ಬೆಂಗಳೂರು: ಇದೀಗ ಚಾಮರಾಜನಗರ ಕ್ಷೇತ್ರದಲ್ಲಿ ಚುನಾವಣೆಗೆ ಇಳಿಯಲು ತಯಾರಿ ನಡೆಸುತ್ತಿದ್ದ ಸೈಲೆಂಟ್ ಸುನೀಲ್ಗೆ ಬೆಂಗಳೂರು ಪೊಲೀಸ್ರು ಕೊನೆಗೂ ಶಾಕ್ ಕೊಟ್ಟಿದ್ದಾರೆ.
ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಲೆಂಟ್ ಸುನೀಲ್ ವಾಸ ಮಾಡುತ್ತಿದ್ದ . ಈ ಹಿನ್ನೆಲೆಯಲ್ಲಿ ಅಮೃತಹಳ್ಳಿ ಪೊಲೀಸರು ಸಿಆರ್ಪಿ ಸೆಕ್ಷನ್ 110 ಅಡಿಯಲ್ಲಿ ಬೌಂಡ್ ಒವರ್ ಮಾಡಿದ್ದಾರೆ. ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಗೆ ತಯಾರಿ ಸೈಲೆಂಟ್ ಸುನೀಲ್ ನಡೆಸಿದ್ದ. ಹೀಗಾಗಿ ಪೊಲೀಸರು ಠಾಣೆಗೆ ಕರೆಸಿದ್ದು ಈ ಸಂದರ್ಭ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಸುನಿಲ್ಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು ಬರೋಬ್ಬರಿ ಹದಿನೈದು ಲಕ್ಷ ಬಾಂಡ್ ಬರೆಸಿದ್ದು ಯಾವುದೇ ಅಪರಾಧ ಕೃತ್ಯದಲ್ಲಿ ಹಾಗೂ ರಾಜಕೀಯ ವಿಚಾರಕ್ಕೆ ಅಕ್ರಮವಾಗಿ ಎಂಟ್ರಿಯಾಗುವಂತಿಲ್ಲ ಎಂದು ವಾರ್ನ್ ಮಾಡಲಾಗಿದೆ.