ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಶುಕ್ರವಾರ ಬೆಂಗಳೂರಿನಿಂದ ದುಬೈಗೆ ಪ್ರಯಾಣ ಬೆಳೆಸಲಿದೆ. ಬಳಿಕ ಅಲ್ಲಿ ಆಗಸ್ಟ್ 29ರಿಂದ 3 ವಾರಗಳ ಕಾಲ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಮುಖ್ಯ ಕೋಚ್ ಸೈಮನ್ ಕಾಟಿಚ್ ಶಿಬಿರದ ಮೇಲ್ವಿಚಾರಣೆ ವಹಿಸಲಿದ್ದಾರೆ. ದೇವದತ್ ಪಡಿಕಲ್ ಮತ್ತು ಪವನ್ ದೇಶಪಾಂಡೆ ತಂಡದಲ್ಲಿರುವ ಇಬ್ಬರು ಕರ್ನಾಟಕದ ಆಟಗಾರರಾಗಿದ್ದಾರೆ. ಕನ್ನಡಿಗ ಪ್ರವಿಣ್ ದುಬೆ ಸಹಿತ ಐವರು ನೆಟ್ ಬೌಲರ್ಗಳನ್ನೂ ಆರ್ಸಿಬಿ ತಂಡ ದುಬೈಗೆ ಕರೆದೊಯ್ಯಲಿದೆ.
ಆರ್ಸಿಬಿ ತಂಡ ಟೂನಿರ್ಯ ವೇಳೆ ದುಬೈನ ವಲ್ಡಾರ್ಫ್ ಹೋಟೆಲ್ನಲ್ಲಿ ಉಳಿದುಕೊಳ್ಳಲಿದ್ದು, 155 ಕೋಣೆ ಒಳಗೊಂಡ ಹೋಟೆಲ್ನ ಒಂದು ಬ್ಲಾಕ್ ಪೂರ್ತಿ ತಂಡಕ್ಕೆ ಬುಕ್ ಮಾಡಲಾಗಿದೆ. ಇದರಲ್ಲಿ ಜಿಮ್ ಮತ್ತು ಊಟದ ಕೋಣೆಯ ವ್ಯವಸ್ಥೆಯೂ ಇದೆ. ಈ ಬ್ಲಾಕ್ಗೆ ಪ್ರತ್ಯೇಕವಾದ ಹವಾನಿಯಂತ್ರಣ ವ್ಯವಸ್ಥೆ ಇರುತ್ತದೆ. ಸುರತೆಯ ದೃಷ್ಟಿಯಿಂದ ಹೋಟೆಲ್ನ ಎಲ್ಲ ಸಿಬ್ಬಂದಿ ಕೂಡ ಕೋವಿಡ್-19 ಪರೀಕ್ಷೆಗೆ ಒಳಪಡಲಿದ್ದಾರೆ ಎಂದು ಆರ್ಸಿಬಿ ಚೇರ್ಮನ್ ಸಂಜೀವ್ ಚುರಿವಾಲಾ ತಿಳಿಸಿದ್ದಾರೆ.
ತಂಡದ ಆಟಗಾರರು ಮತ್ತು ಸಿಬ್ಬಂದಿಯ ಕುಟುಂಬ ಸದಸ್ಯರು ಕೂಡ ಟೂನಿರ್ಯ ವೇಳೆ ಜೈವಿಕ-ಸುರಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ತಂಡದ ಹೆಚ್ಚಿನ ಆಟಗಾರರು ಈ ಬಾರಿ ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿಲ್ಲ ಎಂದು ತಿಳಿಸಿದ್ದಾರೆ. ಎಲ್ಲರ ಆರೋಗ್ಯ-ಸುರಕ್ಷೆಯನ್ನು ಕಾಪಾಡುವುದು ತಂಡದ ಪ್ರಮುಖ ಆದ್ಯತೆಯಾಗಿದೆ ಎಂದವರು ತಿಳಿಸಿದ್ದಾರೆ. 21 ಆಟಗಾರರು ಮತ್ತು ವೈದ್ಯರನ್ನೂ ಒಳಗೊಂಡ ಒಟ್ಟು 40 ಸದಸ್ಯರ ತಂಡವನ್ನು ಆರ್ಸಿಬಿ ಗುರುವಾರ ಪ್ರಕಟಿಸಿದೆ.
ಇದನ್ನೂ ಓದಿ: ಸಚಿನ್, ಕೊಹ್ಲಿ ಬ್ಯಾಟ್ ಸರಿಮಾಡಿಕೊಡುತ್ತಿದ್ದ ವ್ಯಕ್ತಿಯ ಬದುಕು ಬಿಗಡಾಯಿಸಿದ ಕರೊನಾ!
ದಕ್ಷಿಣ ಆಫ್ರಿಕಾದ ಆಟಗಾರರು ಆಗಸ್ಟ್ 22ರಂದು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಚುರಿವಾಲಾ ತಿಳಿಸಿದ್ದಾರೆ. ಆರ್ಸಿಬಿ ತಂಡ ದಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಕ್ರಿಸ್ ಮಾರಿಸ್ ಮತ್ತು ಡೇಲ್ ಸ್ಟೈನ್ ಅವರನ್ನೊಳಗೊಂಡಿದೆ.