ಬೆಂಗಳೂರು: ಜಾರಕಿಹೊಳಿ ಹಾಗೂ ಸಿಡಿ ಲೇಡಿಯ ವಿವಾದ ಸದ್ಯ ಮುಗಿಯುವಂತೆ ಕಾಣುತ್ತಿಲ್ಲ. ಕ್ಷಣ ಕ್ಷಣಕ್ಕೂ ಒಂದೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಸದ್ಯಕ್ಕಂತೂ ಈ ಪ್ರಕರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬುಡಕ್ಕೆ ಬಂದಿದ್ದು, ಕ್ಷಣಕ್ಕೊಂದು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಈ ನಡುವೆ ಒಂದರ ಮೇಲೊಂದರಂತೆ ವಿಡಿಯೋ ಬಿಡುಗಡೆ ಮಾಡುತ್ತಿರುವ ಸಿಡಿ ಲೇಡಿ, ಡಿ.ಕೆ.ಶಿವಕುಮಾರ್ ಅವರ ಹೆಸರು ಪ್ರಸ್ತಾಪ ಮಾಡಿರುವುದು ಸದ್ಯ ಕಾಂಗ್ರೆಸ್ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಮಾಡಲು ಶುರು ಮಾಡಿದೆ.
ವಿಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಅವರು ನನಗೆ ಗೊತ್ತು. ಮಾರ್ಚ್ 2ರಂದು ಅವರ ಭೇಟಿಗಾಗಿ ಗೋವಾಗೆ ಹೋಗಿದ್ದೆ ಎಂದು ಸಿಡಿ ಲೇಡಿ ವಿಡಿಯೋದಲ್ಲಿ ಹೇಳಿದ್ದಾಳೆ. ಆದರೆ ಇತ್ತ ಇನ್ನೊಂದೆಡೆ, ಡಿ.ಕೆ.ಶಿವಕುಮಾರ್, ನನಗೆ ಆ ಯುವತಿ ಯಾರು ಎಂದು ಗೊತ್ತೇ ಇಲ್ಲ. ನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ.
ಸತ್ಯ ಯಾವುದು, ಸುಳ್ಳು ಯಾವುದು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಸದ್ಯ ತನಿಖಾಧಿಕಾರಿಗಳಿಗೂ ಇದು ತಲೆನೋವಾಗಿದೆ.
ಆದರೆ ಇಬ್ಬರ ಹೇಳಿಕೆಯಲ್ಲಿಯೂ ಈ ಇಡೀ ಪ್ರಕರಣದ ಮಾಸ್ಟರ್ಮೈಂಡ್ ನರೇಶ್ ಹೆಸರು ಪ್ರಸ್ತಾಪ ಆಗಿರುವ ಹಿನ್ನೆಲೆಯಲ್ಲಿ ಸಿಡಿ ಹಿಂದಿರುವ ಸಂಪೂರ್ಣ ತಲೆ ಅವನದ್ದೇ ಎನ್ನುವ ಬಗ್ಗೆ ಗುಮಾನಿ ಶುರುವಾಗಿದೆ. ನಿನ್ನೆ ಟೆಕ್ನಿಕಲ್ ಸೆಲ್ಗೆ ವಿಚಾರಣೆಗೆ ಹಾಜರಾದ ಯುವತಿಯ ಸಹೋದರನಿಂದಲೂ ನರೇಶ್ ಹೆಸರು ಪ್ರಸ್ತಾಪವಾಗಿತ್ತು. ನರೇಶ್ ಅಣತೆಯಂತೆ ವಿಡಿಯೋ ಮಾಡಿ ಸಿಡಿಲೇಡಿ ಬಿಡುಗಡೆ ಮಾಡುತ್ತಿರುವ ಸಂದೇಹ ಶುರುವಾಗಿದೆ. ಸಿಡಿ ಲೇಡಿ ಮತ್ತು ಶಿವಕುಮಾರ್ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿರುವ ಸಂದೇಹವೂ ವ್ಯಕ್ತವಾಗಿದೆ.
ಸಿಡಿ ಲೇಡಿ ಹೊಸ ವಿಡಿಯೋ ರಿಲೀಸ್! ಇವರ ರಹಸ್ಯ ಬಿಚ್ಚಿಡ್ತೀನಿ, ಹೆಲ್ಪ್ ಮಾಡಿ ಎಂದ ಸಂತ್ರಸ್ತೆ!