More

    ಚುನಾವಣೆಗೆ ನಿಲ್ಲೋಕೆ ತಯಾರಿ ನಡೆಸಿದ್ದ​ ಸೈಲೆಂಟ್ ಸುನೀಲ್​ಗೆ ಪೊಲೀಸ್ ಬಿಸಿ..!

    ಬೆಂಗಳೂರು: ಇದೀಗ ಚಾಮರಾಜನಗರ ಕ್ಷೇತ್ರದಲ್ಲಿ ಚುನಾವಣೆಗೆ ಇಳಿಯಲು ತಯಾರಿ ನಡೆಸುತ್ತಿದ್ದ ಸೈಲೆಂಟ್ ಸುನೀಲ್​ಗೆ ಬೆಂಗಳೂರು ಪೊಲೀಸ್​ರು ಕೊನೆಗೂ ಶಾಕ್ ಕೊಟ್ಟಿದ್ದಾರೆ.

    ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಲೆಂಟ್ ಸುನೀಲ್ ವಾಸ ಮಾಡುತ್ತಿದ್ದ . ಈ ಹಿನ್ನೆಲೆಯಲ್ಲಿ ಅಮೃತಹಳ್ಳಿ ಪೊಲೀಸರು ಸಿಆರ್​ಪಿ ಸೆಕ್ಷನ್​ 110 ಅಡಿಯಲ್ಲಿ ಬೌಂಡ್ ಒವರ್ ಮಾಡಿದ್ದಾರೆ. ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಗೆ ತಯಾರಿ ಸೈಲೆಂಟ್​ ಸುನೀಲ್ ನಡೆಸಿದ್ದ. ಹೀಗಾಗಿ ಪೊಲೀಸರು ಠಾಣೆಗೆ ಕರೆಸಿದ್ದು ಈ ಸಂದರ್ಭ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಸುನಿಲ್​ಗೆ ಎಚ್ಚರಿಕೆ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಪೊಲೀಸರು ಬರೋಬ್ಬರಿ ಹದಿನೈದು ಲಕ್ಷ ಬಾಂಡ್ ಬರೆಸಿದ್ದು ಯಾವುದೇ ಅಪರಾಧ ಕೃತ್ಯದಲ್ಲಿ ಹಾಗೂ ರಾಜಕೀಯ ವಿಚಾರಕ್ಕೆ ಅಕ್ರಮವಾಗಿ ಎಂಟ್ರಿಯಾಗುವಂತಿಲ್ಲ ಎಂದು ವಾರ್ನ್​ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts