More

    ಡಿಕೆಶಿಗಾಗಿಯೇ ಗೋವಾಕ್ಕೆ ಹೋಗಿದ್ದೆ ಎಂದ ಸಿಡಿ ಲೇಡಿ: ಯಾರ್ರಿ ಅವಳು ಅಂದ್ರು ‘ಬಂಡೆ’

    ಬೆಂಗಳೂರು: ಜಾರಕಿಹೊಳಿ ಹಾಗೂ ಸಿಡಿ ಲೇಡಿಯ ವಿವಾದ ಸದ್ಯ ಮುಗಿಯುವಂತೆ ಕಾಣುತ್ತಿಲ್ಲ. ಕ್ಷಣ ಕ್ಷಣಕ್ಕೂ ಒಂದೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಸದ್ಯಕ್ಕಂತೂ ಈ ಪ್ರಕರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಬುಡಕ್ಕೆ ಬಂದಿದ್ದು, ಕ್ಷಣಕ್ಕೊಂದು ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ.

    ಈ ನಡುವೆ ಒಂದರ ಮೇಲೊಂದರಂತೆ ವಿಡಿಯೋ ಬಿಡುಗಡೆ ಮಾಡುತ್ತಿರುವ ಸಿಡಿ ಲೇಡಿ, ಡಿ.ಕೆ.ಶಿವಕುಮಾರ್​ ಅವರ ಹೆಸರು ಪ್ರಸ್ತಾಪ ಮಾಡಿರುವುದು ಸದ್ಯ ಕಾಂಗ್ರೆಸ್​ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಮಾಡಲು ಶುರು ಮಾಡಿದೆ.

    ವಿಡಿಯೋದಲ್ಲಿ ಡಿ.ಕೆ.ಶಿವಕುಮಾರ್​ ಅವರು ನನಗೆ ಗೊತ್ತು. ಮಾರ್ಚ್ 2ರಂದು ಅವರ ಭೇಟಿಗಾಗಿ ಗೋವಾಗೆ ಹೋಗಿದ್ದೆ ಎಂದು ಸಿಡಿ ಲೇಡಿ ವಿಡಿಯೋದಲ್ಲಿ ಹೇಳಿದ್ದಾಳೆ. ಆದರೆ ಇತ್ತ ಇನ್ನೊಂದೆಡೆ, ಡಿ.ಕೆ.ಶಿವಕುಮಾರ್​, ನನಗೆ ಆ ಯುವತಿ ಯಾರು ಎಂದು ಗೊತ್ತೇ ಇಲ್ಲ. ನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ.

    ಸತ್ಯ ಯಾವುದು, ಸುಳ್ಳು ಯಾವುದು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಸದ್ಯ ತನಿಖಾಧಿಕಾರಿಗಳಿಗೂ ಇದು ತಲೆನೋವಾಗಿದೆ.

    ಆದರೆ ಇಬ್ಬರ ಹೇಳಿಕೆಯಲ್ಲಿಯೂ ಈ ಇಡೀ ಪ್ರಕರಣದ ಮಾಸ್ಟರ್​ಮೈಂಡ್​ ನರೇಶ್​ ಹೆಸರು ಪ್ರಸ್ತಾಪ ಆಗಿರುವ ಹಿನ್ನೆಲೆಯಲ್ಲಿ ಸಿಡಿ ಹಿಂದಿರುವ ಸಂಪೂರ್ಣ ತಲೆ ಅವನದ್ದೇ ಎನ್ನುವ ಬಗ್ಗೆ ಗುಮಾನಿ ಶುರುವಾಗಿದೆ. ನಿನ್ನೆ ಟೆಕ್ನಿಕಲ್ ಸೆಲ್​ಗೆ ವಿಚಾರಣೆಗೆ ಹಾಜರಾದ ಯುವತಿಯ ಸಹೋದರನಿಂದಲೂ ನರೇಶ್ ಹೆಸರು ಪ್ರಸ್ತಾಪವಾಗಿತ್ತು. ನರೇಶ್ ಅಣತೆಯಂತೆ ವಿಡಿಯೋ ಮಾಡಿ ಸಿಡಿಲೇಡಿ ಬಿಡುಗಡೆ ಮಾಡುತ್ತಿರುವ ಸಂದೇಹ ಶುರುವಾಗಿದೆ. ಸಿಡಿ ಲೇಡಿ ಮತ್ತು ಶಿವಕುಮಾರ್​ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿರುವ ಸಂದೇಹವೂ ವ್ಯಕ್ತವಾಗಿದೆ.

    ಸಿಡಿ ಲೇಡಿ ಹೊಸ ವಿಡಿಯೋ ರಿಲೀಸ್​! ಇವರ ರಹಸ್ಯ ಬಿಚ್ಚಿಡ್ತೀನಿ, ಹೆಲ್ಪ್ ಮಾಡಿ ಎಂದ ಸಂತ್ರಸ್ತೆ!

    ಸಿಡಿ ಲೇಡಿ ಇಲ್ಲೇ ಇದ್ದಾಳೆ! ಸುಮ್ಮನೆ ಎಲ್ಲೆಲ್ಲೋ ಹುಡುಕ್ತಿದ್ರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts