ಬೆಂಗಳೂರು: ಹಾಲಿ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಗಮನಸೆಳೆದು ಪರ್ಪಲ್ ಕ್ಯಾಪ್ ರೇಸ್ನಲ್ಲಿರುವ ನಡುವೆಯೂ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಮುಂಬರುವ ಟಿ20 ವಿಶ್ವಕಪ್ ತಂಡದಿಂದ ಹೊರಗಿಡಲಾಗುತ್ತದೆ ಎನ್ನಲಾಗಿದೆ. ಕುಲದೀಪ್ ಯಾದವ್ ಮೊದಲ ಆಯ್ಕೆಯ ಸ್ಪಿನ್ನರ್ ಆಗಿದ್ದರೆ, ರವೀಂದ್ರ ಜಡೇಜಾ ಜತೆಗೆ ಆಲ್ರೌಂಡ್ ಸಾಮರ್ಥ್ಯದಿಂದ ಅಕ್ಷರ್ ಪಟೇಲ್ ಮತ್ತೋರ್ವ ಸ್ಪಿನ್ನರ್ ಆಗಿರುತ್ತಾರೆ. ರವಿ ಬಿಷ್ಣೋಯಿ ಕೂಡ ಅವಕಾಶ ವಂಚಿತರಾಗಲಿದ್ದಾರೆ ಎನ್ನಲಾಗಿದೆ.
ಇನ್ನು 4ನೇ ವೇಗಿ ಸ್ಥಾನಕ್ಕೆ ಸಂದೀಪ್ ಶರ್ಮ ಅಚ್ಚರಿಯ ಆಯ್ಕೆಯಾಗುವ ರೇಸ್ನಲ್ಲಿದ್ದಾರೆ. ಐಪಿಎಲ್ನಲ್ಲಿ ನಿಧಾನಗತಿ ಮಧ್ಯಮ ವೇಗದ ಎಸೆತಗಳಿಂದ ಸಂದೀಪ್ ಶರ್ಮ ಮಿಂಚುತ್ತಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದರೆ 4ನೇ ವೇಗಿ ಅಗತ್ಯವಿದೆಯೇ ಎಂಬ ಗೊಂದಲವೂ ಟೀಮ್ ಮ್ಯಾನೇಜ್ಮೆಂಟ್ಅನ್ನು ಕಾಡುತ್ತಿದೆ. ಇನ್ನು ಕೀಪರ್ ಸ್ಥಾನದ ರೇಸ್ನಲ್ಲಿ ಕೆಎಲ್ ರಾಹುಲ್ರನ್ನು ಸಂಜು ಸ್ಯಾಮ್ಸನ್ ಹಿಮ್ಮೆಟ್ಟಲಿದ್ದಾರೆ ಎನ್ನಲಾಗಿದೆ. ಶಿವಂ ದುಬೆ, ರಿಂಕು ಸಿಂಗ್ ಅವರಲ್ಲೊಬ್ಬರು ಅಥವಾ ಇಬ್ಬರೂ ಆಯ್ಕೆಯಾಗುವುದು ನಿಶ್ಚಿತವೆನಿಸಿದೆ.
ಟಿ20 ವಿಶ್ವಕಪ್ಗೆ ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್, ರಿಷಭ್ ಪಂತ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಿವಂ ದುಬೆ, ರಿಂಕು ಸಿಂಗ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಆವೇಶ್ ಖಾನ್/ಮೊಹಮದ್ ಸಿರಾಜ್.
ಇತರ ಪ್ರಮುಖ ಸ್ಪರ್ಧಿಗಳು: ಕೆಎಲ್ ರಾಹುಲ್, ಯಜುವೇಂದ್ರ ಚಾಹಲ್, ಶುಭಮಾನ್ ಗಿಲ್, ರವಿ ಬಿಷ್ಣೋಯಿ, ಸಂದೀಪ್ ಶರ್ಮ, ತಿಲಕ್ ವರ್ಮ.
ಆರ್ಚರಿ ವಿಶ್ವಕಪ್ನಲ್ಲಿ ಐತಿಹಾಸಿಕ ಪದಕ ಸಾಧನೆ ಮೆರೆದ ಭಾರತದ ಬಿಲ್ಗಾರರು