ಹೇಳಿದ್ದಾರೆ.
ಒಬ್ಬ ಕಾಮನ್ ಮ್ಯಾನ್ ಹೀಗೆ ಮಾಡಿದ್ರೆ ಸುಮ್ನೆ ಇರ್ತಿದ್ರಾ? ಆದರೆ ಇಲ್ಲಿ ಏನೇನೋ ನಡೆಯುತ್ತಿದೆ. ಎಲ್ಲವೂ ಬಹಿರಂಗವಾಗಬೇಕು ಎಂದರೆ ಕೋರ್ಟ್ ಮುಂದೆ ಯುವತಿ ಹಾಜರು ಆಗಬೇಕು. ಆದ್ದರಿಂದ ನ್ಯಾಯಾಧೀಶರು ಅನುಮತಿ ನೀಡಿದರೆ ಅವರನ್ನು ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಸದ್ಯ ಎಲ್ಲರ ಚಿತ್ತ ನಾಳೆಯತ್ತ ಹರಿದಿದೆ. ಅದೇ ಇನ್ನೊಂದೆಡೆ, ಯುವತಿಯೇನಾದರೂ ಸತ್ಯ ಬಹಿರಂಗಪಡಿಸಿದರೆ, ಈ ಪ್ರಕರಣದಲ್ಲಿ ನಿಜವಾದ ಕಳ್ಳರು ಯಾರಿದ್ದಾರೆ ಅವರು ಸಿಲುಕಿಕೊಳ್ಳುವ ಸಾಧ್ಯತೆ ಇದ್ದು, ಸದ್ಯ ಅವರ ಎದೆಯಲ್ಲಿ ಡವಡವ ಶುರುವಾಗಿರುವುದಂತೂ ನಿಜ.
ಡಿಕೆಶಿಗಾಗಿಯೇ ಗೋವಾಕ್ಕೆ ಹೋಗಿದ್ದೆ ಎಂದ ಸಿಡಿ ಲೇಡಿ: ಯಾರ್ರಿ ಅವಳು ಅಂದ್ರು ‘ಬಂಡೆ’
ಸಿಡಿನಾ? ಅದ್ಯಾವುದು? … ನಂಗೆ ಗೊತ್ತೇ ಇಲ್ಲ… ನಿಮಗೇ ಚೆನ್ನಾಗಿ ಗೊತ್ತಿರ್ಬೇಕಲ್ಲಮ್ಮಾ… ಎಂದು ನಕ್ಕ ಸಿಎಂ
ನನ್ನ ಜೇಬಲ್ಲಿ ಬಾಂಬ್ ಇದೆ… ತಡ್ಕೊಳಿ… ಸದ್ಯ ಗಪ್ಚುಪ್ ಇದ್ದೇನೆ… ಹೊರಹಾಕಿದ್ರೆ ಅಷ್ಟೇ…