ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ನ ಯುವತಿ ಎಲ್ಲಿದ್ದಾಳೆ? ಕಳೆದ 25 ದಿನಗಳಿಂದ ಅಜ್ಞಾತ ಸ್ಥಳದಲ್ಲಿರುವ ಸಿಡಿ ಲೇಡಿ ಮತ್ತು ಪ್ರಕರಣದ ಕಿಂಗ್ಪಿನ್ ನರೇಶ್ಗೌಡ ಹಾಗೂ ಹ್ಯಾಕರ್ ಶ್ರವಣ್ಗಾಗಿ ಎಸ್ಐಟಿ ಪೊಲೀಸರು ಗೋವಾ, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲೂ ಹುಡುಕಾಟ ನಡೆಸಿದ್ದಾರೆ. ಕಿಂಗ್ಪಿನ್ ಮತ್ತು ಹ್ಯಾಕರ್ ಉತ್ತರ ಭಾರತದಲ್ಲಿದ್ದಾರೆ ಎನ್ನಲಾಗುತ್ತಿದ್ದು, ಸಿಡಿ ಲೇಡಿ ಮಾತ್ರ ಕರ್ನಾಟಕದಲ್ಲೇ ಇದ್ದಾಳೆ!
ಇಂದು ಸಿಕ್ಕ ಮಾಹಿತಿ ಪ್ರಕಾರ ಸಿಡಿ ಯುವತಿ ಬೆಂಗಳೂರು ಹೊರಹೊಲಯದಲ್ಲೇ ಇದ್ದಾಳಂತೆ. ಕಾರು ಚಾಲಕ ಪರಶಿವಮೂರ್ತಿ ಎಂಬಾತ ಈಕೆಯ ಜತೆಯಲ್ಲಿದ್ದಾನಂತೆ. ಉದ್ಯಮಿ ಶಿವಕುಮಾರ್ರ ಕಾರು ಚಾಲಕ ಪರಶಿವಮೂರ್ತಿ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಆಸುಪಾಸಿನಲ್ಲೇ ಇದ್ದುಕೊಂಡು ಯುವತಿ ಅಲ್ಲಿಂದಲೇ ವಿಡಿಯೋ ಮಾಡಿ ಕಳಿಸುತ್ತಿದ್ದಾಳೆ ಎನ್ನಲಾಗುತ್ತಿದೆ. ರೂಂ ಚೆಕ್ಔಟ್ ಮಾಡಲು ಕೆಲವೇ ಕ್ಷಣ ಇರುವಾಗ ವಿಡಿಯೋ ಮಾಡಿ ಮೊಬೈಲ್ ಮೂಲಕ ಕಳಿಸಿ ಬಳಿಕ ಆಫ್ ಮೊಬೈಲ್ ಅನ್ನು ಆಫ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಇಂದು ಎಸ್ಐಟಿ ವಿಚಾರಣೆಯನ್ನು ಯುವತಿಯ ಪೋಷಕರು ಎದುರಿಸಿದ್ದಾರೆ. ನನ್ನ ಮಗಳು ಅಮಾಯಕಿ, ಆಕೆ ಅಪಾಯದಲ್ಲಿದ್ದಾಳೆ. ಮೊದಲು ಅವಳನ್ನು ರಕ್ಷಿಸಿ. ಅವಳು ಯಾರದ್ದೋ ಮಾತು ಕೇಳುತ್ತಿರಬಹುದು ಎಂದು ಎಸ್ಐಟಿ ಪೊಲೀಸರ ಮುಂದೆ ಸಿಡಿ ಲೇಡಿಯ ತಾಯಿ ಕಣ್ಣೀರಿಟ್ಟಿದ್ದಾರೆ.
ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ
ನನ್ನ ಮಗಳು ಅಂಥವಳಲ್ಲ ಎಂದು ಕಣ್ಣೀರಿಟ್ಟ ತಾಯಿ! ನನ್ನ ಅಕ್ಕ ಶ್ರೀಕೃಷ್ಣನ ಭಕ್ತೆ, ಆಕೆಯದ್ದು ಏನೂ ತಪ್ಪಿಲ್ಲ ಎಂದ ತಮ್ಮ…