More

    ಸಿಡಿ ಲೇಡಿ ಇಲ್ಲೇ ಇದ್ದಾಳೆ! ಸುಮ್ಮನೆ ಎಲ್ಲೆಲ್ಲೋ ಹುಡುಕ್ತಿದ್ರು…

    ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಎಲ್ಲಿದ್ದಾಳೆ? ಕಳೆದ 25 ದಿನಗಳಿಂದ ಅಜ್ಞಾತ ಸ್ಥಳದಲ್ಲಿರುವ ಸಿಡಿ ಲೇಡಿ ಮತ್ತು ಪ್ರಕರಣದ ಕಿಂಗ್​ಪಿನ್​ ನರೇಶ್​ಗೌಡ ಹಾಗೂ ಹ್ಯಾಕರ್​ ಶ್ರವಣ್​ಗಾಗಿ ಎಸ್​ಐಟಿ ಪೊಲೀಸರು ಗೋವಾ, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲೂ ಹುಡುಕಾಟ ನಡೆಸಿದ್ದಾರೆ. ಕಿಂಗ್​ಪಿನ್​ ಮತ್ತು ಹ್ಯಾಕರ್​ ಉತ್ತರ ಭಾರತದಲ್ಲಿದ್ದಾರೆ ಎನ್ನಲಾಗುತ್ತಿದ್ದು, ಸಿಡಿ ಲೇಡಿ ಮಾತ್ರ ಕರ್ನಾಟಕದಲ್ಲೇ ಇದ್ದಾಳೆ!

    ಇಂದು ಸಿಕ್ಕ ಮಾಹಿತಿ ಪ್ರಕಾರ ಸಿಡಿ ಯುವತಿ ಬೆಂಗಳೂರು ಹೊರಹೊಲಯದಲ್ಲೇ ಇದ್ದಾಳಂತೆ. ಕಾರು ಚಾಲಕ ಪರಶಿವಮೂರ್ತಿ ಎಂಬಾತ ಈಕೆಯ ಜತೆಯಲ್ಲಿದ್ದಾನಂತೆ. ಉದ್ಯಮಿ ಶಿವಕುಮಾರ್​ರ ಕಾರು ಚಾಲಕ ಪರಶಿವಮೂರ್ತಿ ಎಂಬ ಮಾಹಿತಿ ಲಭ್ಯವಾಗಿದೆ.

    ಬೆಂಗಳೂರು ಆಸುಪಾಸಿನಲ್ಲೇ ಇದ್ದುಕೊಂಡು ಯುವತಿ ಅಲ್ಲಿಂದಲೇ ವಿಡಿಯೋ ಮಾಡಿ ಕಳಿಸುತ್ತಿದ್ದಾಳೆ ಎನ್ನಲಾಗುತ್ತಿದೆ. ರೂಂ ಚೆಕ್​ಔಟ್​ ಮಾಡಲು ಕೆಲವೇ ಕ್ಷಣ ಇರುವಾಗ ವಿಡಿಯೋ ಮಾಡಿ ಮೊಬೈಲ್​ ಮೂಲಕ ಕಳಿಸಿ ಬಳಿಕ ಆಫ್​ ಮೊಬೈಲ್​ ಅನ್ನು ಆಫ್​ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ನಡುವೆ ಇಂದು ಎಸ್​ಐಟಿ ವಿಚಾರಣೆಯನ್ನು ಯುವತಿಯ ಪೋಷಕರು ಎದುರಿಸಿದ್ದಾರೆ. ನನ್ನ ಮಗಳು ಅಮಾಯಕಿ, ಆಕೆ ಅಪಾಯದಲ್ಲಿದ್ದಾಳೆ. ಮೊದಲು ಅವಳನ್ನು ರಕ್ಷಿಸಿ. ಅವಳು ಯಾರದ್ದೋ ಮಾತು ಕೇಳುತ್ತಿರಬಹುದು ಎಂದು ಎಸ್​ಐಟಿ ಪೊಲೀಸರ ಮುಂದೆ ಸಿಡಿ ಲೇಡಿಯ ತಾಯಿ ಕಣ್ಣೀರಿಟ್ಟಿದ್ದಾರೆ.

    ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

    ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…

    ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

    ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

    ನನ್ನ ಮಗಳು ಅಂಥವಳಲ್ಲ ಎಂದು ಕಣ್ಣೀರಿಟ್ಟ ತಾಯಿ! ನನ್ನ ಅಕ್ಕ ಶ್ರೀಕೃಷ್ಣನ ಭಕ್ತೆ, ಆಕೆಯದ್ದು ಏನೂ ತಪ್ಪಿಲ್ಲ ಎಂದ ತಮ್ಮ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts